ಪಾಕ್‌ “ಮಾನವೀಯ’ ಆಟ: ಪೆಟ್ಟು ಕೊಟ್ಟೇ ಪಾಠ ಕಲಿಸಬೇಕು


Team Udayavani, Dec 27, 2017, 11:56 AM IST

PAk-Jadav.jpg

ಪಾಕಿಸ್ತಾನದಲ್ಲಿ ಬೇಹುಗಾರಿಕೆ-ಉಗ್ರವಾದದ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ಗೆ ಕೊನೆಗೂ ಸೋಮವಾರ ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಆದರೆ ಈ ಭೇಟಿ
ಪಾಕಿಸ್ತಾನ ತನ್ನ “ಮರ್ಯಾದೆ’ ಉಳಿಸಿಕೊಳ್ಳಲು ನಡೆಸಿದ ಕಸರತ್ತು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ವಿದೇಶಾಂಗ ಕಚೇರಿಯಲ್ಲಿ ಏರ್ಪಾಟಾಗಿದ್ದ ಈ 40 ನಿಮಿಷದ ಭೇಟಿಗೆ ಪಾಕಿಸ್ತಾನ “ಮಾನವೀಯತೆಯ ಆಧಾರ’ ಎಂಬ ಆಯಾಮವನ್ನು ಕೊಟ್ಟಿದೆ. ಆದರೆ ಅದು “ಮಾನವೀಯತೆ’ ಮೆರೆಯಲು ಭಾರತ ಪದೇ ಪದೆ ಒತ್ತಡ ತರಬೇಕಾಯಿತು ಎನ್ನುವುದು ಬೇರೆ ಮಾತು. ಕೊನೆಗೂ ಜಾಧವ್‌ ತಮ್ಮ ಅಮ್ಮ ಮತ್ತು ಮಡದಿಯನ್ನು ಭೇಟಿಯಾಗಿದ್ದಾರೆ, ದುರಂತವೆಂದರೆ ಅವರ ನಡುವೆ ಗಾಜಿನ ಗೋಡೆ ಅಡ್ಡ ಕುಳಿತಿತ್ತು! ಇಂಟರ್‌ಕಾಮ್‌ ಮೂಲಕವೇ ಅವರೆಲ್ಲ ಪರಸ್ಪರ ಮಾತುಕತೆ ನಡೆಸುವಂತಾಯಿತು.

ಜಾಧವ್‌ ಬಳಿ ಕರೆದೊಯ್ಯುವ ಮುನ್ನ ಅವರ ತಾಯಿ ಮತ್ತು ಪತ್ನಿಯ ಸುರಕ್ಷಾ ತಲಾಷಿ ಮಾಡಲಾಗಿತ್ತು. ಮಾತುಕತೆ ನಡೆಯಲಿರುವ ಸ್ಥಳದಿಂದ ಹಿಡಿದು ವಿದೇಶಾಂಗ ಸಚಿವಾಲಯದ ಕಟ್ಟಡ ಹಾಗೂ ಹೊರಗಿನ ರಸ್ತೆಗಳವರೆಗೆ ಹೆಜ್ಜೆ ಹೆಜ್ಜೆಗೂ ಬಿಗಿ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸ 
ಲಾಗಿತ್ತು. ಹೀಗಿರುವಾಗ ಅವರ ನಡುವೆ ಗಾಜಿನ ಗೋಡೆಯೇಕೆ ಬೇಕಾಯಿತು? ಸ್ಥಳದಲ್ಲಿ ಭಾರತದ ಉಪ ಹೈಕಮಿಷನರ್‌ ಜೆ.ಪಿ. ಸಿಂಗ್‌ ಇದ್ದರು. ಇದ್ದನ್ನೇ ನೆಪವಾಗಿಟ್ಟುಕೊಂಡ ಪಾಕ್‌ “ಕುಲಭೂಷಣ್‌ ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸುವ ತನ್ನ ಆಶ್ವಾಸನೆಯನ್ನು ಈಡೇರಿಸಿದ್ದಾಗಿ’ ಮೊದಲು ಹೇಳಿತು. ತದನಂತರ ಛೀಮಾರಿ ಹಾಕಿಸಿಕೊಳ್ಳುವ ದಿಗಿಲಲ್ಲಿ ಇದನ್ನು “ಕುಟುಂಬದ ಭೇಟಿ’ ಎಂದು ಕರೆದಿದೆ.

