ನಮ್ಮದು ಟ್ರುಥ್ಫುಲ್ ಸಿನಿಮಾ,ಕನ್ಫ್ಯೂಷನ್, ಥ್ರಿಲ್ಲರ್ ಇಲ್ಲ
Team Udayavani, Dec 1, 2017, 3:12 PM IST
ಮೈಸೂರು: ‘ನಮ್ಮದು ಕನ್ಫ್ಯೂಷನ್ ಸಿನಿಮಾ ಅಲ್ಲ. ಥ್ರಿಲ್ಲರ್ ಸಿನಿಮಾನೂ ಅಲ್ಲ , ಇದು ಟ್ರಾಥ್ಫುಲ್ ಸಿನಿಮಾ ‘..ಇದು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಕುರಿತು ಸಂಸ್ಥಾಪಕ ಉಪೇಂದ್ರ ಹೇಳಿದ ಮಾತು.
ಶುಕ್ರವಾರ ಮೈಸೂರಿನಲ್ಲಿ ಪಕ್ಷ ಸಂಘಟನೆಯ ಚಟುವಟಿಕೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾನು ಮತ ಹಾಕಿ ಎಂದು ಬೇಡುವುದಿಲ್ಲ. ದೇಶ ಸೇವೆ ಮಾಡಲು ಬಂದಿದ್ದು, ನೀವೆ ಗೆಲ್ಲಿಸಬೇಕು ಹೊರತು ನಾನು ಗೆಲ್ಲುತ್ತೇನೆ ಎಂದು ಹೇಳುವುದಿಲ್ಲ’ ಎಂದರು.
‘ನನಗೆ ಹಲವು ಗಣ್ಯರು, ಹಿರಿಯರು ಬೆಂಬಲ ನೀಡಿದ್ದಾರೆ. ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಅವರು ಬೆಂಬಲ ನೀಡಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಜನರು ಬೆಂಬಲ ನೀಡಲಿದ್ದಾರೆ’ ಎಂದರು.
‘ಇದುವರೆಗೆ ಯಾವ ನಟರೂ ಪಕ್ಷ ಸೇರುವುದಾಗಿ ಹೇಳಿಲ್ಲ ಆದರೆ ಶಿವಣ್ಣ, ಯಶ್ ಅವರು ಬೆಂಬಲ ಸೂಚಿಸಿದ್ದಾರೆ’ ಎಂದರು.
‘ರಾಜಕೀಯದಲ್ಲಿ ಬದಲಾವಣೆಗಾಗಿ ಕ್ಯಾಶ್ಲೆಸ್ ಕೆಪಿಜೆಪಿ ಹುಟ್ಟುಹಾಕಿ ಸಮಾಜದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ’ ಎಂದರು.
‘ಪಕ್ಷ ಆರಂಭವಾದಾಗ ಕೇವಲ 10 ಶೇಕಡಾ ಜನರಿಗೆ ಗೊತ್ತಾಗಿತ್ತು ಆದರೆ ಈಗ ಮಾಧ್ಯಮಗಳ ಮೂಲಕ ಹಳ್ಳಿ ಹಳ್ಳಿಯ ಜನರಿಗೆ ಪಕ್ಷದ ಬಗ್ಗೆ ತಿಳಿದಿದೆ’ ಎಂದರು.
‘ನಾನು ನಾಯಕನಾಗಬೇಕು ಎನ್ನುವವರು ನಮ್ಮ ಪಕ್ಷಕ್ಕೆ ಬೇಡ. ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ದುಡಿಯುವವರು ನಮ್ಮ ಪಕ್ಷಕ್ಕೆ ಬೇಕು’ ಎಂದರು.
‘ನನ್ನ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ, ದಾಖಲಾದರೆ ಕಾನೂನು ಹೋರಾಟ ಮಾಡುತ್ತೇನೆ’ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್