ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಸಿಂಧು ಸೆಮಿ ಸಂಭ್ರಮ;ಸಮೀರ್‌ ನಿರ್ಗಮನ


Team Udayavani, Sep 16, 2017, 7:50 AM IST

PV.jpg

ಸಿಯೋಲ್‌: ಭಾರತದ ಭರವಸೆಯ ಬ್ಯಾಡ್ಮಿಂಟನ್‌ ತಾರೆ, ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು “ಕೊರಿಯಾ ಓಪನ್‌ ಸೂಪರ್‌ ಸಿರೀಸ್‌ ಬ್ಯಾಡ್ಮಿಂಟನ್‌ ಟೂರ್ನಿ’ಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಆದರೆ ಪುರುಷರ ಸಿಂಗಲ್ಸ್‌ ವಿಭಾಗದ ಕೊನೆಯ ಭರವಸೆಯಾಗಿದ್ದ ಸಮೀರ್‌ ವರ್ಮ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಿಂಧು 21-19, 16  -21, 21-10 ಅಂತರದಿಂದ ಜಪಾನಿನ ಮಿನಾತ್ಸು ಮಿತಾನಿ ವಿರುದ್ಧ ಜಯ ಸಾಧಿಸಿದರು. 63 ನಿಮಿಷಗಳ ಕಾಲ ಕಾಲ ಇಬ್ಬರೂ ಆಟರ್ಗಾತಿಯರ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು.

ಮೊದಲ ಗೇಮ್‌ನ ಆರಂಭದಿಂದಲೇ ಸಿಂಧು ಭರ್ಜರಿ ಪ್ರದರ್ಶನ ನೀಡತೊಡಗಿದರು. ಆದರೆ ಜಪಾನ್‌ ಆಟಗಾರ್ತಿ ಕೂಡ ಅಂಕ ಗಳಿಕೆಯಲ್ಲಿ ಸಿಂಧು ಹಿಂದೆಯೇ ಸಾಗಿ ಬಂದರು. 19-19ರಲ್ಲಿ ಇಬ್ಬರೂ ಸಮಬಲ ಸಾಧಿಸಿದಾಗ ಪಂದ್ಯ ಅತ್ಯಂತ ಕುತೂಹಲದ ಹಂತ ಮುಟ್ಟಿತ್ತು. ಆದರೆ ಅದೃಷ್ಟ ಭಾರತೀಯಳ ಪರ ಇತ್ತು. ಅಂತಿಮವಾಗಿ ಸಿಂಧು 21-19ರಿಂದ ಗೇಮ್‌ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಆದರೆ ಎರಡನೇ ಗೇಮ್‌ನಲ್ಲಿ ಜಪಾನ್‌ ಆಟಗಾರ್ತಿ ತಿರುಗಿ ಬಿದ್ದರು. ಆರಂಭದಲ್ಲೇ 5-1ರ ಮುನ್ನಡೆ ಸಾಧಿಸಿ ತನ್ನ ಇರಾದೆಯನ್ನು ಸ್ಪಷ್ಟಪಡಿಸಿದರು. ಆದರೆ ಸಿಂಧು ಹಿಂಜರಿಯಲಿಲ್ಲ. 11-9ರ ಮುನ್ನಡೆಯೊಂದಿಗೆ ಮೇಲುಗೈ ಸೂಚನೆಯೊಂದನ್ನು ರವಾನಿಸಿದರು. ಆದರೆ ಇಲ್ಲಿಂದ ಮುಂದೆ ಸಿಂಧು ಆಟ ತುಸು ಮಂಕಾಯಿತು. 16ರ ಬಳಿಕ ಸಿಂಧು ಅಂಕ ಗಳಿಕೆಗೂ ಬ್ರೇಕ್‌ ಬಿತ್ತು. ಅಂತಿಮವಾಗಿ ಮಿತಾನಿ 21-16ರಿಂದ ಗೆದ್ದು ತಿರುಗೇಟು ನೀಡಿದರು.

ನಿರ್ಣಾಯಕ ಗೇಮ್‌ನಲ್ಲಿ ಸಿಂಧು ನೆರವಿಗೆ ಬಂದದ್ದು ಅವರ “ಸುಪೀರಿಯರ್‌ ಫಿಟ್‌ನೆಸ್‌’. ಆರಂಭದಿಂದಲೇ ಜಪಾನಿ ಆಟಗಾರ್ತಿಯ ಮೇಲೆ ಜಬರ್ದಸ್ತ್ ಆಕ್ರಮಣಕ್ಕೆ ಮುಂದಾದ ಸಿಂಧು “ಬ್ರೇಕ್‌’ ವೇಳೆ 11-3ರ ಭಾರೀ ಮುನ್ನಡೆಯಲ್ಲಿದ್ದರು. ಆಗಲೇ ಭಾರತೀಯಳ ಸೆಮಿಫೈನಲ್‌ ಖಾತ್ರಿಯಾಗಿತ್ತು. ಸಿಂಧು ಪಟಪಟನೆ ಅಂಕಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಲೇ ಹೋಗುವುದನ್ನು ಮಿತಾನಿ ನೋಡುತ್ತಲೇ ನಿಲ್ಲಬೇಕಾಯಿತು. ಸಿಂಧು 21ನೇ ಅಂಕದೊಂದಿಗೆ ಜಯಭೇರಿ ಮೊಳಗಿಸುವಾಗ ಮಿತಾನಿ ಇನ್ನೂ 10ರಲ್ಲೇ ಇದ್ದರು!
ಸೆಮಿಫೈನಲ್‌ನಲ್ಲಿ ಪಿ.ವಿ. ಸಿಂಧು ಚೀನದ ಹಿ ಬಿಂಗ್‌ಜಾವೊ ಅಥವಾ ಕೊರಿಯಾದ ಸುಂಗ್‌ ಜಿ ಹ್ಯುನ್‌ ವಿರುದ್ಧ ಸೆಣಸಬೇಕಿದೆ.

ಸಮೀರ್‌ ವರ್ಮ ಪರಾಭವ
ಪುರುಷರ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಭರವಸೆಯ ಆಟಗಾರ ಸಮೀರ್‌ ವರ್ಮ ಆತಿಥೇಯ ದೇಶದ ವರ್ಲ್ಡ್ ನಂ.1 ಆಟಗಾರ ಸನ್‌ ವಾನ್‌ ಹೊ ವಿರುದ್ಧ ಅತ್ಯುತ್ತಮ ಹೋರಾಟ ಸಂಘಟಿಸಿ 20-22, 21-10, 21-13ರಿಂದ ಸೋಲನುಭವಿಸಿದರು. ಮೊದಲ ಗೇಮ್‌ನ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಸಮೀರ್‌ ಮೇಲುಗೈ ಸಾಧಿಸಿದ್ದರು. ಆದರೆ ಕೊರಿಯಾದ ಅನುಭವಿ ಆಟಗಾರ ಅನಂತರದ ಎರಡೂ ಗೇಮ್‌ ವಶಪಡಿಸಿಕೊಂಡು ಮೆರೆದರು.

ಟಾಪ್ ನ್ಯೂಸ್

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Harbhajan Singh slams Mahendra singh Dhoni

IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ

T20 World Cup; Cricket mega event threatened by Pakistani militants

T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

police

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-weewqeq

Gadag; ಮತದಾನದ ಮುನ್ನಾ ದಿನ ಬಸ್‌ಗಳು ಫುಲ್ ರಶ್: ಜನರ ಪರದಾಟ

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.