ಬೆಳಗಾವಿಲಿ ಸಪ್ತಪದಿ ತುಳಿದ ಎಚ್ಐವಿ ಪೀಡಿತ ಜೋಡಿ
Team Udayavani, Dec 5, 2017, 2:54 PM IST
ಬೆಳಗಾವಿ: ನಗರದಲ್ಲಿ ಎಚ್ಐವಿ ಪಾಸಿಟಿವ್ ಜೋಡಿ ಯೊಂದು ಹಸೆಮಣೆಏರುವ ಮೂಲಕ ಎಚ್ಐವಿ ಪೀಡಿತರಿಗೆ ಜೀವನೋತ್ಸಹದ ಕುರುಹಾಗಿ ಗೋಚರಿಸಿದ್ದಾರೆ.
ಇಲ್ಲಿಯ ರೈಲ ನಗರದಲ್ಲಿರುವ ಸ್ಪಂದನ ನಂದನ ಮಕ್ಕಳ ಧಾಮದಲ್ಲಿರುವ ಯುವತಿ ಎಚ್ಐವಿಯಿಂದ ಬಳಲುತ್ತಿದ್ದಳು. ಕೊನೆಗೂ ಈಕೆಗೆ ಕಂಕಣಬಲ ಕೂಡಿ ಬಂದಿದೆ.
ಸೋಮವಾರ ಹಿಂದೂ ಸಂಪ್ರದಾಯದ ಪ್ರಕಾರ ಗಟ್ಟಿಮೇಳ,ಮಂತ್ರಘೋಷಗಳ ಮೂಲಕ ಮದುವೆ ನಡೆದಿದೆ. ಅನೇಕರು ಕುಟುಂಬ ಸಮೇತ ಆಗಮಿಸಿ ದಂಪತಿಗೆ ಶುಭ ಹಾರೈಸಿದರು. ಮದುವೆ ಕಾರ್ಯಕ್ರಮ ಅದ್ಧೂರಿ ಅಲ್ಲದಿದ್ದರೂ ಇಬ್ಬರು ಎಚ್ಐವಿ ಪೀಡಿತ ಯುವಕ-ಯುವತಿ ಹಸೆಮಣೆಗೆ ಏರಿದ್ದೇ ವಿಶೇಷವಾಗಿತ್ತು.
ಭವಿಷ್ಯ ಬದಲಿಸಿದ ಧಾಮ: ಹಲವು ವರ್ಷಗಳಿಂದ ಎಚ್ಐವಿ ಪೀಡಿತಳಾಗಿದ್ದ ಯುವತಿಯ ಬೆನ್ನೆಲುಬಾಗಿ ನಿಂತ ಸ್ಪಂದನ ನಂದನ ಮಕ್ಕಳ ಧಾಮ ಎಚ್ಐವಿ ಪೀಡಿತ ಯುವಕನನ್ನು ಹುಡುಕಿ ವಿವಾಹ ಮಾಡಿಸಿದೆ.
ಜಮಖಂಡಿಯ ಯುವಕ ವಧುವಿಗೆ ತಾಳಿ ಕಟ್ಟುವ ಮೂಲಕ ನವ ಜೀವನಕ್ಕೆ ಕಾಲಿಟ್ಟಿದ್ದಾನೆ. ಅಲ್ಲಿಯೇ ಉದ್ಯೋಗ ಮಾಡಿಕೊಂಡು ಜೀವನಸಾಗಿಸುತ್ತಿರುವ ಈ ಯುವಕನ ಜೀವನದಲ್ಲೂ ಹೊಸಬೆಳಕು ಮೂಡಿದೆ.
ಯುವತಿ ದ್ವಿತೀಯ ಪಿಯು ಓದಿದ್ದು, ಯುವಕ ಉದ್ಯೋಗ ಮಾಡಿಕೊಂಡು ಜೀವನ ಸಾಗಿ ಸುತ್ತಿದ್ದಾನೆ.
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?