ಹರಳು ನೀಡಿ, ದಂಡ ತೆತ್ತ ಜ್ಯೋತಿಷಿ
Team Udayavani, Aug 11, 2017, 7:00 AM IST
ಮುಂಬಯಿ: ಇದು ಕೋಟ್ಯಧಿಪತಿಯಾಗುವ “ಅದೃಷ್ಟದ ಹರಳು’ ಕೊಟ್ಟು, ಲಕ್ಷ ಲಕ್ಷ ಕಳೆದುಕೊಂಡ “ನತದೃಷ್ಟ ಜ್ಯೋತಿಷಿ’ಯ ಕಥೆ!
ನತದೃಷ್ಟ ಎಂದ ಕೂಡಲೇ ಪಾಪ, ಈತ ಹಣವನ್ನೇನಾದರೂ ಕಳೆದುಕೊಂಡಿರ ಬಹುದೇ ಎಂದು ಯೋಚಿಸಲೇಬೇಡಿ. ಏಕೆಂದರೆ, ಈತನೇ ಅದೃಷ್ಟದ ಹರಳಿನ ಕಥೆ ಕಟ್ಟಿ, ಗ್ರಾಹಕರ ಆಯೋಗಕ್ಕೆ ದಂಡ ಪೀಕಿದ್ದಾನಷ್ಟೇ.
ಆಗಿದ್ದಿಷ್ಟು, ಇಲ್ಲಿನ ಆಭರಣ ಅಂಗಡಿಯೊಂದು 2013ರಲ್ಲಿ 80 ವರ್ಷದ ವೃದ್ಧ “ಸ್ವರ್ಣ ಸ್ಪರ್ಷ’ದ ಜಾಹೀರಾತು ನೋಡಿ “ನೀಲಿ ಹರಳು’ ಖರೀದಿಸಿದ್ದರು. ಇದಾದ ಬಳಿಕ ಈ ಅಂಗಡಿಯ ಜೋತಿಷಿಗಳೇ ಮೊಬೈಲ್ ಸಂದೇಶ ಕಳುಹಿಸಿ, “ನೀಲಿ ಹರಳು ಸರಿಯಾಗಲ್ಲ, ವಾಪಸ್ ಬಂದು ಫುಕ್ರಜ್ ಮತ್ತು ಮಾಣಿಕ್ ಹರಳು ಖರೀದಿಸಿ’ ಎಂದು ಹೇಳಿ 2.90 ಲಕ್ಷ ರೂ. ಪಡೆದು ಆ “ಅದೃಷ್ಟದ ಹರಳು’ ಕೊಟ್ಟು ಕಳುಹಿಸಿದ್ದರು. ಒಂದು ಬಾರಿಯಲ್ಲ, ಮೂರು ಬಾರಿ ಕೋಟ್ಯಧಿಪತಿ ಆಗುತ್ತೀರಿ, ನಿಮ್ಮ ಅದೃಷ್ಟ ಖುಲಾಯಿಸಿತು ಹೋಗಿ ಎಂದು ಹೇಳಿದ್ದರಂತೆ. ಪಾಪ, ಈ ಹರಳು ಖರೀದಿಸಿದ ವ್ಯಕ್ತಿ ಒಂದು ವರ್ಷ ಕಾದರೂ ಯಾವುದೇ ಅದೃಷ್ಟ ಬರಲೇ ಇಲ್ಲ. ಹೀಗಾಗಿ ಅವರು ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ವಿಶೇಷವೆಂ ದರೆ ಇಲ್ಲಿ ವಾದಿಸಿದ್ದ ಈ ಅಂಗಡಿ, ಆ ವೃದ್ಧ ನಿಬಂಧನೆ ಪಾಲಿಸಿರಲಿಲ್ಲ. 30 ದಿನದ ಒಳಗೆ ನೀಲಿ ಹರಳು ವಾಪಸ್ ಕೊಡು ಎಂದಿದ್ದೆವು. ಆದರೂ ಕೊಟ್ಟಿರಲಿಲ್ಲ, ಹೀಗಾಗಿಯೇ ಅದೃಷ್ಟ ಖುಲಾಯಿಸಲಿಲ್ಲ ಎಂದಿದ್ದರು. ಆದರೆ, ಕೇಳದ ಕೋರ್ಟ್ 3.20 ಲಕ್ಷ ರೂ. ಪರಿಹಾರ ಕೊಡುವಂತೆ ಸೂಚಿಸಿದೆ. ಅಂದರೆ 2.90 ಲಕ್ಷ ರೂ.ಗೆ ಬಡ್ಡಿ, 25 ಸಾವಿರ ಪರಿಹಾರ, 5 ಸಾವಿರ ಕೋರ್ಟ್ ವೆಚ್ಚ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