ಶ್ರಾವಣ ಮಾಸಕೆ ಚೂಡಿಯ ತೋರಣ


Team Udayavani, Jul 28, 2017, 7:00 AM IST

2607KAR11.jpg

ಕಾರ್ಕಳ: ಮತ್ತೆ ಬಂದಿದೆ ಶ್ರಾವಣ, ಎಲ್ಲೆಲ್ಲೂ ಹರುಷದ ತೋರುಣ ಎನ್ನುವ ಹೊಸ ಸಾಲೊಂದು ಹೊಳೆದರೆ ಅದು ಈ ಶ್ರಾವಣ ಮಾಸದಲ್ಲಿಯೇ. ಆಷಾಢ ಕಳೆದು ಶ್ರಾವಣ ಮಾಸ ಅಡಿ ಇಟ್ಟಾಗ ಸುತ್ತಲಿನ ಪರಿಸರ ತುಂಬಿಕೊಂಡತೆಯೇ, ಹಬ್ಬ, ಪೂಜೆ, ಹಾಗೂ ಶುಭಕಾರ್ಯಗಳಿಗೆ ಊರು ಅಣಿಯಾಗಿ ಮೈ ಮನಸ್ಸೂ ತುಂಬಿಕೊಳ್ಳುತ್ತದೆ. ಗೌಡ ಸಾರಸ್ವತ ಸಮುದಾಯದ ಮಹಿಳೆಯರಿಗಂತೂ ಶ್ರಾವಣ ಶುರುವಾದರೆ ಚೂಡಿ ಪೂಜೆಯ ಸಂಭ್ರಮ. ಮನೆಯ ತುಂಬೆಲ್ಲಾ ಚೂಡಿ ಹೂವುಗಳ ಘಮಘಮ.ನಡೆದು ಬಂದ ಸಂಪ್ರದಾಯಶ್ರಾವಣ ಮಾಸ ಬಂದಾಗ ಜಿ.ಎಸ್‌.ಬಿ. ಸಮಾಜದ ಮುತ್ತೈದೆಯರು ತಮ್ಮ ಮನೆಗಳಲ್ಲಿ ಚೂಡಿ ಪೂಜೆ ಆಚರಿಸುವುದು ಸಾರಸ್ವತ ಸಮಾಜದಲ್ಲಿ ನಡೆದು ಬಂದ ಸಂಪ್ರದಾಯ.ಇದೊಂದು ಶ್ರಾವಣದ ಸಡಗರ,ಜೊತೆಗೆ ನಮ್ಮನ್ನು ಪ್ರತೀ ನಿತ್ಯವೂ ಪೊರೆಯುತ್ತಿರುವ ಸಸ್ಯಶಾಲಿನಿಯನ್ನೂ ಮನಸಾರೆ ಪೂಜಿಸುವ ಹಬ್ಬ.

ಮುತ್ತೈದೆಯರ ನೆಚ್ಚಿನ ಚೂಡಿ
ಇಡೀ ಶ್ರಾವಣ ಮಾಸದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮುತ್ತೆ$çದೆಯರು ಚೂಡಿಪೂಜೆಯನ್ನು ಶುಕ್ರವಾರ ಹಾಗೂ ರವಿವಾರ ಸಂಭ್ರಮದಿಂದ ಆಚರಿಸುತ್ತಾರೆ. ಮನೆಯಲ್ಲಿರುವ ಮುತ್ತೈದೆಯರೆಲ್ಲಾ ಸೇರಿಕೊಂಡು ಮನೆಯ ಸುತ್ತಮುತ್ತಲೂ ಸಿಗುವ ರತ್ನಗಂಧಿ, ರಥದ ಹೂವು, ಕದಿಕೆ, ಕರವೀರ, ಮೊದಲಾದ ಬಣ್ಣ ಬಣ್ಣದ ಹೂವು ಹಾಗೂ ಗರಿಕೆಗಳನ್ನು  ಒಟ್ಟು ಮಾಡಿ ಬಾಳೆ ನಾರಿನಿಂದ ಕಟ್ಟುವುದಕ್ಕೆ ಚೂಡಿ ಕಟ್ಟುವುದು ಎನ್ನುತ್ತಾರೆ. ಈ ಕ್ರಮ ತಲೆತಲಾಂತರದಿಂದ ಬಂದಿದೆ.

ಗೌಜಿ ಗಮ್ಮತ್ತು
ಪ್ರತೀ ಮುತ್ತೈದೆಯರೂ ಸುಮಾರು 5-12 ಚೂಡಿಗಳನ್ನು ಕಟ್ಟಿ ಅದಕ್ಕೆ ಸರಿಸಮನಾಗಿ ವೀಣ್ಯವನ್ನೂ ಜತೆಗೂಡಿಸಿ ಮನೆ ಮುಂದಿನ ತುಳಸಿಯ ಮೇಲಿಟ್ಟು ತುಳಸಿಗೆ ಅರಸಿನ ಹಾಗೂ ಕುಂಕುಮ ಹಚ್ಚಿ, ಚೂಡಿಗಳಿಂದ ಸಿಂಗಾರಗೊಳಿಸಿ, ಆರತಿ ಬೆಳಗಿ, ಅಕ್ಷತೆ ಕಾಳು ಹಾಕುತ್ತಲೇ ತುಳಸಿಗೆ ಪ್ರದಕ್ಷಿಣೆ ಬಿದ್ದು, ಆ ಬಳಿಕ ಸೂರ್ಯನಮಸ್ಕಾರ ಮಾಡಿ, ಪೂಜಿಸಿದ ಚೂಡಿಯನ್ನು ಬಾವಿಯ ದಂಡೆಗೆ ಹಾಗೂ ಮನೆಯ ಹೊಸ್ತಿಲಿಗೆ ಅರಸಿನ ಕುಂಕುಮ ಹಚ್ಚಿ ಇಡುತ್ತಾರೆ. ಮದುವೆಯಾದ ಹೊಸತರಲ್ಲಿ  ಮನೆಯ ಸೊಸೆಗೆ ಮೊದಲ ಚೂಡಿ ಪೂಜೆಯ ಸಂಭ್ರಮವಾದ್ದರಿಂದ ಸಂಬಂಧಿಕರನ್ನೆಲ್ಲ ಮನೆಗೆ ಆಹ್ವಾನಿಸಿ ಗೌಜಿ ಗಮ್ಮತ್ತಿನಿಂದ ಚೂಡಿ ಪೂಜೆ ಆಚರಿಸಲಾಗುತ್ತದೆ.

