ಭಯಾನಕ ದೃಶ್ಯ;ಎದೆಗೇ ಹೊಕ್ಕ ರೆಂಬೆ,ಆದರೂ ಬದುಕುಳಿದ !!
Team Udayavani, Nov 29, 2017, 11:36 AM IST
ಯಲ್ಲಾಪುರ: ಇಲ್ಲಿಯ ಮಂಚಿಕೇರಿ ಗ್ರಾಮದಲ್ಲಿ ನೆಲ್ಲಿಕಾಯಿ ಕೀಳಲೆಂದು ಮರಹತ್ತಿದ ಯುವಕನೊಬ್ಬ ಆಯತಪ್ಪಿ ಬಿದ್ದಾಗ ಆತನ ಪಕ್ಕೆಲುಬಿನಿಂದ ರೆಂಬೆ ಸೀಳಿಕೊಂಡು ಹೊರಬಂದ ಭಯಾನಕ ಘಟನೆ ಸೋಮವಾರ ಮಧ್ಯಾಹ್ನ ನಡೆದಿದ್ದು,ಇದೀಗ ಸಾಮಾಜಿಕ ತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.
ಮಹಾಬಲೇಶ್ವರ್ ಸಿದ್ಧಿ (21) ಎಂಬ ಯುವಕ ಮರವೇರಿದಾಗ ಆಯತಪ್ಪಿ ಬಿದ್ದಿದ್ದು, ಕೆಳಗಿದ್ದ ರೆಂಬೆಯೊಂದು ಎಡ ಭಾಗದ ಎದೆಯ ಭಾಗದಪಕ್ಕೆಲುಬನ್ನು ದಾಟಿ ಕೊಂಡು ಹೊರಬಂದಿದೆ. ಸ್ವಲ್ಪ ತಪ್ಪಿದರು ಹೃದಯವನ್ನೇ ಸೀಳಿ ಹೋಗುತ್ತಿತ್ತು.
ಸಕಾಲಕ್ಕೆ ನೆರವಿಗೆ ಆಗಮಿಸಿದ ಸ್ನೇಹಿತರು ರೆಂಬೆಯನ್ನು ಹೊರತೆಗೆಯಲು ಯತ್ನಿಸಿದರಾದೂ ಸಾಧ್ಯವಾಗದೇ ಹೋದಾಗ ಹೊಕ್ಕ ಸ್ಥಿತಿಯಲ್ಲೇ ಶಿರಸಿಯ ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಿದರು. ದೃಶ್ಯ ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ವೈದ್ಯರಿಗೆ ರೆಂಬೆಯನ್ನು ಹೊರ ತೆಗೆಯುವುದು ಸವಾಲಾಗಿ ಪರಿಣಮಿಸಿತು. ಅದೃಷ್ಟವಷಾತ್ ಮಹಾಬಲೇಶ್ವರ ಚಿಕಿತ್ಸೆಗೆ ಸ್ಪಂದಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’