ಸತ್ಯವೇನೆಂದರೆ, ಕುಲಭೂಷಣ್‌ ವಿಚಾರ ಪಾಕ್‌ಗೆ ಕಗ್ಗಂಟಾಗಿ ಪರಿಣಮಿಸಿ ಬಿಟ್ಟಿದೆ. ಭಾರತವನ್ನು ಆಟವಾಡಿಸಲು ಜಾಧವ್‌ರನ್ನು ಬಳಸಿಕೊಳ್ಳುವ ದುರಾಲೋಚನೆ ಪಾಕ್‌ಗೆ ಇತ್ತು. ಆದರೆ ಈ ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೊಯ್ಯುವ ಪ್ರತಿತಂತ್ರದ ಮೂಲಕ ಭಾರತ ಪಾಕ್‌ಗೆ ಕಪಾಳ ಮೋಕ್ಷ ಮಾಡಿತು. ಭಾರತದ ದೂತವಾಸ ಅಧಿಕಾರಿಗಳೊಂದಿಗೆ ಜಾಧವ್‌ಗೆ ಮಾತುಕತೆ ನಡೆಸಲು
ಬಿಡುತ್ತಿಲ್ಲ ಎಂಬ ಅಂಶವನ್ನೂ ಭಾರತ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಪಾಕ್‌ನ ಮುಖವಾಡ ಕಳಚಲು ಅಸ್ತ್ರವಾಗಿ ಬಳಸಿಕೊಂಡಿತ್ತು.

ಹೀಗಾಗಿ ಈಗ ಜಾಧವ್‌ ಕುಟುಂಬಕ್ಕೆ ಭೇಟಿಯ ಅವಕಾಶ ನೀಡಿ ತಾನು ನ್ಯಾಯಬದ್ಧ ವ್ಯವಹಾರ ನಡೆಸುತ್ತಿದ್ದೇನೆ ಎಂದು ತೋರಿಸಿಕೊಳ್ಳುತ್ತಿದೆ ಪಾಕ್‌. ಏನೇ ಆದರೂ ಜಾಧವ್‌ ಪ್ರಕರಣ ಪಾಕಿಸ್ತಾನದ ಸೇನೆ ಮತ್ತು ಆಡಳಿತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಷ್ಟೇ ಅಲ್ಲದೆ, ಆ ದೇಶದೊಳಗೂ
ಮುಜುಗರವುಂಟಾಗುವಂತೆ ಮಾಡಿಬಿಟ್ಟಿದೆ. ಹೀಗಾಗಿ ಮುಖಕೆಂಪು ಮಾಡಿಕೊಂಡು ಭುಸುಗುಡುತ್ತಿದೆ ಪಾಕಿಸ್ತಾನ. ಅದರ ಸ್ಥಿತಿ ಈಗ ಹೇಗಾಗಿದೆಯೆಂದರೆ ಅಂತಾರಾಷ್ಟ್ರೀಯ ಕೋರ್ಟ್‌ನ ಆದೇಶವನ್ನು ತಿರಸ್ಕರಿಸಿ, ಶಿಕ್ಷೆ ಜಾರಿಗೊಳಿಸುವ ಸಾಹಸವನ್ನಂತೂ ಮಾಡಲಾರದು.
ಇದೆಲ್ಲದರ ನಡುವೆ ಈ ವಿದ್ಯಮಾನ ಎರಡೂ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿರುವ ರಾಜತಾಂತ್ರಿಕ ಮೌನವನ್ನು ಮುರಿದು ಮಾತುಕತೆಗೆ ದಾರಿ ಮಾಡಿಕೊಡುವುದೇ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.

