ಎಲಿಫೆಂಟ್ ಎನ್ಕೌಂಟರ್: ಕೊಲೆಗಡುಕ ಆನೆಗೆ ಸದ್ಗತಿ!
Team Udayavani, Aug 13, 2017, 7:15 AM IST
ಸಾಹೀಬ್ಗಂಜ್: ಜಾರ್ಖಂಡ್, ಬಿಹಾರದ 15 ಮಂದಿಯ ಸಾವಿಗೆ ಕಾರಣವಾಗಿದ್ದ ಆನೆಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಈ ಆನೆಯನ್ನು ಕೊಲ್ಲುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರವಿಡೀ ಹುಡುಕಾಟ ನಡೆಸಿತ್ತು. ಶಾರ್ಪ್ ಶೂಟರ್ ಸಫ್ರಾಜ್ ಖಾನ್ ಈ ಆನೆಗೆ ಗುಂಡಿಟ್ಟಿ ಕೊಂದಿದ್ದಾರೆ. ಕಾರ್ಯಾ ಚರಣೆ ವೇಳೆ ಮೊದಲಿಗೆ ಈ ಆನೆ ತಪ್ಪಿಸಿಕೊಂಡಿತಾದರೂ, ಮತ್ತೆ ಹುಡುಕಿ 428 ಕ್ಯಾಲಿಬರ್ ಮ್ಯಾಗಮ್ ರೈಫಲ್ನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಗುರುವಾರವೇ ಈ ಆನೆ ಹತ್ಯೆಯಾಗಿತ್ತು. ಆಗ ಸಫ್ರಾìಜ್ ಅರವಳಿಕೆ ಮದ್ದು ನೀಡುವ ಸಲುವಾಗಿ ಆನೆಯ ಕುತ್ತಿಗೆಗೆ ಗುರಿಯಾಗಿಸಿ ಶೂಟ್ ಮಾಡಿದ್ದರು. ಆದರೆ ಈ ಅರವಳಿಕೆ ಬುಲೆಟ್ ಆನೆಯ ಕುತ್ತಿಗೆಗೆ ತಗುಲಿತಾದರೂ, ಆನೆಗೆ ಏನೂ ಆಗಲಿಲ್ಲ. ಕಡೆಗೆ ಅದು ತಪ್ಪಿಸಿಕೊಂಡು ಹೋಗಿದೆ. ಶುಕ್ರವಾರ ಮತ್ತೆ ಅರಣ್ಯ ಸಿಬ್ಬಂದಿ ಜತೆಗೆ ಕಾರ್ಯಾಚರಣೆ ನಡೆಸಿ ಈ ಆನೆಯನ್ನು ಕೊಲ್ಲಲಾಗಿದೆ.
ಈ ಶಾರ್ಪ್ ಶೂಟರ್ ಈಗಾಗಲೇ 6 ಆನೆಗಳನ್ನು ಕೊಂದಿದ್ದು, ಇದು ಏಳನೇ ಆನೆ. ಅಲ್ಲದೆ ಐದು ಹುಲಿ ಮತ್ತು ಎಂಟು ಚಿರತೆಗಳನ್ನೂ ಇವರು ಕೊಂದಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಜನರ ಮೇಲೆ ದಾಳಿ ನಡೆಸುತ್ತಿದ್ದ ಈ ಎಲ್ಲಾ ಪ್ರಾಣಿಗಳನ್ನು ಕಾರ್ಯಾ ಚರಣೆ ಮೂಲಕವೇ ಇವರು ಕೊಂದಿದ್ದಾರೆ. ಮೃತಪಟ್ಟಿರುವ ಆನೆ 20-25 ವಯಸ್ಸಿ ನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದು ಜಾರ್ಖಂಡ್ನಲ್ಲಿ 11 ಮಂದಿ ಮತ್ತು ನೆರೆ ರಾಜ್ಯ ಬಿಹಾರದಲ್ಲಿ 4 ಮಂದಿಯನ್ನು ಹತ್ಯೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
Arvind Kejriwal ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು
NEET; ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ!: ಚುನಾವಣಾ ಅಸ್ತ್ರ
Uttarakhand; ಕಾಳ್ಗಿಚ್ಚು ತಡೆಗೆ ಮೋಡ ಬಿತ್ತನೆಗೆ ಮೊರೆ?: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Pen Drive ಹಂಚಿದವರ ವಿರುದ್ಧ ಯಾಕೆ ಎಸ್ಐಟಿ ಕ್ರಮ ಕೈಗೊಳ್ಳಲಿಲ್ಲ: ಜಿ.ಟಿ ದೇವೇಗೌಡ ಪ್ರಶ್ನೆ
ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದವರಿಗೆ ಪ್ರಜಲ್ ತರಲಾಗದೇ: ಸಚಿವ ಶಿವಾನಂದ
Politics: ಸಿದ್ದರಾಮಯ್ಯ, ಪರಮೇಶ್ವರ ಅವರ ಸಿಡಿಯೂ ಮುಂದೆ ಬರಬಹುದು; ಜಾರಕಿಹೊಳಿ
UP: ಪತಿಯ ಕೈಕಾಲು ಕಟ್ಟಿ ಖಾಸಗಿ ಅಂಗವನ್ನು ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ: ಪತ್ನಿ ಬಂಧನ
Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