ದಿಲ್ಲಿ ಬಳಿಕ ಈಗ ಮುಂಬಯಿಗೂ ಸ್ಮಾಗ್
Team Udayavani, Dec 10, 2017, 6:00 AM IST
ಮುಂಬಯಿ: ಇದುವರೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಕಾಡುತ್ತಿದ್ದ ಸ್ಮಾಗ್ (ಧೂಳು ಮುಸುಕಿದ ಮಂಜು) ಸಮಸ್ಯೆ ಈಗ ಮುಂಬಯಿಗೂ ವ್ಯಾಪಿಸಿದೆ. ಶನಿವಾರ ಬೆಳ್ಳಂಬೆಳಗ್ಗೆ ಮುಂಬಯಿ ವಾಸಿಗಳಿಗೆ ದಟ್ಟ ಮಾಲಿನ್ಯ ಪದರ ಕಾಣಿಸಿಕೊಂಡಿದೆ. ವಿಪರೀತ ಮಂಜಿನಿಂದಾಗಿ ನಗರದ ಉಪನಗರ ರೈಲುಗಳು ಕೂಡ 30 -40 ನಿಮಿಷಗಳಷ್ಟು ವಿಳಂಬ ವಾಗಿ ಸಂಚರಿಸಿವೆ. ಆದರೆ ಇದು ಧೂಳು ಹಾಗೂ ಮಂಜು ಮಿಶ್ರಿತ ಮಾಲಿನ್ಯವೇ ಎಂಬುದನ್ನು ಹವಾಮಾನ ಇಲಾಖೆ ಖಚಿತಪಡಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಂಡುಬರದ ಈ ಸನ್ನಿವೇಶವನ್ನು ಜನರು ಮಂಜು ಮತ್ತು ಧೂಳಿನ ಕಣಗಳು ಎಂದೇ ಪರಿಗಣಿಸಿದ್ದಾರೆ.
ರೈಲು ವಿಳಂಬದಿಂದ ಆತಂಕ ಗೊಂಡ ಜನಸಾಮಾನ್ಯರು ಅಂಧೇರಿಯಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರಾದರೂ ಮಂಜಿನ ಸಮಸ್ಯೆಯೇ ಇದಕ್ಕೆ ಕಾರಣ ಎಂದು ರೈಲ್ವೇ ಅಧಿಕಾರಿಗಳು ಪ್ರಯಾ ಣಿಕರಿಗೆ ವಿವರಣೆ ನೀಡಿ, ಮನವೊಲಿಸಿದರು.
ವಾಯು ಗುಣಮಟ್ಟವೂ ಇಳಿಕೆ: ಶನಿವಾರ ಬೆಳಗ್ಗೆ ವಿಪರೀತ ಮಂಜಿನ ಜತೆಗೆ ವಾಯು ಗುಣಮಟ್ಟವೂ ಕಡಿಮೆಯಾಗಿತ್ತು. ವಾಯು ಗುಣ ಮಟ್ಟ ಸೂಚ್ಯಂಕವು ಕಳೆದ ಎರಡು ದಿನಗಳಿಂದ ಮಧ್ಯಮದಿಂದ ಕಳಪೆಗೆ ಇಳಿದಿದ್ದು, ಪಿಎಂ 10 ಮತ್ತು ಪಿಎಂ 2.5 ಸೂಚ್ಯಂಕ 150 ಹಾಗೂ 90ಕ್ಕೆ ಏರಿದೆ. ಶನಿವಾರ ಬೆಳಗ್ಗೆ ಪಿಎಂ 2.5 ಸೂಚ್ಯಂಕ ಗಮನಾರ್ಹವಾಗಿ ಏರಿದ್ದು, ಅಂಧೇರಿ, ನವಿ ಮುಂಬಯಿ ಮತ್ತು ಬಾಂದ್ರಾದಲ್ಲಿ ಇದು 300ಕ್ಕೆ ಏರಿಕೆಯಾಗಿದೆ. ಮುಂದಿನ ವಾರ ನಗರದ ತಾಪಮಾನ 31ರಿಂದ 21 ಡಿಗ್ರಿ ಇರುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