ವಿಶ್ವಮಟ್ಟದಲ್ಲಿ ಕ್ರೀಡಾ ಸಾಧನೆಗೈದರೂ ರಾಜ್ಯದಲ್ಲಿಲ್ಲ ಮನ್ನಣೆ!


Team Udayavani, Dec 12, 2017, 6:00 AM IST

1112kdm1A.jpg

ಕುಂದಾಪುರ: ಒಂದಲ್ಲ, ಎರಡಲ್ಲ 4 ಬಾರಿ ವಿಶ್ವ ಮಟ್ಟದ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದರೂ ರಾಜ್ಯದಲ್ಲಿ ಒಂದು ಸರಕಾರಿ ಕೆಲಸಕ್ಕೆ ಅರ್ಜಿ ಹಾಕಿದರೂ ಈವರೆಗೆ ಲಭಿಸಿಲ್ಲ ಉದ್ಯೋಗ. ಲಕ್ಷಾಂತರ ರೂ. ಸಾಲ ಮಾಡಿ, ಕ್ರೀಡಾ ತರಬೇತಿ ಪಡೆದು ಪದಕ ಗೆದ್ದರೂ ಇಲ್ಲಿಲ್ಲ ಮನ್ನಣೆ. 2014ರಲ್ಲಿ ರಾಷ್ಟ್ರೀಯ ಪದಕ ಗೆದ್ದಿದ್ದಕ್ಕೆ ಸರಕಾರ ಇನ್ನೂ ಕೊಟ್ಟಿಲ್ಲ ನಗದು ಪುರಸ್ಕಾರ…

ಇದು ಆಳುವ ವರ್ಗದ ನಿರ್ಲಕ್ಷéವೋ ಅಥವಾ ಕ್ರೀಡಾಪಡುಗಳ ದುರಂತವೋ ಗೊತ್ತಿಲ್ಲ. ಇದರಿಂದ ಸಾಧಕ ಅಂತಾರಾಷ್ಟ್ರೀಯ ಕ್ರೀಡಾಪಟುವೊಬ್ಬರಿಗೆ ನಿತ್ಯ ಅನ್ಯಾಯವಾಗುತ್ತಿರುವುದಂತೂ ಸುಳ್ಳಲ್ಲ. ಇದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ಗ್ಳಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಕುಂದಾಪುರ ಮೂಲದ ಹೆಮ್ಮೆಯ ಕ್ರೀಡಾಪಟು ವಿಶ್ವನಾಥ ಭಾಸ್ಕರ ಗಾಣಿಗ ಅವರ ನೋವಿನ ಕತೆ.

ಬೆಂಗಳೂರಿನ ಜಿಟಿ ನೆಕ್ಸಸ್‌ ಸಾಫ್ಟ್ವೇರ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ, ಉಡುಪಿ ಜಿಲ್ಲೆಯ ಕುಂದಾಪುರದ ಕಟ್‌ಬೆಳೂ¤ರಿನ ವಿಶ್ವನಾಥ ಗಾಣಿಗ ಅವರು ಇತ್ತೀಚೆಗೆ ಕೇರಳದ ಅಲೆಪ್ಪಿಯಲ್ಲಿ ನಡೆದ ಏಶ್ಯನ್‌ ಕ್ಲಾಸಿಕ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಈ ಟೂರ್ನಿಯಲ್ಲಿ 3 ಚಿನ್ನ ಸಹಿತ ಒಟ್ಟು 5 ಪದಕಗಳನ್ನು ರಾಜ್ಯದ ಸ್ಪರ್ಧಿಗಳು ಗೆದ್ದಿರುವುದು ವಿಶೇಷ.

ವಿಶ್ವದಾಖಲೆ ಸ್ವಲ್ಪದರದಲ್ಲೇ ಮಿಸ್‌
ವಿಶ್ವನಾಥ ಗಾಣಿಗ ಅವರು 300 ಕೆಜಿ ಭಾರವೆತ್ತಿ ಚಿನ್ನ ಗೆದ್ದರೂ ವಿಶ್ವದಾಖಲೆ ಮುರಿಯುವ ಪ್ರಯತ್ನದಲ್ಲಿ ಸ್ವಲ್ಪದರ‌್ಲಲೇ ವಂಚಿತರಾದರು. 326 ಕೆಜಿ ಭಾರವೆತ್ತಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. 325.5 ಕೆಜಿ ವಿಶ್ವದಾಖಲೆಯಾಗಿದ್ದರೆ, 325 ಕೆಜಿ ಏಶ್ಯ ದಾಖಲೆಯಾಗಿದೆ. ಮುಂಬರುವ ವಿಶ್ವ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆ ಮಾಡುವೆ ಎಂದು ವಿಶ್ವನಾಥ ಗಾಣಿಗ ಅವರು ವಿಶ್ವಾಸದಿಂದ ಹೇಳುತ್ತಾರೆ.