ಪೂಜೆಯಲ್ಲಿ ಕಾಡುವ ಕಾಡ ಹೂವು
ಚೂಡಿ ಪೂಜೆಯಿಂದ ಹಲವಾರು ಕಾಡು ಹೂವುಗಳು ಮುನ್ನೆಲೆಗೆ ಬಂದಿದೆ.ಕಾಗೆಯ ಕಣ್ಣು ಎಂದು ಕರೆಯಲ್ಪಡುವ ನೀಲಿ ಬಣ್ಣದ ಹೂವು, ರಥದ ಹೂವು ಹಾಗೂ ಬಗೆ ಬಗೆಯ ಗರಿಕೆಗಳು ಈ ಚೂಡಿ ಕಟ್ಟಲು ಬಳಸಲಾಗುತ್ತದೆ. 

ಶ್ರಾವಣದಲ್ಲಿ ಪ್ರಕೃತಿ ತುಂಬಿಕೊಳ್ಳುವುದರಿಂದ ಇಂತಹ ಕಾಡು ಹೂವುಗಳಿಗೇನೂ ಈ ಕಾಲದಲ್ಲಿ ಬರವಿಲ್ಲ.ಸುತ್ತಮುತ್ತಲಲ್ಲೇ ಸಿಗುವ ಸರಳ ಹೂವುಗಳಿಂದ ಸರಳವಾಗಿ ಚೂಡಿ ಪೂಜೆ ಆಚರಿಸುವುದು ಇಲ್ಲಿನ ಉದ್ದೇಶ.

ಶ್ರಾವಣ ಮಾಸ ಸಂಬಂಧದ ಹರುಷ
ಇದು ಬರೀ ಒಂದು ಮನೆಯ ಹೆಂಗಳೆಯರ ಹಬ್ಬವಲ್ಲ. ಮನೆಮನೆಯ ಹಬ್ಬ.ತಾವು ಚೂಡಿ ಪೂಜಿಸಿದ ದಿನದಂದೇ ಆ ಚೂಡಿಯನ್ನು ಹಿರಿಯರ ಮನೆಗೆ, ಕಿರಿಯರು ಹೋಗಿ ಆ ಮನೆಯ ಮಹಿಳೆಗೆ ಕೊಟ್ಟು ಅವರು ಪೂಜಿಸಿದ ಚೂಡಿಯನ್ನು ಮುಡಿಗೆ ಮುಡಿದು ಅವರಿಂದ ಆಶೀರ್ವಾದ ಪಡೆಯುವ ಕ್ರಮವಿದೆ. ವಿವಿಧ ದೇವಸ್ಥಾನಗಳಿಗೆ ತೆರಳಿ ಚೂಡಿಯನ್ನು ದೇವಸ್ಥಾನ ಹೊಸ್ತಿಲ ಮೇಲೆ ಇಟ್ಟು ಇಡೀ ಶ್ರಾವಣ ಮಾಸವನ್ನು ಭಕ್ತಿಯಿಂದ ಆಹ್ವಾನಿಸಿಕೊಳ್ಳುತ್ತಾರೆ ಮುತ್ತೆ$çದೆಯರು. ಹಾಗಾಗಿ ಚೂಡಿ ಪೂಜೆ ಸಂಬಂಧಗಳನ್ನು ಮತ್ತಷ್ಟು ಬೆಸೆಯುವುದಕ್ಕೆ ಮುನ್ನುಡಿ.

ಸಾಮಾಜಿಕ ಜಾಲ ತಾಣದಲ್ಲೂ ಚೂಡಿಯ ಕ್ರೇಜ್‌
ಆಧುನಿಕ ಹೆಂಗಳೆಯರಲ್ಲಿ ಚೂಡಿ ಪೂಜೆಯ ಕ್ರೇಜ್‌ ಕೊಂಚ ಕಡಿಮೆಯಾದರೂ ಹೊಸದಾಗಿ ಆಚರಿಸಿದ ಚೂಡಿ ಪೂಜೆಯ ಫೋಟೋ ಗಳನ್ನು, ಲೈವ್‌ ವಿಡಿಯೋಗಳನ್ನು ದೂರದ ಊರಿನ ಸಂಬಂಧಿಕರಿಗೆ ಕಳಿಸಿ ಚೂಡಿ ಪೂಜೆಯ ಕ್ರಮ ಹಾಗೂ ಸಂಪ್ರದಾಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ ಈ ಹೊಸ ಕಾಲ ಮಂದಿ.

– ಪ್ರಸಾದ್‌ ಶೆಣೈ ಕಾರ್ಕಳ

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.