ಮೈಲಾರದ ಕಾರ್ಣಿಕದಲ್ಲಿ ಗೊಂದಲ ಸೃಷಿ
Team Udayavani, Feb 5, 2018, 4:55 PM IST
ಹೂವಿನಹಡಗಲಿ: ನಾಡಿನ ಸುಪ್ರಸಿದ್ಧ ಮೈಲಾರೇಶ್ವರ ಜಾತ್ರೆಯ ಪ್ರಮುಖ ಭಾಗವಾದ ಕಾರ್ಣಿಕೋತ್ಸವದಲ್ಲಿ ಈ ಬಾರಿ ಕಾರ್ಣಿಕ ಸರಿಯಾಗಿ ಕೇಳದಿರುವುದರಿಂದ ಗೊಂದಲ ಉಂಟಾಗಿದ್ದು ಇದರ ಸತ್ಯಾಸತ್ಯತೆ ಅರಿಯಲು ಗೊರವಪ್ಪ ಹೇಳಿದ ನುಡಿಯನ್ನು ಧ್ವನಿ ಪರೀಕ್ಷೆಗಾಗಿ ಬೆಂಗಳೂರಿನನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಶನಿವಾರ ಮೊದಲು “ಆಕಾಶಕ್ಕೆ ಸಿಡಿಲು ಬಡಿತಲೇ ಪರಾಕ್’ ಈ ವರ್ಷದ ಕಾರ್ಣಿಕ ನುಡಿ ಎಂದು ಘೋಷಿಸಲಾಯಿತು. ಆದರೆ ನಂತರದಲ್ಲಿ ದೇವಸ್ಥಾನಕ್ಕೆ ತೆರಳಿದ ಕೆಲ ಭಕ್ತರು “ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್’ ಇದು ಕಾರ್ಣಿಕ ನುಡಿ ಎಂದು ತಮ್ಮ ಮೊಬೈಲ್ನಲ್ಲಿನ ವೀಡಿಯೋ ತೋರಿಸಿದ್ದಾರೆ. ನಂತರ ದೇವಸ್ಥಾನದ ಕಾರ್ಯನಿರ್ವಾಹಕ
ಅಧಿಕಾರಿ ಹಾಲಪ್ಪ “ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್’ ಎನ್ನುವುದು ಈ ವರ್ಷದ ಕಾರ್ಣಿಕ ನುಡಿ ಎಂದು ಘೋಷಿಸಿದ್ದಾರೆ. ಇದರಿಂದ ಗೊಂದಲ ಇನ್ನಷ್ಟು ಹೆಚ್ಚಿದೆ.
ಗೊಂದಲ ಬಗೆಹರಿಸಲು ನುರಿತ ಧ್ವನಿ ತಜ್ಞರಿಗೆ ಕಾರ್ಣಿಕದ ನುಡಿಯನ್ನು ಕಳುಹಿಸಲಾಗಿದೆ. ಅಲ್ಲಿಂದ ಮಾಹಿತಿ ಬಂದ ನಂತರ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ದೇವಸ್ಥಾನ ಕಮಿಟಿಯವರು ಎಲ್ಲರೂ ಸೇರಿ ಸ್ಪಷ್ಟ ಪಡಿಸಲಾಗುವುದು.
∙ಮಹೇಶ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು
JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