ಆ್ಯಶಸ್‌: ಇಂಗ್ಲೆಂಡ್‌ ಆಮೆಗತಿಯ ಆಟ


Team Udayavani, Nov 24, 2017, 6:10 AM IST

amegati-ata.jpg

ಬ್ರಿಸ್ಬೇನ್‌: ಪ್ರತಿಷ್ಠಿತ ಆ್ಯಶಸ್‌ ಸರಣಿ “ನಿಧಾನ ಗತಿ’ಯಲ್ಲಿ ಮೊದಲ್ಗೊಂಡಿದ್ದು, ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಇಂಗ್ಲೆಂಡ್‌ 80.3 ಓವರ್‌ಗಳಲ್ಲಿ 4 ವಿಕೆಟಿಗೆ ಕೇವಲ 196 ರನ್‌ ಗಳಿಸಿದೆ. ಪಂದ್ಯಕ್ಕೆ ಮಳೆಯಿಂದಲೂ ಅಡಚಣೆಯಾಯಿತು.

ಬ್ರಿಸ್ಬೇನ್‌ನ “ಗಾಬಾ’ ಅಂಗಳದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸುವ ಇಂಗ್ಲೆಂಡ್‌ ಕಪ್ತಾನ ಜೋ ರೂಟ್‌ ಅವರ ನಿರ್ಧಾರ ಫ‌ಲ ಕೊಡಲಿಲ್ಲ. ಅನುಭವಿ ಆರಂಭಕಾರ, ಮಾಜಿ ನಾಯಕ ಅಲಸ್ಟೇರ್‌ ಕುಕ್‌ ಆವರನ್ನು ಪಂದ್ಯದ 3ನೇ ಓವರಿನಲ್ಲೇ ವೇಗಿ ಮಿಚೆಲ್‌ ಸ್ಟಾರ್ಕ್‌ ಬಲಿ ಪಡೆಯುವುದರೊಂದಿಗೆ ಆಸೀಸ್‌ಗೆ ಮೇಲುಗೈ ಒದಗಿಸಿದರು. ಕುಕ್‌ ಗಳಿಕೆ ಕೇವಲ 2 ರನ್‌.

ಸ್ಟೋನ್‌ಮ್ಯಾನ್‌-ವಿನ್ಸ್‌ ರಕ್ಷಣೆ
ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ಮಾರ್ಕ್‌ ಸ್ಟೋನ್‌ಮ್ಯಾನ್‌ ಮತ್ತು ಜೇಮ್ಸ್‌ ವಿನ್ಸ್‌ ಬಂಡೆಯಂತೆ ನಿಂತು ಪರಿಸ್ಥಿತಿಯನ್ನು ಸುಧಾರಿಸಲು ಯತ್ನಿಸಿದರು. ಇದರಲ್ಲಿ ಯಶಸ್ವಿಯೂ ಆದರು.  2ನೇ ವಿಕೆಟಿಗೆ 105 ರನ್‌ ಒಟ್ಟುಗೂಡಿಸಿದರು. ಇವರ ಆಟ ಅತ್ಯಂತ ಎಚ್ಚರಿಕೆ ಹಾಗೂ ಅಷ್ಟೇ ನಿಧಾನ ಗತಿಯಿಂದ ಕೂಡಿತ್ತು. ಈ 105 ರನ್ನಿಗೆ ಬರೋಬ್ಬರಿ 52 ಓವರ್‌ ತೆಗೆದುಕೊಂಡರು. ಆದರೆ ಇಬ್ಬರೂ ಅರ್ಧ ಶತಕದೊಂದಿಗೆ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. ಈ ಜೋಡಿ ಬೇರ್ಪಟ್ಟ ಬಳಿಕ ಪ್ಯಾಟ್‌ ಕಮಿನ್ಸ್‌ 2 ಪ್ರಬಲ ಆಘಾತವಿಕ್ಕಿದರು. ಒಟ್ಟಾರೆಯಾಗಿ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯವೇ ಮೇಲುಗೈ ಸಾಧಿಸಿದೆ ಎನ್ನಲಡ್ಡಿಯಿಲ್ಲ.

