ಕಾರ್ಮಿಕರಿಂದ ಮ್ಯಾನ್ಹೋಲ್ ಸ್ವಚ್ಚತಾ ಕಾರ್ಯ: ಪ್ರಕರಣ ದಾಖಲು
Team Udayavani, Oct 23, 2017, 9:40 AM IST
ಮಂಗಳೂರು: ನಗರದ ಬಂದರ್ನ ನೆಲ್ಲಿಕಾಯಿ ರಸ್ತೆಯ ಒಳ ಚರಂಡಿ ವ್ಯವಸ್ಥೆಯ ಮ್ಯಾನ್ಹೋಲ್ನಲ್ಲಿ ಕಳೆದ ಬುಧವಾರ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಿದ ಬಗ್ಗೆ ಪಾಲಿಕೆಯ ಗುತ್ತಿಗೆದಾರರು ಮತ್ತು ಎಂಜಿನಿಯರ್ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಐಟಿಯು ಸಂಘಟನೆಯ ಯೋಗೀಶ್ ಜಪ್ಪಿನಮೊಗರು ಅವರು ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಾರ್ಮಿಕರನ್ನು ಒಳ ಚರಂಡಿ ಗುಂಡಿಗೆ ಇಳಿಸ ಬಾರದು ಎಂಬ ನಿಯಮ ಇದ್ದರೂ ಕಾನೂನು ಉಲ್ಲಂಘಿಸಿ ಒಳ ಚರಂಡಿಯ ಬ್ಲಾಕ್ ಸರಿ ಪಡಿಸಲು ದಲಿತ ಸಮುದಾಯದ ಕಾರ್ಮಿಕರನ್ನು ಯಾವುದೇ ಸುರಕ್ಷಾ ಸೌಕರ್ಯಗಳನ್ನು ಒದಗಿಸದೆ ಮ್ಯಾನ್ಹೋಲ್ಗೆ ಇಳಿಸಿ ಕೆಲಸ ಮಾಡಿಸಲಾಗಿದೆ. ಎಂದವರು ದೂರಿನಲ್ಲಿಐ ತಿಳಿಸಿದ್ದಾರೆ.
ಈ ಬಗ್ಗೆ ಗುತ್ತಿಗೆದಾರ ನಜೀರ್ ಮತ್ತು ಮಹಾನಗರ ಪಾಲಿಕೆಯ ಎಂಜಿನಿಯರ್ ಹಾಗೂ ಪಾಲಿಕೆಯ ಇತರ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರಗಿಸ ಬೇಕು ಎಂದು ಯೋಗೀಶ್ ಜಪ್ಪಿನಮೊಗರು ಅವರು ದೂರಿನಲ್ಲಿ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