ದೇವರಾಜ ಅರಸು ಮೌನ ಕ್ರಾಂತಿಕಾರ: ಪೂರ್ಣಾನಂದ


Team Udayavani, Sep 8, 2017, 11:49 AM IST

GUL-4.jpg

ಕಲಬುರಗಿ: ರಾಜ್ಯ ಕಂಡ ಪ್ರಖರ ಮುಖ್ಯಮಂತ್ರಿ ದಿ| ದೇವರಾಜ ಅರಸು. ಅವರು ದಲಿತರ, ದಮನಿತರ ಧ್ವನಿಯಾಗಿದ್ದರು. ಕೆಳ ವರ್ಗದವರನ್ನು, ಅಲ್ಪಸಂಖ್ಯಾತರನ್ನು ಹುಡುಕಿ ಅಧಿಕಾರದ ಗದ್ದುಗೆಗೆ ತಂದರು. ಇದು ಅವರ ಮೌನಕ್ರಾಂತಿಯ ವರಸೆ ಆಗಿತ್ತು ಎಂದು ಮೈಸೂರಿನ ಪ್ರಗತಿಪರ ಚಿಂತಕ ಡಾ| ಎಂ.ಪಿ. ಪೂರ್ಣಾನಂದ ಹೇಳಿದರು.

ಗುವಿವಿಯಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ| ಡಿ.ದೇವರಾಜು ಅರಸು ಅವರ 102ನೇ ಜನ್ಮದಿನಾಚರಣೆ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರದ ಕಾಳಿಂಗಪ್ಪ ಚೌಧರಿಯಿಂದ ಹಿಡಿದು ಬೆಂಗಳೂರಿನ ಜಾಫರ್‌ ಶರೀಫ್‌ವರೆಗೂ ಮತ್ತು ಯಾದಗಿರಿಯ
ಶರಣಪ್ಪ ಕಲಬುರ್ಗಿ ಅವರಿಂದ ಹಿಡಿದು ಹೆಳವರವರೆಗೂ ಹಲವಾರು ಕೆಳ ಸಮುದಾಯಗಳ ಮುಖಂಡರನ್ನು,
ಜ್ಞಾನವಂತರನ್ನು ಹುಡುಕಿ ಅಧಿಕಾರಕ್ಕೆ ತಂದರೂ, ಅವರ ಮುಖೇನ ಆಯಾ ವರ್ಗಗಳ ಹಿತ ಕಾಪಾಡಿದರು. ಒಮ್ಮೆ
ಪತ್ರಕರ್ತರು ಏನ್ರಿ ಯರ್ಯಾರನ್ನೋ ತಂದು ನಿಲ್ಲಿಸ್ತಿದಿರಲ್ಲಾ ಎಂದು ಕಾಲೆಳೆದಾಗ ಸುಮ್ಮನೆ ನಕ್ಕು, ಕಾಯಿರಿ ಎನ್ನುತ್ತಲೇ ಸಂಯಮ ತೋರುತ್ತಿದ್ದರು. ಬಳಿಕ ಫಲಿತಾಂಶದ ಮುಖೇನ ಅವರಿಗೆ ಉತ್ತರವನ್ನು ನೀಡುತ್ತಿದ್ದರು. ಇದೆಲ್ಲವೂ ಮೌನವಾಗಿಯೇ ನಡೆದು ಹೋಗುತ್ತಿತ್ತು. ಆ ಮುಖೇನ ಅವರು ಕೆಳ ವರ್ಗದಲ್ಲಿ ಕ್ರಾಂತಿಯ ಕಿಡಿಗಳನ್ನು ಚೆಲ್ಲಿದ್ದರು ಎಂದು ನೆನಪಿಸಿಕೊಂಡರು.

ಮುಖ್ಯಮಂತ್ರಿಯಾಗಿದ್ದಾಗ ಅರಸು, ವಿಜಯಪುರದಲ್ಲಿ ಬೆಳಗ್ಗೆ ಕೊಳಗೇರಿಯಲ್ಲಿ ವಾಯು ವಿಹಾರ ಮಾಡುವಾಗ ಹೆಳವರ
ಜಾತಿಯ ರೈತಣ್ಣನನ್ನು ಮಾತನಾಡಿಸಿದಾಗ ವಂಶಾವಳಿಗಳನ್ನು ಹೇಳುವ ಜಾತಿ ಇದೆಯಾ ಎಂದು ಅಚ್ಚರಿ ಪಟ್ಟು ಹೆಳವರ ಜಾತಿಯಲ್ಲಿ ಓದಿಕೊಂಡಿದ್ದ ಯುವಕನನ್ನು ಕರೆದು ತಂದು ಯೂತ್‌ ಕಾಂಗ್ರೆಸ್‌ಗೆ ರಾಜ್ಯಾಧ್ಯಕ್ಷನನ್ನಾಗಿ ಮಾಡಿದಂತಹ ಉದಾಹರಣೆ ರಾಜ್ಯದ, ದೇಶದ ಇತರೆ ಮುಖ್ಯಮಂತ್ರಿಗಳಲ್ಲಿ ಕಾಣಲು ಸಿಗುವುದಿಲ್ಲ. ಅದು ಅರಸು ಹೆಚ್ಚುಗಾರಿಕೆಯಾಗಿತ್ತು. ಇದೆಲ್ಲವನ್ನು ತುಂಬಾ ಸೂಕ್ಷ್ಮವಾಗಿ ಮಾಡಿ ಹೋಗಿದ್ದಾರೆ. ಅದೆಲ್ಲವನ್ನು ಇವತ್ತು ನಾವು ಅರ್ಥ ಮಾಡಿಕೊಂಡು ಕೆಳ ವರ್ಗದ ಹಿತ ಕಾಯುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಬೇಕು
ಎಂದರು.

