1969ರ ಸಮ್ಮೇಳನಕ್ಕೆ ಆರು ತಿಂಗಳ ತಯಾರಿ…


Team Udayavani, Nov 21, 2017, 8:36 AM IST

21-9.jpg

ಉಡುಪಿ: 1969ರ ಡಿಸೆಂಬರ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷದ್‌ ಪ್ರಥಮ ಪ್ರಾಂತ ಸಮ್ಮೇಳನಕ್ಕೆ ಸುಮಾರು ಆರು ತಿಂಗಳು ತಯಾರಿ ನಡೆದಿತ್ತು. ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಕೃ. ಸೂರ್ಯನಾರಾಯಣ ರಾವ್‌ ಅವರು ಆರು ತಿಂಗಳು ಉಡುಪಿಯಲ್ಲಿ ನಿಂತು ಸಮ್ಮೇಳನವನ್ನು ಯಶಸ್ವಿಯಾಗುವಂತೆ ಮಾಡಿದ್ದರು ಎನ್ನುತ್ತಾರೆ ಆರ್‌ಎಸ್‌ಎಸ್‌ ಹಿರಿಯ ಕಾರ್ಯಕರ್ತ ಎಂ. ಸೋಮಶೇಖರ್‌ ಭಟ್‌.

ಉದಯವಾಣಿಯೊಂದಿಗೆ ತಮ್ಮ ಆಂದಿನ ನೆನಪನ್ನು ಹಂಚಿಕೊಂಡ ಅವರು, ವಿಹಿಂಪ ಮುಂದಾಳು ಶಿವಮೊಗ್ಗದ ಹೊ.ನ. ನರಸಿಂಹ ಮೂರ್ತಿ ಅಯ್ಯಂಗಾರರು 60 ಮಂದಿ ಸ್ವಾಮೀಜಿಯವರನ್ನು ಸಂಪರ್ಕಿಸಿ ಪಾಲ್ಗೊಳ್ಳುವಂತೆ ಮಾಡಿದ್ದರು. ಪುರಸಭೆ ಅಧ್ಯಕ್ಷರಾಗಿದ್ದ ಡಾ| ವಿ.ಎಸ್‌. ಆಚಾರ್ಯ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆಯಾಗಿತ್ತು.  ನಾನು ಪುರಸಭೆಯ ಸದಸ್ಯನೂ ಸ್ವಾಗತ ಸಮಿತಿಯ ಓರ್ವ ಕಾರ್ಯದರ್ಶಿಯೂ ಆಗಿದ್ದೆ. ಪೂರ್ಣಪ್ರಜ್ಞ ಕಾಲೇಜಿನ ಮೈದಾನದಲ್ಲಿ ಸಮ್ಮೇಳನ ನಡೆದರೆ ವೆಂಕಟರಮಣ ದೇವಸ್ಥಾನ, ಬೋರ್ಡ್‌ ಹೈಸ್ಕೂಲ್‌, ಕ್ರಿಶ್ಚಿಯನ್‌ ಹೈಸ್ಕೂಲ್‌, ವಳಕಾಡು ಶಾಲೆ, ಎಂಜಿಎಂ ಕಾಲೇಜಿನಲ್ಲಿ ವಸತಿ ವ್ಯವಸ್ಥೆ ಮಾಡಿದ್ದೆವು. ಸಂಸ್ಕೃತ ಕಾಲೇಜು ಗೋಡೌನ್‌ ಆಗಿತ್ತು. ವೆಂಕಟರಮಣ ದೇವಸ್ಥಾನದಲ್ಲಿ ಮಹಿಳೆಯರಿಗೆ ವಸತಿ ಇತ್ತು. ಅಲ್ಲಿಗೆ ಸಮ್ಮೇಳನ ನಡೆಯುವ ಸ್ಥಳ ಹತ್ತಿರದಲ್ಲೇ ಇದ್ದುದರಿಂದ ಮಹಿಳೆಯರಿಗೆ ಅನುಕೂಲವಾಗಿತ್ತು. 

ಅದಮಾರು ಮಠದ ಅತಿಥಿಗೃಹದಲ್ಲಿ ಸ್ವಾಗತ ಸಮಿತಿ ಕಾರ್ಯಾಲಯವಿತ್ತು. ಎಲ್ಲ ವಸತಿ ವ್ಯವಸ್ಥೆ ಇರುವಲ್ಲಿ ತಾತ್ಕಾಲಿಕ ಟೆಲಿಫೋನ್‌ ಸಂಪರ್ಕ ಇಟ್ಟುಕೊಂಡ ಪರಿಣಾಮ ನಿಭಾಯಿಸಲು ಅನುಕೂಲ ವಾಯಿತು. ಕಾರ್ಯಾಲಯದಲ್ಲಿ ನಾನೇ ನಿಂತು ವ್ಯವಸ್ಥೆ ನೋಡಿಕೊಂಡಿದ್ದೆ.

