ಬಾಲಕ ಸಾವು: ಕೇಸು ಸಿಬಿಐಗೆ
Team Udayavani, Sep 16, 2017, 10:06 AM IST
ಗುರುಗ್ರಾಮ/ಹೊಸದಿಲ್ಲಿ: ಗುರು ಗ್ರಾಮದ ರೇಯಾನ್ ಇಂಟರ್ನ್ಯಾಷನಲ್ ಶಾಲೆಯ ಆಡಳಿತವನ್ನು ಹರ್ಯಾಣ ಸರಕಾರ 3 ತಿಂಗಳ ಮಟ್ಟಿಗೆ ವಹಿಸಿಕೊಂಡಿದ್ದು, ಬಾಲಕನ ಸಾವಿನ ತನಿಖೆಯ ಹೊಣೆ ಯನ್ನು ಸಿಬಿಐಗೆ ಒಪ್ಪಿಸಿದೆ. ಬಾಲಕನ ಕುಟುಂಬ ಸದಸ್ಯರನ್ನು ಬೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಈ ಘೋಷಣೆ ಮಾಡಿದ್ದಾರೆ. ಕೇಂದ್ರ ತನಿಖಾ ಸಂಸ್ಥೆ ಶೀಘ್ರವೇ ಮುಗ್ಧ ಬಾಲಕನ ಸಾವಿಗೆ ಕಾರಣ ಏನು ಮತ್ತು ಯಾರು ಎನ್ನುವುದನ್ನು ಸಮರ್ಪಕವಾಗಿ ತನಿಖೆ ನಡೆಸಿ ಪತ್ತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಗುರುಗ್ರಾಮದ ಜಿಲ್ಲಾಧಿಕಾರಿ ನೇತೃತ್ವದ ಆಡಳಿತ ಮಂಡಳಿ ಮುಂದಿನ ಮೂರು ತಿಂಗಳ ಕಾಲ ಶಾಲೆಯ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಲಿದೆ ಎಂದು ಖಟ್ಟರ್ ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ಪುತ್ರನ ಹೊಣೆಯನ್ನು ಶಾಲೆಯ ಆಡಳಿತ ಮಂಡಳಿಯೇ ಹೊರಬೇಕು ಎಂದು ತಂದೆ ಬರುನ್ ಠಾಕೂರ್ ಒತ್ತಾಯಿಸಿದ ವೇಳೆ ಖಟ್ಟರ್ ಈ ನಿರ್ಧಾರ ಕೈಗೊಂಡರು.
ನೋಟಿಸ್: ಇದೇ ವೇಳೆ ದೇಶಾದ್ಯಂತ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಮೂರು ವಾರಗಳಲ್ಲಿ ವರದಿ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