ಊರೆಲ್ಲ ಸುತ್ತಿ ಬಾಡಿಗೆ ನೀಡದೆ “ಇತ್ತೆ ಬರ್ಪೆ ಉಂತುಲೆ ‘ಎಂದು ಪರಾರಿ


Team Udayavani, Aug 23, 2017, 11:52 AM IST

23-REP-1.jpg

ಮಂಗಳೂರು: ರಿಕ್ಷಾವನ್ನು ಬಾಡಿಗೆಗೆ ಗೊತ್ತುಪಡಿಸಿ ಊರೆಲ್ಲ ಸುತ್ತಾಡಿದ ಚಾಲಾಕಿ ಯುವಕನೋರ್ವ ಬಳಿಕ ಬಾಡಿಗೆ ನೀಡದೆ ಪರಾರಿಯಾದ ಘಟನೆ ಮಂಗಳೂರಿನಲ್ಲಿ  ಸೋಮವಾರ ಸಂಭವಿಸಿದೆ. 

ರಿಕ್ಷಾ ಚಾಲಕನಿಗೆ ಆತ ಬಾಡಿಗೆಯ 960 ರೂ. ವಂಚಿಸಿದ್ದು, ಅವರು ಬರಿಗೈಯಲ್ಲಿ  ಸುರತ್ಕಲ್‌ನಿಂದ  ಸಂಜೆ ಮಂಗಳೂರಿಗೆ  ವಾಪಸು ಬಂದಿದ್ದಾರೆ. ನಗರದ ಲೇಡಿಹಿಲ್‌ನ ರಿಕ್ಷಾಪಾರ್ಕ್‌ಗೆ ಸೋಮವಾರ ಸುಮಾರು ಮಧ್ಯಾಹ್ನ 2.30ರ ವೇಳೆಗೆ ಸುಮಾರು 35 ವರ್ಷದ ಯುವಕನೋರ್ವ ಬಂದು ರಿಕ್ಷಾದಲ್ಲಿ ಕುಳಿತು ಸುರತ್ಕಲ್‌ವರಗೆ ಹೋಗಿ ಬರಲಿಕ್ಕಿದೆ ಎಂದು  ಹೇಳಿದ. ಅದರಂತೆ ಚಾಲಕ ರಿಕ್ಷಾವನ್ನು  ಸುರತ್ಕಲ್‌ ಕಡೆಗೆ ಚಲಾಯಿಸಿದರು.  ಬೈಕಂಪಾಡಿ ತಲುಪಿದಾಗ ಅಲ್ಲಿ ರಿಕ್ಷಾ ನಿಲ್ಲಿಸುವಂತೆ ಹೇಳಿ ಹೊಟೇಲೊಂದಕ್ಕೆ ಆತ ತೆರಳಿದ. ಅಲ್ಲಿ 2,000 ರೂ. ನೋಟು ಚಿಲ್ಲರೆ ಮಾಡಿಸಿ ಬಳಿಕ ಸುರತ್ಕಲ್‌ಗೆ ಹೋಗುವಂತೆ ಹೇಳಿದ . ಸುರತ್ಕಲ್‌ನಲ್ಲಿ  ನನಗೆ ಕೃಷ್ಣಾಪುರಕ್ಕೆ ಹೋಗಲಿಕ್ಕಿದೆ ಎಂದು ಹೇಳಿ ಅಲ್ಲಿಗೆ ತೆರಳುವಂತೆ ಸೂಚಿಸಿದ. ಅಲ್ಲಿಂದ ಜೋಕಟ್ಟೆಗೆ ಹೋಗಿದ್ದು, ಅಲ್ಲಿ  ರಿಕ್ಷಾ ನಿಲ್ಲಿಸಿ ಎರಡು ಅಂಗಡಿಗಳಿಗೆ ತೆರಳಿ 10 ನಿಮಿಷಗಳ ಬಳಿಕ ವಾಪಸು ಬಂದಿದ್ದು  ಮರಳಿ ಸುರತ್ಕಲ್‌ಗ‌ಳಿಗೆ ಹೋಗುವಂತೆ ಹೇಳಿದ. ರಿಕ್ಷಾ ಚಾಲಕ ಸುರತ್ಕಲ್‌ಗೆ ಬಂದಾಗ ಮೀನು ಮಾರುಕಟ್ಟೆ  ಬಳಿ ರಿಕ್ಷಾ ನಿಲ್ಲಿಸುವಂತೆ  ತಿಳಿಸಿದ. 