ಹೀಗೊಂದು ಪ್ರಸಂಗ
ಮೇವಾಡದ ಮಹಾರಾಜರು ವಿಹಿಂಪ ಅಧ್ಯಕ್ಷರಾಗಿದ್ದರು. ಅವರಿಗೆ ನಗರಸಭೆಯಿಂದ ಪೌರ ಸಮ್ಮಾನ ನೀಡಿದಾಗ ಮಣಿ ಪಾಲದ ಶಿಲ್ಪಿ ಡಾ| ಟಿಎಂಎ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್‌ ಸರಸಂಘಚಾಲಕ್‌ ಗುರೂಜಿ ಗೋಳವಲ್ಕರ್‌ ಅವರು ವೇದಿಕೆಯ ಕೆಳಗೆ ಕುಳಿತಿದ್ದರು. (ಸಂಘದ ಹಿರಿಯರು ಪೌರ ಸಮ್ಮಾನದಂತಹ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕುಳಿತುಕೊಳ್ಳುವುದಿಲ್ಲ) ಇದನ್ನು ನೋಡಿದ ಡಾ| ಟಿಎಂಎ ಪೈಯವರು ಕೆಳಗೆ ಬಂದು ಗುರೂಜಿ ಯವರನ್ನು ಒತ್ತಾಯಿಸಿ ವೇದಿಕೆಯ ಮೇಲಕ್ಕೆ ಕರೆದರು. “ನಾನು ಮಾತನಾಡುವುದಿಲ್ಲ’ ಎಂಬ ಷರತ್ತಿನ ಮೇರೆಗೆ ಮೇಲೆ ಬರಲು ಒಪ್ಪಿ ವೇದಿಕೆ ಏರಿದರು.

ಹೊಟೇಲಿನವರ ಸಹಕಾರ ಹೀಗಿತ್ತು
ಆರು ಕಡೆ ವಸತಿ ವ್ಯವಸ್ಥೆ ಕಲ್ಪಿಸಿದ್ದೆವು. ಎಲ್ಲ ವಸತಿ ಇರುವಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಿದ್ದೆವು. ಎಲ್ಲರೂ ಅವರವರ ವಸತಿಗೆ ಹೋಗಿಯೇ ಊಟ ಮಾಡಬೇಕಿತ್ತು. ಬೆಳಗ್ಗೆ ಮಾತ್ರ ಸಕಾರಣ ಬೆಲೆಯಲ್ಲಿ (ರೀಸನೇಬಲ್‌) ಕಾಫಿ, ತಿಂಡಿ ಕೊಡಬೇಕೆಂದು ಹೊಟೇಲಿನವರಲ್ಲಿ ಮನವಿ ಮಾಡಿದಂತೆ ಹೊಟೇಲಿನವರು ಸಹಕರಿಸಿದ್ದರು. ಬೆಳಗ್ಗೆ 5.30ಕ್ಕೆ ಹೊಟೇಲು ತೆರೆದು ಸಹಕರಿಸಿದರು. ಇದೊಂದು ಸ್ಮರಣೀಯ ವಿಷಯ.

ನೀರಿನ ನಿಭಾವಣೆ ಹೀಗಿತ್ತು 
ಆಗ ಸ್ವರ್ಣಾ ಯೋಜನೆ ಇರಲಿಲ್ಲ. ನೀರಿಗಾಗಿ ಬಾವಿಗಳನ್ನೇ ನಂಬ ಬೇಕಿತ್ತು. 8-10 ಬಾವಿಗಳಲ್ಲಿ ಪಂಪಿಂಗ್‌ ನಡೆಸಿ ನೀರಿನ ವ್ಯವಸ್ಥೆ ಮಾಡಿದ್ದೆವು. ಡಿಸೆಂಬರ್‌ ಆದ ಕಾರಣ ನೀರಿನ ಸಮಸ್ಯೆ ಅಷ್ಟು ತಲೆದೋರಲಿಲ್ಲ.

ಹಣ ಸಂಗ್ರಹದಲ್ಲಿ ಉಳಿಕೆ
ಗ ಪ್ರತಿನಿಧಿ ಶುಲ್ಕ 35 ರೂ. ಇತ್ತು. ಅವಿಭಜಿತ ದ.ಕ. ಜಿಲ್ಲೆಯವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿ ಶುಲ್ಕ ಕೊಟ್ಟು ಬೆಳಗ್ಗೆ ಬಂದು ರಾತ್ರಿ ವಾಪಸಾಗುತ್ತಿದ್ದರು. ಆದ್ದರಿಂದ ಅವರಿಗೆ ವಸತಿ ವ್ಯವಸ್ಥೆ ಮಾಡುವ ಅಗತ್ಯ ಬರಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಶುಲ್ಕ ತೆತ್ತು ಪ್ರತಿನಿಧಿಗಳನ್ನು ನೋಂದಾಯಿಸಿದ ಪರಿಣಾಮ 1 ಲ.ರೂ. ಮೊತ್ತವನ್ನು ವಿಹಿಂಪ ನಿಧಿಗೆ ಕೊಡಲು ಸಾಧ್ಯವಾಯಿತು. 

ಟಾಪ್ ನ್ಯೂಸ್

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.