3ನೇ ಟೆಸ್ಟ್‌ ಆಡುತ್ತಿರುವ ಎಡಗೈ ಆರಂಭಕಾರ ಮಾರ್ಕ್‌ ಸ್ಟೋನ್‌ಮ್ಯಾನ್‌ 159 ಎಸೆತ ಎದುರಿಸಿ, ಕೇವಲ 3 ಬೌಂಡರಿ ನೆರವಿನಿಂದ  53 ರನ್‌ ಹೊಡೆದರು. ಇದು ಸ್ಟೋನ್‌ಮ್ಯಾನ್‌ ಅವರ 2ನೇ ಅರ್ಧ ಶತಕ. ಒಂದು ರನ್ನಿನಿಂದ ತಮ್ಮ ಜೀವನಶ್ರೇಷ್ಠ ಬ್ಯಾಟಿಂಗನ್ನು ಸುಧಾರಿಸಿಕೊಂಡರು. 8ನೇ ಟೆಸ್ಟ್‌ ಆಡಲಿಳಿದ ಬಲಗೈ ಆಟಗಾರ ಜೇಮ್ಸ್‌ ವಿನ್ಸ್‌ 170 ಎಸೆತಗಳನ್ನೆದುರಿಸಿ 83 ರನ್‌ ಬಾರಿಸಿದರು. ಇದು ಅವರ ಪ್ರಥಮ ಅರ್ಧ ಶತಕ. 12 ಬೌಂಡರಿಗಳ ಮೂಲಕ ಆಸೀಸ್‌ ಬೌಲರ್‌ಗಳನ್ನು ದಂಡಿಸಿದರು. ಸೆಂಚುರಿ ನಿರೀಕ್ಷೆ ಮೂಡಿಸಿದ್ದ ವಿನ್ಸ್‌ ದುರದೃಷ್ಟವಶಾತ್‌ ರನೌಟ್‌ ಸಂಕಟಕ್ಕೆ ಸಿಲುಕಿದರು.

ನಾಯಕ ಜೋ ರೂಟ್‌ ಬೇರೂರಿ ನಿಲ್ಲಲಿಲ್ಲ. ಕೇವಲ 15 ರನ್‌ ಮಾಡಿ ಕಮಿನ್ಸ್‌ಗೆ ಲೆಗ್‌ ಬಿಫೋರ್‌ ಆದರು. 50 ಎಸೆತಗಳ ಈ ಆಟದಲ್ಲಿ ಒಂದು ಬೌಂಡರಿ ಇತ್ತು.

5ನೇ ವಿಕೆಟಿಗೆ ಜತೆಗೂಡಿರುವ ಡೇವಿಡ್‌ ಮಾಲನ್‌-ಮೊಯಿನ್‌ ಅಲಿ ದಿನದ ಅಂತಿಮ ಅವಧಿಯ 10 ಓವರ್‌ಗಳ ಆಟವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇವರಿಬ್ಬರ ಜತೆಯಾಟದಲ್ಲಿ 51 ರನ್‌ ಒಟ್ಟುಗೂಡಿದೆ. ಇಂಗ್ಲೆಂಡ್‌ ಪಾಲಿಗೆ ಇವರಿಬ್ಬರ ಜತೆಯಾಟ ನಿರ್ಣಾಯಕ. ಬೇರ್‌ಸ್ಟೊ, ವೋಕ್ಸ್‌ ಆಟ ಬಾಕಿ ಇದೆ.
ಆಸ್ಟ್ರೇಲಿಯ ಪರ ಕೆಮರಾನ್‌ ಬಾನ್‌ಕ್ರಾಫ್ಟ್ ಟೆಸ್ಟ್‌ ಪ್ರವೇಶ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-4 ವಿಕೆಟಿಗೆ 196 (ವಿನ್ಸ್‌ 83, ಸ್ಟೋನ್‌ಮ್ಯಾನ್‌ 53, ಮಾಲನ್‌ ಬ್ಯಾಟಿಂಗ್‌ 28, ರೂಟ್‌ 15, ಅಲಿ ಬ್ಯಾಟಿಂಗ್‌ 13, ಕುಕ್‌ 2, ಕಮಿನ್ಸ್‌ 59ಕ್ಕೆ 2, ಸ್ಟಾರ್ಕ್‌ 45ಕ್ಕೆ 1).

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.