ಅನುದಾನ ಬಿಡುಗಡೆ ಬಾಕಿ: ಗ್ರಂಥಾಲಯ ಕಾಮಗಾರಿಗೆ ಗ್ರಹಣ


Team Udayavani, Jan 3, 2018, 3:24 PM IST

1-Jan-19.jpg

ಸುಳ್ಯ:ತಾಲೂಕಿನ 10 ಲಕ್ಷ ರೂಪಾಯಿ ವೆಚ್ಚದ ಉದ್ದೇಶಿತ ಎರಡು ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಪೂರ್ಣ ಬಿಡುಗಡೆಯಾಗದೆ ಎರಡು ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಿ ಪ್ರಾಥಮಿಕ ಆವಶ್ಯಕತೆಯೊಂದನ್ನು ಈಡೇರಿಸುವ ಕನಸನ್ನು ಸರಕಾರ ಹೊಂದಿದ್ದರೂ, ತಾಲೂಕಿನ ಎರಡೂ ಕಟ್ಟಡ ಕಾಮಗಾರಿಗಳಿಗೆ ಮಂಜೂರಾದ ಪೈಕಿ ಅರ್ಧದಷ್ಟು ಅನುದಾನ ನೀಡದೆ ಸತಾಯಿಸುತ್ತಿದೆ.

ಉದ್ದೇಶಿತ ಎರಡು ಕಟ್ಟಡಗಳಿಗೆ ಮಂಜೂರಾದ ಮೊತ್ತದ ಪೈಕಿ ಅರ್ಧದಷ್ಟು ಹಣವನ್ನು ಗ್ರಂಥಾಲಯ ಇಲಾಖೆ ಅನ್ಯಯೋಜನೆಗಳಿಗೆ ಹೊಂದಿಸಿಕೊಂಡಿದ್ದರಿಂದ ಈಗ ಈ ಎರಡು ಕಟ್ಟಡಗಳಿಗೆ ನೀಡಲು ಅನುದಾನ ಕೊರತೆ ಎನ್ನಲಾಗುತ್ತಿದೆ.

5 ಲಕ್ಷ ರೂ. ಬಿಡುಗಡೆ
2015ನೇ ಸಾಲಿನಲ್ಲಿ ತಾಲೂಕಿನ ದೇವಚಳ್ಳ ಮತ್ತು ಅರಂತೋಡು ಗ್ರಾ.ಪಂ.ನಲ್ಲಿ ಎರಡು ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕಾಗಿ ತಲಾ 5 ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ. ಮಂಜೂರಾಗಿದ್ದು, ಕಾಮಗಾರಿಯ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಆದರೆ ಗ್ರಂಥಾಲಯ ಇಲಾಖೆ ನಿರ್ಮಿತಿ ಕೇಂದ್ರಕ್ಕೆ ಕೇವಲ 5 ಲಕ್ಷ ರೂ. ನೀಡಿದೆ.

ಬಿಡುಗಡೆಯಾಗಿದ್ದ ಅರ್ಧದಷ್ಟು ಮೊತ್ತದಲ್ಲಿ ಎರಡೂ ಕಟ್ಟಡಗಳ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ನೆಲಹಾಸು, ಪೈಂಟಿಂಗ್‌, ಕಿಟಕಿ, ಬಾಗಿಲು ಮತ್ತಿತರ ಚಿಕ್ಕ ಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿವೆ. ಬಾಕಿ ಕಂತನ್ನು ನೀಡಲು ಇಲಾಖೆಗೆ ಸಾಧ್ಯವಾಗದೆ ಕಟ್ಟಡದ ಪೂರ್ಣ ಕಾಮಗಾರಿ ಸ್ಥಗಿತಗೊಂಡಿದ್ದು, ನಿರ್ಮಿತಿ ಕೇಂದ್ರವೂ ಅಸಹಾಯಕವಾಗಿದೆ.

