ಬಸ್ರೂರು ಗ್ರಾಮಸಭೆ: ರಸ್ತೆ ದುರವಸ್ಥೆ ಚರ್ಚೆ
Team Udayavani, Jul 26, 2017, 7:55 AM IST
ಬಸ್ರೂರು: ಇಲ್ಲಿನ ಗ್ರಾ.ಪಂ.ನ ಪ್ರಥಮ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷ ಸಂತೋಷ ಕುಮಾರ್ ಎಚ್.ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಗೆ ಆಗಮಿಸಿದ್ದ ಜಿ.ಪಂ, ಸದಸ್ಯೆ ಲಕ್ಷ್ಮಿ¾à ಮಂಜು ಬಿಲ್ಲವ ಅವರು ಮಾತನಾಡಿ, ಜಿ.ಪಂ. ವ್ಯಾಪ್ತಿಗೆ ಏಳು ಗ್ರಾ.ಪಂ.ಗಳು ಬರುತ್ತದೆ. ಆದ್ದರಿಂದ ಅನುದಾನವನ್ನು ಎಲ್ಲಾ ಏಳು ಗ್ರಾ.ಪಂ.ಗಳಿಗೂ ಹಂಚಬೇಕಾಗುತ್ತದೆ. ಆದರೂ ಆದ್ಯತೆಯ ಮೇರೆಗೆ ಬಸ್ರೂರು ಗ್ರಾ.ಪಂ.ನ ಹದಗೆಟ್ಟ ರಸ್ತೆಗಳ ದುರಸ್ತಿಗೆ ಗಮನ ಹರಿಸಲಾಗುವುದು. ರಸ್ತೆ ಮಾತ್ರವಲ್ಲದೆ ಉಳಿದ ಸಮಸ್ಯೆಗಳನ್ನೂ ಆಲಿಸಬೇಕಾಗುತ್ತದೆ ಎಂದರು.
ಬಸ್ರೂರು ಗ್ರಾ.ಪಂ. ಸದಸ್ಯ ರಾಮ್ ಕಿಶನ್ ಹೆಗ್ಡೆ ಅವರು ಮಾತನಾಡಿ, ತಾ.ಪಂ.ನ ಲಭ್ಯ ಅನುದಾನವನ್ನು ಹದಗೆಟ್ಟ ರಸ್ತೆಗಳ ದುರಸ್ತಿಗೆ ಬಳಸಲಾಗುವುದು ಎಂದರು.
ಬಸ್ರೂರು ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಚಿದಾನಂದ ಟಿ. ಕಳಸಾಪುರ, ಕೃಷಿ ಇಲಾಖೆಯ ರಾಜೇಂದ್ರ ಶೆಟ್ಟಿಗಾರ್, ವೈದ್ಯಾಧಿಕಾರಿ ಕಲಾಶ್ರೀ, ವ್ಯ.ಸೇ.ಸ. ಬ್ಯಾಂಕ್ನ ಉಪಶಾಖಾಧಿಕಾರಿ ಗೌತಮ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ನರಸಿಂಹ ಪೂಜಾರಿ ಉಪಸ್ಥಿತರಿದ್ದು ಇಲಾಖಾ ಮಾಹಿತಿ ನೀಡಿದರು.
ಸೂರ್ಯನಾರಾಯಣ ಉಪಾಧ್ಯ ಮಾರ್ಗದರ್ಶಿ ಅಧಿಕಾರಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮನೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಪಿಡಿಒ ನಾಗೇಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಲೆಕ್ಕ ಪತ್ರ ಮಂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್ ಕರೆ
Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ
Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
MUST WATCH
ಹೊಸ ಸೇರ್ಪಡೆ
ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