ಕಲಬುರಗಿ, ತುಮಕೂರು, ಮೈಸೂರು,ಪಾಕಿಸ್ತಾನದಲ್ಲೂ ಕೊಹ್ಲಿ ಮಧುಚಂದ್ರ!
Team Udayavani, Dec 20, 2017, 11:35 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ವಿವಾಹವಾಗಿ ಇಟಲಿಯಲ್ಲಿ ಮಧುಚಂದ್ರ ನಡೆಸುತ್ತಾ ಸಂಭ್ರಮಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲೇ ಅವರು ತಮ್ಮ ಬೆನ್ನ ಹಿಂದೆ ದಟ್ಟ ಹಿಮವಿರುವ ಸೆಲ್ಫಿ ಪ್ರಕಟಿಸಿದ್ದಾರೆ. ಅಭಿಮಾನಿಗಳು ಕೊಹ್ಲಿ ಈ ಚಿತ್ರ ಪ್ರಕಟಿಸಿದ್ದು ಎಲ್ಲಿ ಎಂದು ತಲೆ ಕೆರೆದು ಕೊಳ್ಳುತ್ತಿರುವಾಗ ಬೇರೆಯೇ ಬೆಳವಣಿಗೆಯಾಗಿದೆ. ಕರ್ನಾಟಕವೂ ಸೇರಿದಂತೆ ವಿಶ್ವದ ನಾನಾ ಕಡೆಯಿರುವ ಅಭಿಮಾನಿಗಳು ಕೊಹ್ಲಿ ತಮ್ಮೂರಿಗೆ ಬಂದಿದ್ದರು ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಹಾಕುತ್ತಿದ್ದಾರೆ!
ಆಗಿದ್ದಿಷ್ಟೇ: ಕೊಹ್ಲಿ ಪ್ರಕಟಿಸಿದ್ದ ಮಧುಚಂದ್ರದ ಹಿನ್ನೆಲೆಯನ್ನು ಫೋಟೋಶಾಪ್ ಮೂಲಕ ಅಳಿಸಿ ಹಾಕಿ ಅಲ್ಲಿ ತಮಗೆ ಬೇಕಾದ ಹಿನ್ನೆಲೆ ಚಿತ್ರಗಳನ್ನು ಅಭಿಮಾನಿಗಳು ಹಾಕುತ್ತಿದ್ದಾರೆ. ಅಭಿಮಾನಿಗಳ ಈ ಕೈಚಳಕಕ್ಕೆ ಸ್ವತಃ ಕೊಹ್ಲಿಯೂ ಅಚ್ಚರಿಗೊಂಡಿದ್ದಾರೆ. ಕೊಹ್ಲಿ ಗುಲ್ಬರ್ಗಾ, ತುಮಕೂರು, ಬೆಂಗಳೂರು, ಮೈಸೂರಿನಲ್ಲಿರುವಂತೆ ಕನ್ನಡಿಗರು ಚಿತ್ರ ಪ್ರಕಟಿಸಿದ್ದಾರೆ. ಪಾಕ್ ಅಭಿಮಾನಿಗಳು ಕರಾಚಿಯಲ್ಲಿರುವಂತೆ, ಲಾಹೋರ್ನ ರೆಸ್ಟೋರೆಂಟ್ನಲ್ಲಿ ಕಾಣಿಸಿಕೊಂಡಂತೆ, ಕಡೆಗೆ ಒಂದು ಪಾನೀಯ ಅಂಗಡಿಯೆದುರು ಪ್ರತ್ಯಕ್ಷವಾದಂತೆ ಕೈಚಳಕ ತೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್ಗೆ ಭಾರಿ ಡಿಮ್ಯಾಂಡ್
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