ಸಾಧಕನ ಹಿನ್ನೆಲೆ
ದೇವಲ್ಕುಂದ ಬಾಳಿಕೆರೆಯ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿ ಪುತ್ರನಾಗಿರುವ ವಿಶ್ವನಾಥ ಅವರು ನೆಂಪುವಿನಲ್ಲಿ ಪ್ರಾಥಮಿಕ, ವಂಡ್ಸೆಯ ನೆಂಪು ಕಾಲೇಜಿನಲ್ಲಿ ಪಿಯುಸಿ, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದು, ಆ ಬಳಿಕ ಬೆಂಗಳೂರಿನ ಜೈನ್‌ ಕಾಲೇಜಿನಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪೂರೈಸಿದರು. ಮೊದಲಿಗೆ ಕುಂದಾಪುರದ ಪ್ರಶಾಂತ ಶೇರಿಗಾರ್‌ ಗರಡಿಯಲ್ಲಿ ಪಳಗಿದ ವಿಶ್ವನಾಥ್‌ ಆ ಬಳಿಕ ಬೆಂಗಳೂರಿನಲ್ಲಿ, ಅನಂತರ ಪುಣೆಯಲ್ಲಿ ತರಬೇತಿ ಪಡೆದು ರಾಷ್ಟ್ರ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಹಲವು ಪದಕ ಜಯಿಸಿ ಖ್ಯಾತಿ ಗಳಿಸಿದ್ದಾರೆ.

3 ರಾಷ್ಟ್ರೀಯ ದಾಖಲೆಗಳು
2017 ರಲ್ಲಿ ಕೇರಳದಲ್ಲಿ ನಡೆದ ಏಶ್ಯನ್‌ ಕ್ಲಾಸಿಕ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಚಿನ್ನದ ಪದಕ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ 1 ಚಿನ್ನ, ಅದೇ ಟೂರ್ನಿಯ ಬೆಂಚ್‌ ಪ್ರಸ್‌ ಚಾಂಪಿಯನ್‌ ಶಿಪ್‌ನಲ್ಲಿ 1 ಬೆಳ್ಳಿ ಪದಕ, ಜಮ್ಶೆಡ್‌ಪುರದಲ್ಲಿ ನಡೆದ ಸುಬ್ರತಾ ಕ್ಲಾಸಿಕ್‌ ಇಂಟರ್‌ನ್ಯಾಶನಲ್‌ ಪವರ್‌ ಲಿಫ್ಟಿಂಗ್‌ನಲ್ಲಿ 1 ಚಿನ್ನ, ಅಂತರಾಷ್ಟಿÅàಯ ಪವರ್‌ ಲಿಫ್ಟಿಂಗ್‌ನಲ್ಲಿ ಬಲಿಷ್ಠ ಪುರುಷ ಪ್ರಶಸ್ತಿ ಪಡೆದದ್ದು, ಒಟ್ಟಾರೆಯಾಗಿ 6 ಅಂತಾರಾಷ್ಟ್ರೀಯ, 17 ರಾಷ್ಟ್ರೀಯ ಪ್ರಶಸ್ತಿಯೊಂದಿಗೆ 3 ವೈಯಕ್ತಿಕ ರಾಷ್ಟ್ರೀಯ ದಾಖಲೆ ಇವರ ಹೆಸರಲ್ಲಿದೆ.

