ಅನಂತಕುಮಾರ್‌ ಮಾತು ಗಂಗೆಯಂತೆ ಹೊಲಸಾಗಿತ್ತು!


Team Udayavani, Nov 27, 2017, 8:23 AM IST

27-4.jpg

ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ: ಚಂಪಾ ಈಗ ಎಂದಿನಂತೆ ಮಾತನಾಡುತ್ತಿಲ್ಲ ಎಂಬ ಅನುಮಾನಗಳಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ತೆರೆಬಿತ್ತು. ಅವರದೇ ಮಾತಿನ ಪ್ರಕಾರ ಕಾಟಾಚಾರದ ಕೃತಜ್ಞತೆ ಹೇಳುವ ಸಮ್ಮೇಳನಾಧ್ಯಕ್ಷರ ಸಮಾರೋಪದ ನುಡಿಗಳಿಗೆ ಬದಲಾಗಿ ತಮ್ಮನ್ನು ಟೀಕಿಸಿದವರಿಗೆ ಪ್ರತ್ಯುತ್ತರ ನೀಡಲು ಅವಕಾಶವನ್ನು ಬಳಸಿಕೊಂಡರು.

ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಅನಂತ ಕುಮಾರ್‌, ವೇದಿಕೆಯಲ್ಲೇ ಚಂಪಾ ಅವರ ಸೆಕ್ಯುಲರ್‌ ಪಕ್ಷಗಳಿಗೆ ಮತ ನೀಡಿ ಎಂಬ ಹೇಳಿಕೆಯನ್ನು ಬಲವಾಗಿ ಟೀಕಿಸಿದ್ದರು. ತಾಯಿ ಭುವನೇಶ್ವರಿ ಗುಡಿಯೊಳಗೆ ಹೋಗದ ಅವರ ಕ್ರಮಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದರು. ಪವಿತ್ರ ವೇದಿಕೆಯನ್ನು ರಾಜಕೀಯದಿಂದ ಅಪವಿತ್ರ ಮಾಡಬಾರದೆಂದು ಹೇಳಿದ್ದರು. ಒಂದು ಕಡೆ
ಅನಂತಕುಮಾರ್‌ರನ್ನು ಹೊಗಳುತ್ತಲೇ ಅವರೆಲ್ಲ ಮಾತುಗಳಿಗೆ ಚಂಪಾ ಬಲವಾದ ತಿರುಗೇಟು ನೀಡಿದರು.

ಅನಂತಕುಮಾರ್‌ ಈ ಪವಿತ್ರ ವೇದಿಕೆ ಯನ್ನು ರಾಜಕೀಯಕ್ಕೆ ಬಳಸಿಕೊಂಡು ಅಪವಿತ್ರ ಮಾಡಬಾರದು ಎಂದು ಹೇಳಿದರು.
ಆದರೆ ಇಡೀ ಭಾಷಣ ಪೂರ್ತಿ ರಾಜಕೀಯವನ್ನೇ ಮಾತನಾಡಿದರು. ಅಷ್ಟು ಮಾತ್ರವಲ್ಲ ತಾವು ಮಾತನಾಡಿದ್ದನ್ನು ಮಾತನಾಡಿ, ಇನ್ನೊಬ್ಬರು ಮಾತನಾಡಿದ್ದನ್ನು ಕೇಳುವ ಸಂಯಮವೂ ಇಲ್ಲದೇ ನೆವ ಹೇಳಿ ಎದ್ದು ಹೋದರು. ಇದು ನನಗೆ ಬೇಸರವುಂಟು
ಮಾಡಿದೆ ಎಂದು ಕುಟುಕಿದರು.

ಚಂಪಾ ನನ್ನ ಮೇಷ್ಟ್ರು ಎಂದು ಅನಂತ ಕುಮಾರ್‌ ಹೇಳಿದರು. ಆದರೆ ಆತ ನನ್ನ ಶಿಷ್ಯನೂ ಅಲ್ಲ, ನಾನು ಅವರ ಗುರುವೂ ಅಲ್ಲ.
ಗಂಗಾನದಿಯಲ್ಲಿ ಹಿಮಾಲಯದ ಶುದ್ಧ ನೀರೂ ಇರುತ್ತದೆ, ಗಟಾರದ ಹೊಲಸೂ ಇರುತ್ತದೆ. ಕೇಂದ್ರ ಸಚಿವರ ಇಂದಿನ
ಭಾಷಣದಲ್ಲಿ ಪವಿತ್ರತೆ ಜೊತೆಗೆ ಹೊಲಸೂ ಇತ್ತು. ಇದನ್ನು ಅನಂತಕುಮಾರ್‌ ಅವರು ಇಲ್ಲಿ ಬಿಟ್ಟು ಹೋಗಿರುವ ಕಣ್ಣು ಕಿವಿಗಳು
ಅವರಿಗೆ ವರದಿ ಮಾಡಲಿ ಎಂದು ವಿಡಂಬಿಸಿದರು.