ಆದರೆ, ಸರ್ಪದ ಹುಣ್ಣಿಗೆ ಒಳಗಾಗಿ ಅರಸು ಹಾಸಿಗೆ ಹಿಡಿದಾಗ, ಅಧಿಕಾರ ಪಡೆದುಕೊಂಡಿದ್ದ ಮೇಲ್ವರ್ಗದ
ಶಾಸಕರ್ಯಾರು ಅವರ ಬಳಿ ಇರಲಿಲ್ಲ.. ಎನ್ನುವ ನೋವು ಅವರನ್ನು ಬಹುವಾಗಿ ಕಾಡಿತ್ತು. ಆಗ ತುಂಬಾ ಕಾಳಜಿ ತೋರಿದವರೆಂದರೆ ಕೆಳ ವರ್ಗದವರು ಅವರಿಂದ ಅಧಿಕಾರವನ್ನು ಪಡೆದವರು ಮಾತ್ರ. ಆದ್ದರಿಂದ ಕೆಳ ವರ್ಗದ ಜನರಲ್ಲಿ ನಿಯತ್ತಿನ ಕೊರತೆ ಇಲ್ಲ ಎನ್ನುವುದನ್ನು ಅರಸು ಅವರ ಜೀವನದ ಮುಖೇನ ನಾವು ಅರ್ಥ ಮಾಡಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಗುವಿವಿ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ್‌ ಮಾತನಾಡಿ, ಅರಸು ಅವರ ರಾಜಕೀಯ
ನಡೆಗಳಿಂದ ಯುವಕರು ಬಹಳಷ್ಟು ಕಲಿಯುವುದು ಇದೆ. ಸಂಶೋಧನೆ ಮತ್ತು ವಿಷಯ ತಜ್ಞತೆ ಹೊಂದುವವರು
ಅರಸು ಅಂತಹ ರಾಜಕಾರಣಿಗಳ, ಸಾಧಕರ ಕುರಿತು ಚೆನ್ನಾಗಿ ಓದಿಕೊಳ್ಳಬೇಕು. ಅರಸು ಅವರನ್ನು ಹತ್ತಿರದಿಂದ ಬಲ್ಲ
ಮತ್ತು ದೇವರಾಜ ಅರಸು, ಕೆಂಪರಾಜು ಅರಸು ಕುಟುಂಬದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಪೂರ್ಣಾನಂದ
ಅವರನ್ನು ಈ ಭಾಗಕ್ಕೆ ಪರಿಚಯ ಮಾಡಿಕೊಡಬೇಕು. ಅವರಿಂದ ಅರಸು ಕುರಿತು ಹೇಳಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು ಎಂದರು.

ಸಿಂಡಿಕೇಟ್‌ ಸದಸ್ಯರಾದ ಮಹ್ಮದ ವಾಹೇದ ಅಲಿ ಅತಿಥಿಯಾಗಿದ್ದರು. ಆಡಳಿತ ವಿಭಾಗದ ಕುಲಸಚಿವ
ಪ್ರೊ| ದಯಾನಂದ ಅಗಸರ, ಮೌಲ್ಯಮಾಪನ ಕುಲಸಚಿವ ಡಾ| ಸಿ.ಎಸ್‌. ಪಾಟೀಲ ಹಾಗೂ ದೇವರಾಜ ಅರಸು ಜನ್ಮ
ದಿನಾಚರಣೆ ಸಮಿತಿ ಸಂಚಾಲಕ ಪ್ರಕಾಶ ಎಂ. ಹದನೂರಕರ ಹಾಜರಿದ್ದರು.

ಸಂಚಾಲಕ ಪ್ರಕಾಶ ಹದನೂರಕರ ಸ್ವಾಗತಿಸಿದರು. ಪ್ರೊ| ಜಯಶ್ರೀ ದಂಡೆ ಅತಿಥಿಗಳನ್ನು ಪರಿಚಯಿಸಿದರು.
ಬಿ.ಎಂ. ರುದ್ರವಾಡಿ ನಿರೂಪಿಸಿ, ವಂದಿಸಿದರು. 

ಟಾಪ್ ನ್ಯೂಸ್

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ: ಖಾರದ ಪುಡಿ ಎರಚಿ ಹಲ್ಲೆ, ಇಬ್ಬರಿಗೆ ಗಾಯ

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?

Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

ಕಲಬುರಗಿ: ಎಂಎಲ್ಸಿ ಚುನಾವಣೆಯಲ್ಲಿ ಕೈತಪ್ಪಿದ ಟಿಕೆಟ್: ಬಿಜೆಪಿಯಲ್ಲಿ ಬಂಡಾಯ ಬಿಸಿ

ಎಂಎಲ್ಸಿ ಚುನಾವಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದ ಬಿಜೆಪಿ ನಾಯಕ…

2-kalburgi

Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

1-wqew-ewqe

Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್‌!: 7 ಮಂದಿ ಸೆರೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

1-panaji

Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ

Hubli; Government should have woken up after Neha case: Jayamrinthujaya Swamiji

Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Belagavi; ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.