“ಈರ್‌  ಉಂತುಲೆ ಇತ್ತೆ ಬರ್ಪೆ ‘ ಎಂದು ಪರಾರಿಯಾದ
ಸುರತ್ಕಲ್‌ನಲ್ಲಿ ಅಂಗಡಿಯೊಂದರ ಹೆಸರು ಹೇಳಿ ಅಲ್ಲಿಗೆ ಹೋಗಿ ಕೆಲವು ವಸ್ತುಗಳನ್ನು ಖರೀದಿಸಲಿಕ್ಕಿದೆ. “ಈರ್‌ ಉಂತುಲೆ ಇತ್ತೆ ಬರ್ಪೆ’ (ನೀವು ನಿಲ್ಲಿ… ಈಗ ಬರುತ್ತೇನೆ) ಎಂದು  ಹೇಳಿ ಹೋದ. ಅಂಗಡಿಗೆ ಹೋಗಿ ಬಹಳಷ್ಟು ವೇಳೆಯಾದರೂ ಆತ ಹಿಂದಿರುಗಿ ಬರದಿರುವುದನ್ನು  ಕಂಡು ರಿಕ್ಷಾ ಚಾಲಕ ಆತ ಹೇಳಿದ ಹೆಸರಿನ ಅಂಗಡಿಗೆ ಹೋಗಿ ವ್ಯಕ್ತಿಯ ಚಹರೆ  ತಿಳಿಸಿ ವಿಚಾರಿಸಿದರು. ಅಂತಹ ವ್ಯಕ್ತಿ ಇಲ್ಲಿಗೆ ಬಂದಿಲ್ಲ ಎಂದು ಅಂಗಡಿಯವರು ತಿಳಿಸಿದಾಗ ಗೊಂದಲಕ್ಕೀಡಾದ ಅವರು ಹೊರಗಡೆ ಬಂದು  ಮತ್ತೆ ಆತನಿಗಾಗಿ 

ಕಾಯುತ್ತಾ ನಿಂತರು. 
ರಿಕ್ಷಾ ಚಾಲಕ ಮೀನುಮಾರುಕಟ್ಟೆ ಬಳಿ ಬಹಳ ಹೊತ್ತಿನಿಂದ  ಕಾಯುತ್ತಾ ನಿಂತಿದ್ದಾಗ ಅಲ್ಲಿ ಬಂದ ಮೂವರು ಮೀನುಗಾರ ಮಹಿಳೆಯರು ಅವರಲ್ಲಿ  ನೀವು ಯಾರಿಗಾಗಿ ಕಾಯುತ್ತಿರುವುದು ಎಂದು ವಿಚಾರಿಸಿದರು.  ಚಾಲಕ ಅವರಲ್ಲಿ  ವಿಷಯ ತಿಳಿಸಿದಾಗ ಇದೇ ಚಹರೆಯ ವ್ಯಕ್ತಿ ಈ  ಕೆಲವು ಸಮಯದ ಹಿಂದೆ ಇದೇ ರೀತಿಯಾಗಿ  ಇಲ್ಲಿನ ಹಿರಿಯ ಮೀನುಗಾರ ಮಹಿಳೆಯೋರ್ವರಿಂದ 500 ರೂಪಾಯಿ ಮೀನು ಖರೀದಿಸಿ ಈಗ ಹಣ ತರುತ್ತೇನೆ ಎಂದು ಹೇಳಿ ಪರಾರಿಯಾಗಿದ್ದ ಎಂಬ ವಿಚಾರವನ್ನು ತಿಳಿಸಿದರು. ರಿಕ್ಷಾ ಚಾಲಕನಿಗೆ ಆಗ ತಾನು ಮೋಸಹೋಗಿರುವುದು ಅರಿವಿಗೆ ಬಂತು.

ಜ್ಯೂಸ್‌ ಕುಡಿಯುವಂತೆ ಒತ್ತಾಯಿಸಿದ್ದ
ಯುವಕ ಬಿಳಿ ಪ್ಯಾಂಟ್‌ ಹಾಗೂ ಬಿಳಿ ಅಂಗಿಧರಿಸಿದ್ದು  ಎಣ್ಣೆಕಪ್ಪು ಶರೀರ ಹಾಗೂ ಗಡ್ಡ ಹೊಂದಿದ್ದ.  ಕುತ್ತಿಗೆಯಲ್ಲಿ ದಪ್ಪದ ಚಿನ್ನದ ಸರದಂತೆ ಕಾಣುವ ಸರವನ್ನು  ಧರಿಸಿದ್ದನು. ತಾನು ನಗರದಲ್ಲಿ  ಫೈನಾನ್ಸ್‌ವೊಂದನ್ನು  ಹೊಂದಿರುವುದಾಗಿ ತಿಳಿಸಿದ್ದ ಎಂದು ಚಾಲಕ ವಿವರಿಸಿದ್ದಾರೆ. ಈತ ರಿಕ್ಷಾದಲ್ಲಿ ಹೋಗುವಾಗ ಮಾರ್ಗ ಮಧ್ಯದಲ್ಲಿ  ಒಂದೆರಡು ಬಾರಿ ಜ್ಯೂಸ್‌ ಕುಡಿಯುವಂತೆ ಒತ್ತಾಯಿಸಿದ್ದ. ಆದರೆ  ಇದನ್ನು  ನಾನು ನಿರಾಕರಿಸಿರುವುದಾಗಿ ಚಾಲಕ ತಿಳಿಸಿದ್ದಾರೆ.  ವಂಚನೆ ಬಗ್ಗೆ  ರಿಕ್ಷಾ ಚಾಲಕ ಸುರತ್ಕಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.  

ಟಾಪ್ ನ್ಯೂಸ್

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

Prajwal Revanna Case ಕಾರ್ತಿಕ್‌ ನಿರೀಕ್ಷಣ ಜಾಮೀನು ಅರ್ಜಿ ವಜಾ

Prajwal Revanna Case ಕಾರ್ತಿಕ್‌ ನಿರೀಕ್ಷಣ ಜಾಮೀನು ಅರ್ಜಿ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

Mangaluru Central, ಜಂಕ್ಷನ್‌ನಲ್ಲಿ ಕಾದಿರಿಸದ ಟಿಕೆಟ್‌ ವಿತರಿಸಲು ಎಟಿವಿಎಂ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.