ಸಾರಂಗ್ಖೇಡಾದಲ್ಲಿ ದೇಶದ ಮೊದಲ ಹಾರ್ಸ್ ಮ್ಯೂಸಿಯಂ
Team Udayavani, Dec 10, 2017, 11:49 AM IST
ನಂದುರ್ಬಾರ್: ಏಷ್ಯಾದ ಅತ್ಯಂತ ಪುರಾತನ ಕುದುರೆ ಉತ್ಸವಗಳಲ್ಲಿ ಒಂದಾದ ಜಿಲ್ಲೆಯ ಸಾರಂಗ್ಖೇಡಾ ಗ್ರಾಮದ ಪ್ರಸಿದ್ಧ ಚೇತಕ್ ಉತ್ಸವಕ್ಕೆ ಶುಕ್ರವಾರ ಮಹಾ ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನ ವೀಸ್ ಅವರು ಭೇಟಿ ನೀಡಿದರು. ಇದೇ ಸಂದರ್ಭಲ್ಲಿ ಸಾರಂಗ್ಖೇಡಾ ಗ್ರಾಮ ದಲ್ಲಿ ಪ್ರಸ್ತಾವಿತ ದೇಶದ ಮೊದಲ ಕುದು ರೆ ವಸ್ತುಸಂಗ್ರಹಾಲಯಕ್ಕೆ ಅವರು ಭೂ ಮಿ ಪೂಜೆ ನೆರವೇರಿಸಿದರು.
ಅನಂತರ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾ ತನಾ ಡಿದ ಸಿಎಂ ಫಡ್ನವೀಸ್ ಅವರು, ಸಾರಂ ಗ್ಖೇಡಾದಲ್ಲಿ ತಲೆ ಎತ್ತಲಿರುವ ಕುದುರೆ ವಸ್ತುಸಂಗ್ರಹಾಲಯವು ವಿಶ್ವ ಆಕರ್ಷ ಣೆಯ ಕೇಂದ್ರವಾಗಲಿದೆ. ಇದರೊಂದಿಗೆ ಪ್ರವಾಸೋದ್ಯಮ ದೃಷ್ಟಿಯಿಂದಲೂ ಸಾರಂಗ್ಖೇಡಾದ ಹೆಸರು ಜಾಗತಿಕ ನಕ್ಷೆಯಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂದರು.
ಮಹಾಭಾರತ ಕಾಲದ ಕೆಲವು ಅವಶೇಷಗಳು ಈ ಕ್ಷೇತ್ರದಲ್ಲಿ ಕಾಣಲು ಸಿಕ್ಕಿವೆ. ಸಾರಂಗ್ಖೇಡಾದ ಕುದುರೆ ಮೇಳವು 300 ವರ್ಷ ಹಳೆಯ ಪರಂಪರೆಯನ್ನು ಹೊಂದಿದೆ. ಇಲ್ಲಿನ ಕುದುರೆ ವಸ್ತುಸಂಗ್ರಹಾಲಯವು ದೇಶದಲ್ಲೇ ಅತಿ ಸುಂದರ ವಸ್ತು ಸಂಗ್ರಹಾಲಯವಾಗಿ ಮೂ ಡಿಬರಲಿದೆ ಎಂದೂ ಅವರು ನುಡಿದಿದ್ದಾರೆ.
ಕುದುರೆ ಅಭಿವೃದ್ಧಿ ಮತ್ತು ಸಂಶೋ ಧನಾ ಕೇಂದ್ರ ಹಾಗೂ ಪಶುವೈದ್ಯಕೀಯ ಆಸ್ಪತ್ರೆಯನ್ನು ಶೀಘ್ರದಲ್ಲೇ ಇಲ್ಲಿ ಸ್ಥಾಪಿಸಲಾಗುವುದು ಎಂದೂ ಸಿಎಂ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಫಡ್ನವೀಸ್ ಅವ ರೊಂದಿಗೆ ಪ್ರವಾಸೋದ್ಯಮ ಸಚಿವ ಜಯಕುಮಾರ್ ರಾವಲ್, ಸಂಸದೆ ಡಾ| ಹೀನಾ ಗಾವಿತ್, ಪ್ರವಾ ಸೋದ್ಯಮ ಕಾರ್ಯದರ್ಶಿ ನಿತಿನ್ ಗಾದ್ರೆ, ಕಂದಾಯ ಆಯುಕ್ತ ಮಹೇಶ್ ಜಗದೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಪ್ರತಿ ವರ್ಷ ಡಿಸೆಂಬರ್ನಲ್ಲಿ ನಡೆಯುವ ಸಾರಂಗ್ಖೇಡಾ ದ ಚೇತಕ್ ಕುದುರೆ ಮೇಳಕ್ಕೆ ದೇಶದಾದ್ಯಂತ ದೊಡ್ಡ -ದೊಡ್ಡ ಕುದುರೆ ವ್ಯಾಪಾರಿಗಳು ಆಗಮಿಸುತ್ತಾರೆ. ಈ ವಾರ್ಷಿಕ ಮೇಳದಲ್ಲಿ ಕೋಟ್ಯಾಂತರ ರೂಪಾಯಿಗಳ ವ್ಯಾಪಾರ ವಹಿವಾಟು ನಡೆಯುತ್ತದೆ. ದೇಶದ ಮೊದಲ ಹಾರ್ಸ್ ಮ್ಯೂಸಿಯಂ ನಂದುರ್ಬಾರ್ ಜಿಲ್ಲೆಯ ಸಾರಂಗ್ಖೇಡಾದಲ್ಲಿ ತಲೆ ಎತ್ತಲಿರುವ ಹಾರ್ಸ್ ಮ್ಯೂಸಿಯಂ (ಕುದುರೆ ವಸ್ತುಸಂಗ್ರಹಾಲಯ) ದೇಶದಲ್ಲಿ ಅಂತಹ ಮೊದಲ ಹಾಗೂ ವಿಶ್ವದಲ್ಲಿ ಮೂರನೇ ಮ್ಯೂಸಿಯಂ ಆಗಿರಲಿದೆ. ಇದರ ನಿರ್ಮಾಣ ಕಾರ್ಯ ಎರಡು ಹಂತಗಳಲ್ಲಿ ಪೂರ್ಣವಾಗಲಿದ್ದು, ಮೊದಲ ಹಂತದ ಅಡಿಯಲ್ಲಿ ಸದ್ಯಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಂಟಿಡಿಸಿ)ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಪಿ ನದಿ ತಟದಲ್ಲಿ: ತಾಪಿ ನದಿಯ ತಟದಲ್ಲಿ ಸುಮಾರು 6.5 ಎಕರೆ ಜಮೀನಿ ನಲ್ಲಿ ಹಾರ್ಸ್ ಮ್ಯೂಸಿಯಂ ನಿರ್ಮಾಣವಾಗಲಿದ್ದು, ಅದು ಗುಮ್ಮಟಾಕಾರದಲ್ಲಿರಲಿದೆ. ಈ ಸಂಗ್ರಹಾಲಯದಲ್ಲಿ ದೇಶದಾದ್ಯಂತ ಕಾಣಸಿಗುವ ವಿವಿಧ ಜಾತಿಯ ಕುದುರೆಗಳ ಪ್ರತಿಕೃತಿಯನ್ನು ಇಡಲಾಗುವುದು. ಜೊತೆಗೆ ಕುದುರೆಗಳ ಇತಿಹಾಸ ಹಾಗೂ ದೇಶದ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ವಸ್ತುಗಳನ್ನೂ ಅಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಈ ಮ್ಯೂಸಿಯಂ ಆರ್ಟ್ ಗ್ಯಾಲರಿ, ಪ್ರದರ್ಶನ ಸ್ಥಳ, ಆಡಿಯೋ ವಿಶುವಲ್ ರೂಮ್, ರಿಸೆಪ್ಶನ್ ಡೆಸ್ಕ್, ಫುಡ್ ಸ್ಟಾಲ್, ವೈಟಿಂಗ್ ರೂಂ ಹಾಗೂ ಇತರ ಮಳಿಗೆಗಳನ್ನು ಹೊಂದಿರಲಿದೆ.
4.98 ಕೋ.ರೂ. ನಿಧಿ ಮಂಜೂರು ಸರಕಾರವು ಮ್ಯೂಸಿಯಂಗೆ 4.98 ಕೋ.ರೂ. ನಿಧಿ ಮಂಜೂರು ಮಾಡಿದ್ದು, ಅದರಲ್ಲಿ 1.25 ಕೋ.ರೂ. ಬಿಡುಗಡೆ ಮಾಡ ಲಾಗಿದೆ. ನಿರ್ಮಾಣದ ಎರಡನೇ ಹಂತದಲ್ಲಿ ಸುಮಾರು 5 ಕೋ.ರೂ. ಮೊತ್ತದ ಕೆಲಸಗಳು ನಡೆಯಲಿವೆ ಎಂದು ಎಂಟಿಡಿಸಿ ಅಧಿಕಾರಿ ನುಡಿದಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಮ್ಯೂಸಿಯಂನ ಮುಖ್ಯ ದ್ವಾರ, ಪರಿಸರದ, ಉದ್ಯಾನ ಮತ್ತು ತಾಪಿ ನದಿಯ ತಟವನ್ನು ಆಕರ್ಷಣೀಯ ಹಾಗೂ ಸೌಂದಯೀìಕರಣ ಮಾಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಜವಾಬ್ದಾರಿ ಗ್ರಾಮ ಪಂಚಾಯತ್ಗೆ
ಮ್ಯೂಸಿಯಂ ನಿರ್ಮಾಣ ಕಾರ್ಯ ಪೂ ರ್ಣಗೊಂಡ ಬಳಿಕ ಸಾರಂಗ್ಖೇಡಾ ಗ್ರಾ ಮ ಪಂಚಾಯತ್ಗೆ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಗುವುದು. ಪ್ರ ವಾಸಿಗರ ಶುಲ್ಕ ದರವನ್ನು ಗ್ರಾಮ ಪಂಚಾ ಯತ್ ನಿರ್ಣಯಿಸಲಿದೆ. ಈ ಮ್ಯೂಸಿಯಂ ನಿಂದ ಸಾರಂಗ್ಖೇಡಾ ಕುದುರೆ ಮೇಳಕ್ಕೆ ಹೊಸ ಮೆರುಗು ಸಿಗಲಿದೆ. ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
MUST WATCH
ಹೊಸ ಸೇರ್ಪಡೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್