ಇಡೀ ಜಗತ್ತು ಭಾರತ ಮತ್ತು ಪಾಕಿಸ್ತಾನ ಮಾತುಕತೆಯಲ್ಲಿ ತೊಡಗುವುದನ್ನು ನೋಡಲು ಬಯಸುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಈ ರೀತಿಯ ಬದಲಾವಣೆ ಪಾಕಿಸ್ತಾನಕ್ಕೆ ನಿಜಕ್ಕೂ ಬೇಕೋ ಬೇಡವೋ ಎಂಬ ಅನುಮಾನ ಮೂಡುತ್ತದೆ. ಏಕೆಂದರೆ ಇತ್ತ ಮಾನವೀಯತೆಯ ಮಾತನಾಡುವ ಪಾಕಿಸ್ತಾನ ಕೆಲವೇ ದಿನಗಳ ಹಿಂದೆ ಮುಂಬೈ ದಾಳಿಯ ಸೂತ್ರಧಾರಿ ಹಾಫಿಜ್‌ ಸಯೀದ್‌ನನ್ನು ಬಂಧಮುಕ್ತಗೊಳಿಸಿದೆ. ಪಾಕ್‌
ಮಿಲಿಟರಿ ಆತನನ್ನು ದೇಶದ ರಾಜಕೀಯ ವೇದಿಕೆಯಲ್ಲಿ ಮುಂಚೂಣಿಗೆ ತರಲು ಪ್ರಯತ್ನಿಸುತ್ತಿದೆ. ಕಣಕಣದಲ್ಲೂ ಭಾರತ ದ್ವೇಷವನ್ನು ತುಂಬಿ ಕೊಂಡಿರುವ ಹಾಫಿಜ್‌ರಂಥವರನ್ನು ಬಹಿರಂಗವಾಗಿಯೇ ಬಾಹು ಬಂಧನದಲ್ಲಿ ಎಳೆದುಕೊಳ್ಳುತ್ತಿದೆ ಅಲ್ಲಿನ ಆಡಳಿತ(ಅರ್ಥಾತ್‌ ಮಿಲಿಟರಿ). ಗಡಿಭಾಗದಲ್ಲಿ ಪಾಕ್‌ ಸೇನೆ ಮತ್ತು ಅದರ ಕೃಪಾಪೋಷಿತ ಉಗ್ರರ ಹಾವಳಿಯೂ ನಿಲ್ಲುವ ಲಕ್ಷಣವಿಲ್ಲ. ಇದನ್ನೆಲ್ಲ ನೋಡಿದಾಗ ಪಾಕ್‌ ಜೊತೆಗೆ ಮಾತುಕತೆ ನಡೆಸುವುದರಲ್ಲಿ ಪ್ರಯೋಜನವಿಲ್ಲ, ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ಟು ಕೊಟ್ಟೇ ಪಾಠ ಕಲಿಸಬೇಕು ಎನ್ನುವುದು ನಿಚ್ಚಳವಾಗುತ್ತಿದೆ.

ಟಾಪ್ ನ್ಯೂಸ್

Kohli IPL 2024

IPL;ಇಂದು ಆರ್‌ಸಿಬಿ ಎದುರಾಳಿ ಗುಜರಾತ್‌ ಟೈಟಾನ್ಸ್‌:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ

Chandra

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

1-RV

Rohit Vemula ದಲಿತ ಅಲ್ಲ; ಪೊಲೀಸ್‌ ವರದಿಯಲ್ಲಿ ಉಲ್ಲೇಖ: ಏನಿದು ಪ್ರಕರಣ?

1-eqqwewqeqweqwe

Huge Controversy!: ಮಹಾತ್ಮಾ ಗಾಂಧಿ ಕಪಟಿ; ರಾಹುಲ್‌ ಗಾಂಧಿ ಬೆಸ್ಟ್‌

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Economy

ಉತ್ಪಾದನ ವಲಯದಲ್ಲಿ ಜಿಗಿತ: ಆರ್ಥಿಕತೆಗೆ ಮತ್ತಷ್ಟು ಬಲ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kohli IPL 2024

IPL;ಇಂದು ಆರ್‌ಸಿಬಿ ಎದುರಾಳಿ ಗುಜರಾತ್‌ ಟೈಟಾನ್ಸ್‌:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ

1-qewqeqwe

England;  20 ವರ್ಷದ ಕ್ರಿಕೆಟಿಗ ನಿಗೂಢ ಸಾವು!

Chandra

China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ

1-RV

Rohit Vemula ದಲಿತ ಅಲ್ಲ; ಪೊಲೀಸ್‌ ವರದಿಯಲ್ಲಿ ಉಲ್ಲೇಖ: ಏನಿದು ಪ್ರಕರಣ?

1-eqqwewqeqweqwe

Huge Controversy!: ಮಹಾತ್ಮಾ ಗಾಂಧಿ ಕಪಟಿ; ರಾಹುಲ್‌ ಗಾಂಧಿ ಬೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.