ನಿಜವೆಂದರೆ ನಾನು ಯಾರಿಗೂ ಮತನೀಡಿ ಎಂದು ಕೇಳಿಲ್ಲ. ರಾಜ್ಯದ ಹಿತಕಾಯುವ ಬದ್ಧತೆಯಿರುವ ಪ್ರಾದೇಶಿಕ, ಸೆಕ್ಯುಲರ್‌ ಪಕ್ಷಕ್ಕೆ
ಮತಹಾಕಿ ಎಂದಿದ್ದೇನೆ. ಅದನ್ನು ಕೇಳಿ ಅನಂತ ಕುಮಾರ್‌ ನಿ¨ªೆಯಲ್ಲಿ ಉಚ್ಚೆ ಹೊಯ್ಯುವ  ಕ್ಕಳಂತೆ ಹೆದರಿ ಒದ್ದಾಡಿದ್ದಾರೆ. ಪ್ರಾದೇಶಿಕ ಪಕ್ಷವನ್ನು ಚುನಾಯಿಸಿ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು ಎಂದು ತಮ್ಮ ವಿವಾದಿತ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಪ್ರತಾಪ್‌ ಸಿಂಹಗೂ ಕುಟುಕು: ಕಾರ್ಯಕ್ರಮಕ್ಕೆ ಬಂದರೂ ಪ್ರತಾಪ್‌ ಸಿಂಹ ಜವಾಬ್ದಾರಿಯಿಲ್ಲದೇ ನಡೆದುಕೊಂಡರು. ಅವರಾದರೂ
ಇಲ್ಲಿನ ಸಂಸದರಾಗಿ ಕಾರ್ಯಕ್ರಮದಲ್ಲಿ ಉಳಿದುಕೊಂಡು ಜವಾಬ್ದಾರಿ ತೋರಬಹುದಿತ್ತು. ಆದರೆ, ಬಸವನ ಹಿಂದಿನ ಬಾಲದಂತೆ
ಹೊರಟು ಹೋದರು ಎಂದು ಚಂಪಾ ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿಗೆ ಸಮರ್ಥನೆ: ಪ್ರತಾಪ್‌ ಸಿಂಹ ಟಿಪ್ಪು ಜಯಂತಿಯನ್ನು ಟೀಕಿಸಿದರು. ಆದರೆ ಟಿಪ್ಪು ವೀರಯೋಧ. ಸ್ವಾತಂತ್ರ್ಯ ಹೋರಾಟ ಮಾಡಿದಾತ. ಅವನ ಜಯಂತಿ ಮಾಡಿದರೆ ಸಿಟ್ಟೇಕೆ ಎಂದು ಚಂಪಾ ಪ್ರಶ್ನಿಸಿದರು. 

ಕೆ. ಪೃಥ್ವಿಜಿತ್‌

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

1-ewqqwe

Revanna Case; ಸಾಲ ತೀರಿಸೋಕೆ ಕೂಲಿಗೆ ಬಂದಿದ್ದೀನಿ ಅಂತ ಮಹಿಳೆ ಹೇಳಿದ್ಲು

BJP leaders ನಡ್ಡಾ, ವಿಜಯೇಂದ್ರ ವಿರುದ್ಧ ಎಫ್ಐಆರ್‌

BJP leaders ನಡ್ಡಾ, ವಿಜಯೇಂದ್ರ ವಿರುದ್ಧ ಎಫ್ಐಆರ್‌

Prajwal Revanna ಮಾಜಿ ಕಾರು ಚಾಲಕ ಎಲ್ಲಿದ್ದಾನೆ ಎಂದು ಎಸ್‌ಐಟಿಗೆ ಗೊತ್ತು: ಪರಮೇಶ್ವರ್‌

Prajwal Revanna ಮಾಜಿ ಕಾರು ಚಾಲಕ ಎಲ್ಲಿದ್ದಾನೆ ಎಂದು ಎಸ್‌ಐಟಿಗೆ ಗೊತ್ತು: ಪರಮೇಶ್ವರ್‌

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.