ವೇತನ ಪರಿಷ್ಕರಣೆ ವಿಳಂಬ: ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ
Team Udayavani, Jul 4, 2017, 3:45 AM IST
ಪಾಂಡೇಶ್ವರ : ಬಿಎಸ್ಎನ್ಎಲ್ ನೌಕರರ ವೇತನ ಪರಿಷ್ಕರಣೆ ಬಗ್ಗೆ ಸರಕಾರದ ವಿಳಂಬ ನೀತಿ ವಿರೋಧಿಸಿ, ನ್ಯಾಷನಲ್ ಫೆಡರೇಷನ್ ಆಫ್ ಟೆಲಿ ಕಾಮ್ ಎಂಪ್ಲಾಯೀಸ್ ನೇತೃತ್ವದಲ್ಲಿ ಪಾಂಡೇಶ್ವರದ ಬಿಎಸ್ಎನ್ಎಲ್ನ ಜಿಲ್ಲಾ ಜನರಲ್ ಮ್ಯಾನೇಜರ್ ಆಫೀಸ್ ಆವರಣದಲ್ಲಿ ಎರಡು ದಿನಗಳ ಸರದಿ ಉಪವಾಸ ಮುಷ್ಕರವು ಸೋಮವಾರ ಆರಂಭಗೊಂಡಿತು.
ಈ ಮುಷ್ಕರವು ಮಂಗಳವಾರವೂ ಮುಂದುವರಿಯಲಿದೆ. ಕಂಪೆನಿಯ ಅಧಿಕಾರಿಯೇತರ ನೌಕರ ಸಂಘಟನೆಗಳು ಎನ್ಎಫ್ಟಿಇ ನೇತೃತ್ವದಲ್ಲಿ ಸಂಯುಕ್ತವಾಗಿ ರಚಿತವಾಗಿರುವ ಫೋರಂ ಆಫ್ ಬಿಎಸ್ಎನ್ಎಲ್ ಯೂನಿಯನ್, ಅಸೋ ಸಿಯೇಶನ್ನ ಕೇಂದ್ರ ಸಮಿತಿಯ ಸೂಚ ನೆಯಂತೆ ಮುಷ್ಕರ ನಡೆಸಲಾಗುತ್ತಿದೆ.
ಮುಷ್ಕರವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಲಯದ ಪದಾಧಿಕಾರಿ ಮೋಹನ್ ಅವರು, ಜನವರಿ 1ರಿಂದಲೇ ನೌಕರರ ವೇತನ ಪರಿಷ್ಕರಣೆ ಆಗಬೇಕಾಗಿದೆ.