ಇಲಾಖೆ ಅನುದಾನ
ತಾಲೂಕಿನ ಉದ್ದೇಶಿತ ಎರಡು ಕಟ್ಟಡಗಳಿಗೆ ಸ್ಥಳೀಯ ಪಂಚಾಯತ್‌ ತಲಾ 5 ಸೆಂಟ್ಸ್‌ ಜಾಗವನ್ನು ಇಲಾಖೆಗೆ ಹಸ್ತಾಂತರಿಸಿದೆ. ಹೀಗಾಗಿ ಇವೆರಡು ಕಟ್ಟಡಗಳ ಅನುದಾನ ನೀಡಿ ಪೂರ್ಣಗೊಳಿಸಿ, ನಿರ್ವಹಿಸಬೇಕಾದ್ದು ಗ್ರಂಥಾಲಯ ಇಲಾಖೆಯ ಹೊಣೆ. ದ.ಕ. ಜಿಲ್ಲೆಯಲ್ಲಿ ಗ್ರಂಥಾಲಯದ ಕೇಂದ್ರ ಕಚೇರಿ ಮಂಗಳೂರಿನ ಬಾವುಟಗುಡ್ಡೆಯಲ್ಲಿಕುವ ಕೇಂದ್ರ ಗ್ರಂಥಾಲಯವೇ ಆಗಿದೆ. ಬಾಕಿಯಿರುವ ಅನುದಾನ ಬಗ್ಗೆ ವಿಚಾರಿಸಿದಾಗ ಇಲ್ಲಿನ ಅಧಿಕಾರಿಗಳು ಬೆಂಗಳೂರಿನ ಗ್ರಂಥಾಲಯ ಆಯುಕ್ತರ ಕಚೇರಿಯಿಂದಲೇ ಬಿಡುಗಡೆಯಾಗಬೇಕಿದ್ದು, ಹಣ ಬಂದಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ.

ಜನಪ್ರತಿನಿಧಿಗಳ ನಿರಾಸಕ್ತಿ
ಎರಡು ಬಾರಿ ತಾ.ಪಂ. ಕೆಡಿಪಿ ಸಭೆಯಲ್ಲಿ ಪ್ರಸ್ತಾವವಾಗಿ ಸ್ಥಗಿತಗೊಂಡ ನಿರ್ಮಾಣ ಕಾಮಗಾರಿ ಬಗ್ಗೆ ಗ್ರಂಥಾಲಯ ಇಲಾಖೆಗೆ ಚುರುಕು ಮುಟ್ಟಿಸಿ ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡುವ ನಿರ್ಧಾರವಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಅನುದಾನ ಬಿಡುಗಡೆಗೊಳಿಸಲು ಒತ್ತಡ ಹಾಕಿ ಶೀಘ್ರ ಬಾಕಿಯಿರುವ ಕಾಮಗಾರಿ ಪೂರ್ಣಗೊಳಿಸಲು ಆಸಕ್ತಿ ವಹಿಸದಿರುವುದರಿಂದ ಇಲಾಖೆಯೂ ಅನುದಾನ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದೆ.

ಪತ್ರ ಬರೆಯಲಾಗಿದೆ
ಎರಡು ನಿರ್ಮಾಣ ಕಟ್ಟಡಗಳು ಗ್ರಂಥಾಲಯ ಇಲಾಖೆಗೊಳಪಟ್ಟಿವೆ. ಬಾಕಿ ಮೊತ್ತ ಬೆಂಗಳೂರಿನ ಗ್ರಂಥಾಲಯ ಇಲಾಖೆ ಆಯುಕ್ತರ ಕಚೇರಿಯಿಂದಲೇ ಬಿಡುಗಡೆಯಾಗಬೇಕಾಗಿದೆ. ದ.ಕ. ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ವಿಚಾರಿಸಿದಾಗ ಹಣ ಬಂದಿಲ್ಲ ಎಂಬ ಉತ್ತರ ಬರುತ್ತಿದೆ. ಇಲಾಖಾ ಆಯುಕ್ತರ ಕಚೇರಿಗೆ ಪತ್ರ ಬರೆಯಲಾಗಿದೆ.
ಹರೀಶ್‌
  ನಿರ್ಮಿತಿ ಕೇಂದ್ರದ ಅಧಿಕಾರಿ

ಬಾಗಿಲು ನಿರ್ಮಿಸಿ
ಅರಂತೋಡಿನಲ್ಲಿ ಉದ್ದೇಶಿತ ಕಟ್ಟಡ ಎದುರುಗಡೆ ಇತರ ಕಟ್ಟಡಗಳಿವೆ. ಹೀಗಾಗಿ ರಾತ್ರಿ ವೇಳೆ ನಿರ್ಮಾಣ ಹಂತದಲ್ಲಿರುವ ಕಟ್ಟಡದೊಳಗೆ ತೆರಳುವ ಮದ್ಯವ್ಯಸನಿಗಳು ಕಟ್ಟಡವನ್ನು ತಮ್ಮ ಅಡ್ಡೆಯನ್ನಾಗಿಸಿಕೊಂಡಿದ್ದಾರೆ. ಕಟ್ಟಡದೊಳಗಡೆ ಸಾಕಷ್ಟು ಮದ್ಯದ ಬಾಟಲಿ ಹಾಗೂ ಇತರ ನಿರುಪಯುಕ್ತ ವಸ್ತುಗಳು ರಾಶಿ ಬಿದ್ದಿವೆ. ಕಟ್ಟಡದ ಒಳಗಡೆ ಪ್ರವೇಶಿಸದಂತೆ ಬಾಗಿಲು ನಿರ್ಮಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಶೀಘ್ರ ಅಳವಡಿಸಲಾಗುವುದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಭರತ್‌ ಕನ್ನಡ್ಕ

