ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ
Team Udayavani, Aug 16, 2017, 10:11 AM IST
ಮಂಗಳೂರು: ಎ.ಸದಾನಂದ ಶೆಟ್ಟಿ ಅಧ್ಯಕ್ಷತೆಯ ಸ್ಪೋರ್ಟ್ಸ್ ಪ್ರಮೋಟರ್ ಕ್ಲಬ್ ಮಂಗಳೂರು ಹಾಗೂ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ನ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ಮಂಗಳೂರು ನೆಹರೂ ಮೈದಾನಿನಲ್ಲಿ ಮಂಗಳವಾರ ರಾಜ್ಯಮಟ್ಟದ ಆಹ್ವಾನಿತ ತಂಡಗಳ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟ ನಡೆಯಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಕಬಡ್ಡಿ ಕರಾವಳಿಯ ಗ್ರಾಮೀಣ ಭಾಗದ ಕ್ರೀಡೆಯಾಗಿ ಇದೀಗ ರಾಷ್ಟ್ರ ಮಟ್ಟದಲ್ಲಿ ಪ್ರೊ ಕಬಡ್ಡಿಯ ಮಾದರಿಯಲ್ಲಿ ಮಿಂಚುತ್ತಿರುವುದು ಸಂತೋಷದ ವಿಚಾರ. ಕಬಡ್ಡಿಯ ಮೂಲಕ ತಳ ಮಟ್ಟದ ಕ್ರೀಡಾಪಟುವನ್ನು ಉತ್ತೇಜಿಸುವ ಕೆಲಸ ಕಬಡ್ಡಿ ಪಂದ್ಯಾಟದ ಮೂಲಕ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸದಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಕಬಡ್ಡಿ ಪಂದ್ಯಾಟ ಆಯೋಜನೆಯಾಗಿರುವುದು ಶ್ಲಾಘನೀಯ ಹಾಗೂ ಹೊಸ ಕಬಡ್ಡಿಪಟುಗಳಿಗೆ ಇದೊಂದು ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.
ಮಂಗಳೂರು ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಗೇರು ಅಭಿವೃದ್ಧಿ ನಿಗ ಮದ ಅಧ್ಯಕ್ಷ ಬಿ.ಎಚ್. ಖಾದರ್, ಅದಾನಿ ಗ್ರೂಪ್ನ ಮುಖ್ಯಸ್ಥ ಕಿಶೋರ್ ಆಳ್ವ, ಸಂಗೀತ ನಿರ್ದೇಶಕ ಗುರುಕಿರಣ್, ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ದಿನೇಶ್ ಕುಂದರ್, ಉದಯ್ ಚೌಟ, ಮಾಧವ ನಾೖಕ್ ಅಡ್ಯಾರ್, ಬದ್ರಿನಾಥ್ ಕಾಮತ್, ಅಶ#ಕ್ ಆಲಿ, ಜಗನ್ನಾಥ ಶೆಟ್ಟಿ ಬಾಳ, ಪಿ.ಬಿ.ಹರೀಶ್ ರೈ, ಅಶೋಕ್ ಹೆಗ್ಡೆ, ಲೀಲಾಕ್ಷ ಕರ್ಕೇರ, ರಾಜ್ಗೊàಪಾಲ್ ರೈ, ಟಿ.ಕೆ.ರಾಜನ್, ತಾರಾನಾಥ್ ಬೋಳಾರ್, ವಿಜಯಲಕ್ಷ್ಮೀ ಶೆಟ್ಟಿ, ಸಿ.ಎಸ್. ಭಂಡಾರಿ, ಪ್ರೇಮನಾಥ್ ಉಳ್ಳಾಲ್, ಸೀತಾರಾಮ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಎ. ಸದಾನಂದ ಶೆಟ್ಟಿ ಸ್ವಾಗತಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.