ಸಾಂಗ್ಲಿ ಬಳಿ ಲಾರಿ ಪಲ್ಟಿ: ರಾಜ್ಯದ 10 ಕಾರ್ಮಿಕರ ಸಾವು
Team Udayavani, Oct 22, 2017, 6:40 AM IST
ಸಿಂದಗಿ/ಚಿಕ್ಕೋಡಿ: ಮಹಾರಾಷ್ಟ್ರದ ಸಾಂಗ್ಲಿಯ ತಾಸಗಾಂವ ಹತ್ತಿರ ಹಾಸು ಕಲ್ಲಿನ ಲಾರಿ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜ್ಯದ ಸಿಂದಗಿ, ಕಲಬುರ್ಗಿ ಮತ್ತು ಬೀದರ್ ಮೂಲದ 10 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 12 ಮಂದಿಗೆ ಗಂಭೀರ ಗಾಯಗಳಾದ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.
ಮೃತರನ್ನು ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದ ನಿಸಾರಸಾಬ ಅಂಕಲಗಿ (37), ಪತ್ನಿ ಕಮರುಲಬಿ ನಿಸ್ಸಾರಸಾಬ ಅಂಕಲಗಿ (35), ಮಗಳು ಚಾಂದನಿ (12), ಭೀಮರಾಯ ಅಪ್ಪಣ್ಣ ಮಣೂರ (60), ಪತ್ನಿ ಅವ್ವಾಬಾಯಿ ಭೀಮರಾಯ ಮಣೂರ (55), ಮಗ ಅಪ್ಪಣ್ಣ ಭೀಮರಾಯ (36) ಮಂಗಳೂರು ಗ್ರಾಮದ ಸಂಗವ್ವ ಸಿದ್ದಪ್ಪ ಕೊಗನೂರ (70), ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಣಮೇಶ್ವರ ಗ್ರಾಮದ ಶ್ರೀಮಂತಗೌಡ ಗೋಲ್ಲಾಳಪ್ಪಗೌಡ ಬಿರಾದಾರ (55), ಇಂಡಿ ತಾಲೂಕಿನ ಹತ್ತರಕಿ ಗ್ರಾಮದ ಬಕೀರ ರಾಯಪ್ಪ ರಾಠೊಡ (50), ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ರಾಮತೀರ್ಥವಾಡಿ ಗ್ರಾಮದ ಈರವ್ವ ಮಹಾದೇವಿ ದಂಡಗೂಲಿ (45) ಎಂದು ಗುರುತಿಸಲಾಗಿದೆ.
ನಸುಕಿನ ಜಾವ ಮಂಜು ಆವರಿಸಿದ್ದರಿಂದ ಸಾಂಗ್ಲಿ ಜಿಲ್ಲೆಯ ತಾಸಗಾಂವ ಕೌಟೆಮಹಾಕಾಳ ಬಳಿ ಸಿಂದಗಿ ಮೂಲದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಹಾಸು ಕಲ್ಲುಗಳು ಕಾರ್ಮಿಕರ ಮೇಲೆ ಬಿದ್ದಿದೆ. ಲಾರಿಯಲ್ಲಿದ್ದ 22 ಜನರಲ್ಲಿ 12 ಜನರು ಗಾಯಗೊಂಡಿದ್ದು, ಸಾಂಗ್ಲಿ ಮತ್ತು ಮಿರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃಷಿ ಕಾರ್ಮಿಕರು ಮಹಾರಾಷ್ಟ್ರದ ಸತಾರಾ ಮತ್ತು ಕರಾಡದಲ್ಲಿನ ಶುಂಠಿ ಬೆಳೆ ಕಟಾವು ಮಾಡಲು ಹೊರಟಿದ್ದರು ಎನ್ನಲಾಗಿದೆ.
ಹಬ್ಬ ಮುಗಿಸಿ ಹೊರಟಿದ್ದರು!: ದೀಪಾವಳಿ ನಿಮಿತ್ತ ತಮ್ಮ ಹಳ್ಳಿಗೆ ಆಗಮಿಸಿ ಹಬ್ಬ ಮುಗಿಸಿಕೊಂಡು ಶುಕ್ರವಾರ ರಾತ್ರಿ ಹಾಸು ಕಲ್ಲು ತುಂಬಿದ ಲಾರಿಯಲ್ಲಿ ಕರಾಡಕ್ಕೆ ಮರಳುತ್ತಿದ್ದರು. ಮಹಾರಾಷ್ಟ್ರದಲ್ಲಿ 4 ದಿನಗಳಿಂದ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ನಡೆದಿದ್ದರಿಂದ ಮಹಾರಾಷ್ಟ್ರದ ಬಸ್ಗಳು ರಾಜ್ಯಕ್ಕೆ ಸಂಚಾರ ಸ್ಥಗಿತಗೊಳಿಸಿದ್ದವು. ಇದರಿಂದ ಇವರೆಲ್ಲರೂ ಲಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಕುರಿತು ತಾಜಗಾವ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
MUST WATCH
ಹೊಸ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?