ಟಾಪ್ ನ್ಯೂಸ್

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

MLC ಚುನಾವಣೆ ಬಿಜೆಪಿ, ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಕೋಟ

MLC ಚುನಾವಣೆ ಬಿಜೆಪಿ, ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಕೋಟ

Kerala “ವೆಸ್ಟ್‌ನೈಲ್‌’ ಜ್ವರದ ಆತಂಕ; ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

Kerala “ವೆಸ್ಟ್‌ನೈಲ್‌’ ಜ್ವರದ ಆತಂಕ; ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ನೈಋತ್ಯ ಕ್ಷೇತ್ರ; ಬಿಜೆಪಿ- ಜೆಡಿಎಸ್‌ ಒಮ್ಮತದ ಅಭ್ಯರ್ಥಿಗೆ ಗೆಲುವು: ಡಾ| ಧನಂಜಯ ಸರ್ಜಿ

ನೈಋತ್ಯ ಕ್ಷೇತ್ರ; ಬಿಜೆಪಿ- ಜೆಡಿಎಸ್‌ ಒಮ್ಮತದ ಅಭ್ಯರ್ಥಿಗೆ ಗೆಲುವು: ಡಾ| ಧನಂಜಯ ಸರ್ಜಿ

Vasantha ಬಂಗೇರರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಸಾಂತ್ವನ

Vasantha ಬಂಗೇರರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಸಾಂತ್ವನ

Bantwal ಅಕ್ರಮ ಸಾಗಾಟದ ಮರಳು ವಶ; ಪ್ರಕರಣ ದಾಖಲು

Bantwal ಅಕ್ರಮ ಸಾಗಾಟದ ಮರಳು ವಶ; ಪ್ರಕರಣ ದಾಖಲು

Mulki ಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ಪ್ರಿಯತಮನೂ ಆತ್ಮಹತ್ಯೆ

Mulki ಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ಪ್ರಿಯತಮನೂ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vasantha ಬಂಗೇರರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಸಾಂತ್ವನ

Vasantha ಬಂಗೇರರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಸಾಂತ್ವನ

Bantwal ಅಕ್ರಮ ಸಾಗಾಟದ ಮರಳು ವಶ; ಪ್ರಕರಣ ದಾಖಲು

Bantwal ಅಕ್ರಮ ಸಾಗಾಟದ ಮರಳು ವಶ; ಪ್ರಕರಣ ದಾಖಲು

Road Mishap ಅರಂತೋಡು: ಬೈಕ್‌- ಜೀಪ್‌ ಢಿಕ್ಕಿ; ಗಾಯ

Road Mishap ಅರಂತೋಡು: ಬೈಕ್‌- ಜೀಪ್‌ ಢಿಕ್ಕಿ; ಗಾಯ

Road Mishap ಕಾರು ಅಪಘಾತ: 6 ಮಂದಿಗೆ ಗಾಯ

Road Mishap ಕಾರು ಅಪಘಾತ: 6 ಮಂದಿಗೆ ಗಾಯ

Uppinangady ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಸಾವು

Uppinangady ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ

ISREL

Israel–ಹಮಾಸ್‌ಯುದ್ಧ: 70 ಹಮಾಸ್‌ ಉಗ್ರರ ಹತ್ಯೆ

imran-khan

Pak ಅಮೂಲ್ಯ ಗಿಫ್ಟ್ ಮಾರಾಟ: ಇಮ್ರಾನ್‌ ವಿರುದ್ಧ ಪ್ರಕರಣ

MLC ಚುನಾವಣೆ ಬಿಜೆಪಿ, ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಕೋಟ

MLC ಚುನಾವಣೆ ಬಿಜೆಪಿ, ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಕೋಟ

1-ewqeqwe

Cannes 2024 : ಐಶ್ವರ್ಯಾ ರೈ ಹೊಸ ಲುಕ್‌ಗೆ ನೆಟ್ಟಿಗರ ಪರ, ವಿರೋಧ ಕಮೆಂಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.