ನಿಕೃಷ್ಟ ಖರೀದಿ ದರ : ರಸ್ತೆ ತುಂಬ ಬಟಾಟೆ ಚೆಲ್ಲಿ ರೈತರ ಪ್ರತಿಭಟನೆ
Team Udayavani, Jan 6, 2018, 5:18 PM IST
ಲಕ್ನೋ : ತಾವು ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬಟಾಟೆಗೆ ಸರಕಾರ ಅತ್ಯಂತ ಕಡಿಮೆ ಖರೀದಿ ಬೆಲೆ ನಿಗದಿಸಿರುವುದನ್ನು ಪ್ರತಿಭಟಸಿದ ರೈತರು ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಅಪಾರ ಪ್ರಮಾಣದ ಬಟಾಟೆಯನ್ನು ರಸ್ತೆ ತುಂಬ ಚೆಲ್ಲಿರುವ ಘಟನೆ ವರದಿಯಾಗಿದೆ.
ಆದರೆ ಬಟಾಟೆಯನ್ನು ರಸ್ತೆ ತುಂಬ ಚೆಲ್ಲಲಾಗಿರುವ ಈ ಘಟನೆಯನ್ನು ಸರಕಾರ ‘ದುಷ್ಕರ್ಮಿಗಳ ಕೃತ್ಯ’ವೆಂದು ಹೇಳಿದ್ದು ಸರಕಾರದ ಈ ಹೇಳಿಕೆಯನ್ನು ರೈತರು ತೀವ್ರವಾಗಿ ಖಂಡಿಸಿದ್ದಾರೆ.
ಬಟಾಟೆ ಚೀಲಗಳಿಂದ ತುಂಬಿದ್ದ ಟ್ರಕ್ ಒಂದು ಬಟಾಟೆಯನ್ನು ಇಂದು ನಸುಕಿನ ವೇಳೆ ನಗರದ ರಸ್ತೆಯ ತುಂಬೆಲ್ಲ ಚೆಲ್ಲುತ್ತಿರುವುದು ಕಂಡು ಬಂದಿದೆ ಎಂದು ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಶಲ್ ರಾಜ್ ಶರ್ಮಾ ಹೇಳಿದರು.