ಕ್ರೀಡಾ ಕೋಟಾದಡಿ ಕರೆಸಿ ಅರ್ಹತೆ ಕೇಳಿದರು!
ರಾಜ್ಯದಲ್ಲಿ ಈಗ ಸಾಧಕ ಕ್ರೀಡಾಪಟುಗಳಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಹೊರತುಪಡಿಸಿದರೆ ಬೇರೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಕೆಲಸ ನೀಡುತ್ತಿಲ್ಲ. ವಿಶ್ವನಾಥ ಗಾಣಿಗ ಅವರನ್ನು 2015 ರಲ್ಲಿ ಅರಣ್ಯ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಕೆಲಸ ಕೊಡುತ್ತೇವೆ ಎಂದು ಕರೆಸಿಕೊಳ್ಳಲಾಗಿತ್ತು. ದೈಹಿಕ ಪರೀಕ್ಷೆಯಲ್ಲಿ ಪ್ರಥಮ, ಲಿಖೀತ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದು ಉದ್ಯೋಗಾಂಕ್ಷಿಯಾಗಿದ್ದರೂ, “ನೀವು ಪದವಿಯಲ್ಲಿ ಬಿಸಿಎ ಮಾಡಿದ್ದು, ಅದಕ್ಕೆ ಮಾನ್ಯತೆಯಿಲ್ಲ. ಸೈನ್ಸ್‌ ಮಾಡಿದ್ದರೆ ಕೊಡಬಹುದಿತ್ತು’ ಎಂದು ತನ್ನನ್ನು ರಿಜೆಕ್ಟ್ ಮಾಡಿದ್ದಾಗಿ ವಿಶ್ವನಾಥ್‌ ಬೇಸರದಿಂದ ಹೇಳಿಕೊಳ್ಳುತ್ತಾರೆ.

2014ರದೇ ನಗದು ಪುರಸ್ಕಾರ ಕೊಟ್ಟಿಲ್ಲ!
ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದವರಿಗೆ ರಾಜ್ಯ ಸರಕಾರ ನಗದು ಪುರಸ್ಕಾ ನೀಡುವುದು ವಾಡಿಕೆ. ಆದರೆ ವಿಶ್ವನಾಥ ಗಾಣಿಗ ಅವರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಅಧಿಕ ಪದಕಗಳನ್ನು ಗೆದ್ದರೂ ಅವರಿಗೆ 2014ರಲ್ಲಿ ರಾಷ್ಟ್ರೀಯ ಪದಕ ಗೆದ್ದಿರುವುದಕ್ಕೆ ಇನ್ನೂ ನಗದು ಪುರಸ್ಕಾರ ಸಿಕ್ಕಿಲ್ಲ. ಕ್ರೀಡೆಗೆ ಅದರಲ್ಲೂ ಪವರ್‌ ಲಿಫ್ಟಿಂಗ್‌ನಂತಹ ಕಠಿನ ಕ್ರೀಡೆಗೆ ಸರಕಾರ ಕೊಡುವ ಬೆಲೆಯೇ ಇದು?!

ತರಬೇತಿಗೆ 2.50 ಸಾಲ
“ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನಾನು ಬ್ಯಾಂಕಿಂದ ಸುಮಾರು 2.50 ಲಕ್ಷ ರೂ. ಸಾಲ ಮಾಡಿದ್ದು, ಸರಕಾರ ಪದಕ ಗೆದ್ದಿರುವುದಕ್ಕೆ ನಗದು ಪುರಸ್ಕಾರ ಏನಾದರೂ ಕೊಟ್ಟಿದ್ದರೆ ಸ್ವಲ್ಪವಾದರೂ ಅನುಕೂಲವಾಗುತ್ತಿತ್ತು. ಆದರೀಗ ಕೆಲಸವೂ ಸಿಕ್ಕಿಲ್ಲ. ಸಾಲವೂ ಸುಮಾರು 3.50 ಲಕ್ಷದಷ್ಟಿದ್ದು, ಅದನ್ನು ತೀರಿಸುವುದೇ ಸವಾಲಾಗಿದೆ. ಕ್ರಿಕೆಟ್‌, ಹಾಕಿಯಂತಹ ಕ್ರೀಡೆಗೆ ಮಾತ್ರ ಸರಕಾರ ಮನ್ನಣೆ ಕೊಡುತ್ತಿದೆ. ಪವರ್‌ ಲಿಫ್ಟಿಂಗ್‌ ಬಹಳಷ್ಟು ತ್ರಾಸದಾಯಕ ಕ್ರೀಡೆಯಾಗಿದ್ದರೂ ಇತ್ತ ಗಮನವೇ ಕೊಡುವುದಿಲ್ಲ. ಕೆಲಸ ಕೊಡುತ್ತೇನೆಂದು ಕರೆಸಿ, ಶೈಕ್ಷಣಿಕ ಅರ್ಹತೆ ಕೇಳಿದರು. ಹಾಗಾದರೆ ನನ್ನ ಸಾಧನೆ, ಸ್ನಾತಕೋತ್ತರ ಪದವಿಗೆ ಬೆಲೆ ಇಲ್ಲವೇ?’
-ವಿಶ್ವನಾಥ ಭಾಸ್ಕರ ಗಾಣಿಗ, ರಾಷ್ಟ್ರೀಯ ಪವರ್‌ ಲಿಫ್ಟರ್‌

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.