ಮಳೆ ಹಿನ್ನೆಲೆಯಲ್ಲಿ ಬೆಳೆ ನಾಶ: ಟೊಮೆಟೋ ದರ ದುಪ್ಪಟ್ಟು
Team Udayavani, Jul 12, 2017, 3:45 AM IST
ಮಹಾನಗರ: ವಿಪರೀತ ಮಳೆಯಿಂದಾಗಿ ಬೆಳೆ ನಷ್ಟ ಹಿನ್ನೆಲೆಯಲ್ಲಿ ಟೊಮೆಟೋ ಬೆಲೆ ದುಪ್ಪಟ್ಟಾಗಿದೆ. ಮಂಗಳೂರಿನಲ್ಲಿ ಕೆಜಿಯೊಂದಕ್ಕೆ 30 ರೂ.ಗಳಿಗೆಲ್ಲ ಸಿಗುತ್ತಿದ್ದ ಟೊಮೆಟೋ 60 ರೂ.ಗಳವರೆಗೂ ತಲುಪಿದೆ.
ಮಂಗಳೂರಿಗೆ ಚಿಕ್ಕಮಗಳೂರು, ಬೆಂಗಳೂರು ಮುಂತಾದೆಡೆಗಳಿಂದ ಟೊಮೆಟೋ ತರಿಸಲಾಗುತ್ತಿದೆ. ಆದರೆ ಆ ಭಾಗಗಳಲ್ಲಿ ವಿಪರೀತ ಮಳೆ ಹಿನ್ನೆಲೆಯಲ್ಲಿ ಟೊಮೆಟೋ ಹೂ ಉದುರುತ್ತಿದ್ದು, ಬೆಳೆಗಾರರೂ ಸಂಕಷ್ಟ ದಲ್ಲಿದ್ದಾರೆ. ಅಲ್ಲದೇ ಟೊಮೇಟೊ ಹಣ್ಣಾಗುತ್ತಲೇ ಕೊಳೆತು ಹೋಗುತ್ತಿರುವು ದರಿಂದ ಬೆಳೆ ನಷ್ಟವಾಗಿ ಆದಾಯಕ್ಕೂ ಕುತ್ತು ಉಂಟಾಗುತ್ತಿದೆ. ಇದರಿಂದ ಟೊಮೆಟೋ ಕೊರತೆ ಉಂಟಾಗಿದ್ದು, ಸಹಜವಾಗಿಯೇ ಬೆಲೆ ಏರಿಕೆಯಾಗಿದೆ.
ಹದಿನೈದು ದಿನಗಳ ಹಿಂದೆ 30 ರೂ.ಗಳಿಗೆ ಸಿಗುತ್ತಿದ್ದ ಟೊಮೆಟೊ ಬೆಲೆ ಹೋಲ್ಸೇಲ್ನಲ್ಲಿ 54 ರೂ. ಮತ್ತು ರಿಟೇಲ್ನಲ್ಲಿ 60 ರೂ.ಗಳಿಗೆಲ್ಲ ಮಾರಾಟ ವಾಗುತ್ತಿದೆ ಎಂದು ಹಾಪ್ಕಾಮ್ಸ್ ಸಿಬಂದಿ ನಾರಾಯಣ ತಿಳಿಸಿದ್ದಾರೆ.
ಕೆಲವು ಕಡೆ 70 ರೂ.ಗಳಿಂದ 80 ರೂ.ಗಳ ತನಕವೂ ಬೆಲೆ ಹೆಚ್ಚಳವಾಗಿದೆ. ಈ ನಡುವೆ ಮುಂಬಯಿಯಲ್ಲಿ 80 ರೂ.ಗಳಿಂದ 100 ರೂ.ಗಳ ತನಕ ಟೊಮೆಟೋ ಬೆಲೆ ಏರಿಕೆಯಾಗಿದೆ.