ಮ್ಯಾಚ್ ಮೊದಲೇ ಫಿಕ್ಸ್ ಆಗಿತ್ತು: ಲಾಲು ಯಾದವ್
Team Udayavani, Aug 2, 2017, 8:25 AM IST
ಪಟ್ನಾ: ತಮ್ಮ ಪಕ್ಷದ ಜತೆಗಿನ ಮೈತ್ರಿ ಕಡಿದುಕೊಂಡು ಬಿಜೆಪಿ ಜತೆ ಸೇರಿ ಸರಕಾರ ರಚಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಆರ್ಜೆಡಿ ನಾಯಕ ಲಾಲು ಪ್ರಸಾದ್ ಮಂಗಳವಾರ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ನಿತೀಶ್ ಎಸಗಿರುವುದು ಮಹಾ ದ್ರೋಹ ಎಂದು ಆರೋಪಿಸಿದ್ದಾರೆ. ‘ನಿತೀಶ್ ಮತ್ತು ಬಿಜೆಪಿ ಜತೆ ಮೊದಲೇ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು. ತೇಜಸ್ವಿಯಾದವ್ ಕೇವಲ ನೆಪ ಮಾತ್ರ. ನಿತೀಶ್ ಅವರೊಬ್ಬ ಅವಕಾಶವಾದಿ ಮತ್ತು ಪಲ್ಟಾ ರಾಮ್ (ಪಕ್ಷಾಂತರಗಾರ). ತೇಜಸ್ವಿ ರಾಜೀನಾಮೆ ಕೊಟ್ಟಿದ್ದರೂ ನಿತೀಶ್ ಬಿಜೆಪಿ ಜತೆಗೆ ಹೋಗುತ್ತಿದ್ದರು’ ಎಂದು ಲಾಲು ಹೇಳಿದ್ದಾರೆ. ಇನ್ನೊಂದೆಡೆ, ಮಂಗಳವಾರ ಮಾತನಾಡಿರುವ ಬಿಹಾರ ಡಿಸಿಎಂ ಸುಶೀಲ್ ಮೋದಿ, ‘ಇನ್ನು 3 ದಿನಗಳಲ್ಲಿ ರಾಜ್ಯದ ಮರಳು ಮಾಫಿಯಾ ಜತೆ ಲಾಲುಗಿರುವ ನಂಟನ್ನು ಬಹಿರಂಗಪಡಿಸುತ್ತೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ
ಕಾಶ್ಮೀರದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ
Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