ಸರಣಿ ಸೋಲಿನಿಂದ ತೀವ್ರ ನೋವಾಗಿದೆ: ಜಯಸೂರ್ಯ
Team Udayavani, Aug 16, 2017, 10:14 AM IST
ಕೊಲಂಬೊ: ಭಾರತದ ವಿರುದ್ಧ ತವರಿನಲ್ಲೇ ಅನುಭವಿಸಿದ 3-0 ವೈಟ್ವಾಶ್ ಸೋಲಿನಿಂದ ತೀವ್ರ ನೋವಾಗಿದೆ ಎಂಬುದಾಗಿ ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ, ಹಾಲಿ ಆಯ್ಕೆ ಸಮಿತಿ ಅಧ್ಯಕ್ಷ ಸನತ್ ಜಯಸೂರ್ಯ ಪ್ರತಿಕ್ರಿಯಿಸಿದ್ದಾರೆ.
“ನನಗೆ ಈ ಸೋಲಿನಿಂದ ತೀವ್ರ ನೋವಾಗಿದೆ. ತವರಿನಲ್ಲಿ ಸರಣಿ ಸೋಲುವುದನ್ನು ಯಾವತ್ತೂ ಅರಗಿಸಿಕೊಳ್ಳಲಾಗುವುದಿಲ್ಲ. ಅದರಲ್ಲೂ ಈ ರೀತಿಯಾಗಿ ಹೀನಾಯವಾಗಿ ಸೋಲುವುದನ್ನು ಸಹಿಸಿಕೊಲ್ಲುವುದು ಬಜಳ ಕಷ್ಟ. ನಾವು ತವರಿನಲ್ಲಿ ಭಾರತದ ವಿರುದ್ಧ ಯಾವತ್ತೂ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದೇವೆ. 2015ರಲ್ಲಿ ಸರಣಿ ಸೋತರೂ ಮೊದಲ ಪಂದ್ಯವನ್ನು ಗೆದ್ದ ಸಾಧನೆ ನಮ್ಮದಾಗಿತ್ತು. ಆದರೆ ಈ ಸಲದ ಸೋಲು ಅತ್ಯಂತ ಆಘಾತಕಾರಿ. ಇದಕ್ಕೇನು ಕಾರಣ ಎಂಬುದನ್ನು ಆಟಗಾರರು, ತರಬೇತುದಾರರೆಲ್ಲರೂ ಕೂಡಿ ಆತ್ಮಾವಲೋಕನ ಮಾಡಬೇಕಿದೆ. ಸಮಸ್ಯೆಗಳಿಗೆಲ್ಲ ಶೀಘ್ರವೇ ಸೂಕ್ತ ಪರಿಹಾರ ಒದಗಿಸಬೇಕಿದೆ…’ ಎಂದು ಗತ ಕಾಲದ ಬಿಗ್ ಹಿಟ್ಟರ್ ಜಯಸೂರ್ಯ ಅಭಿಪ್ರಾಯಪಟ್ಟರು.
“ಶ್ರೀಲಂಕಾದ ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದೊಡ್ಡ ಅಂತರವಿದೆ. ಇವೆರಡರ ನಡುವೆ ಹೆಚ್ಚಿನ ಅಭ್ಯಾಸ ಹಾಗೂ ತರಬೇತಿಯ ಸೇತುವೆಯನ್ನು ನಿರ್ಮಿಸಿ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ಸುದೀರ್ಘಾವಧಿಯ ಪರಿಹಾರನ್ನು ಕಂಡುಕೊಳ್ಳ ಬೇಕಿದೆ. ಕ್ಲಬ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಡುವೆ ಭಾರೀ ಅಂತರವಿದೆ. ಶ್ರೇಷ್ಠ ಮಟ್ಟದ ತರಬೇತಿ ಹಾಗೂ ತರಬೇತುದಾರರಿಂದ ಯುವ ಆಟಗಾರರನ್ನು ತಾಳ್ಮೆಯಿಂದ ಪಳಗಿಸುವ ಕೆಲಸ ಆಗಬೇಕಿದೆ’ ಎಂದು ಜಯಸೂರ್ಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್