7 ರಿಂದ 10 ರವರೆಗೆ ಸ್ಟೋನಾ ಮೇಳ
Team Udayavani, Feb 6, 2018, 12:47 PM IST
ಬೆಂಗಳೂರು: ತುಮಕೂರು ರಸ್ತೆ ಮಾದಾವರ ಬಳಿಯಿರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಫೆ.7 ರಿಂದ 10ರವರೆಗೆ 13ನೇ ಅಂತಾರಾಷ್ಟ್ರೀಯ ಗ್ರಾನೈಟ್ಸ್ ಮತ್ತು ಸ್ಟೋನ್ ಪ್ರದರ್ಶನ ಮೇಳ “ಸ್ಟೋನಾ-2018′ ನಡೆಯಲಿದೆ.
ಫೆಡರೇಷನ್ ಆಫ್ ಇಂಡಿಯನ್ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರೀ (ಎಫ್ ಐಜಿಎಸ್ಐ) ಆಯೋಜಿಸಿರುವ ನಾಲ್ಕು
ದಿನಗಳ ಮೇಳದ ಪ್ರಯುಕ್ತ ಸೋಮವಾರ ನಡೆದ ಪತ್ರಿಕಾಗೋಷ್ಠಿಯ ನ್ನುದ್ದೇಶಿಸಿ ಒಕ್ಕೂಟದ ಅಧ್ಯಕ್ಷ ಆರ್. ಸೇಖರ್ ಅವರು ಮಾತನಾಡಿದರು. ಸ್ಟೋನಾ ಮೇಳ ಆಯೋಜಿಸುವ ಮೂಲಕ ನೈಸರ್ಗಿಕ ಶಿಲೆ ಉದ್ಯಮವನ್ನು ಜಾಗತಿಕವಾಗಿ ವಿಸ್ತರಿಸುವುದು ಹಾಗೂ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದರು.
ನಮ್ಮ ದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ಗ್ರಾನೈಟ್, ಮಾರ್ಬಲ್, ಸ್ಯಾಂಡ್ಸ್ಟೋನ್, ಸ್ಲೇಟ್, ಲೈಮ್ಸ್ಟೋನ್ ಮತ್ತು ಕ್ವಾರ್ಟ್ಜೈಟ್ ಇನ್ನಿತರ ಶಿಲೆಗಳ ಅಪಾರ ಸಂಪತ್ತಿದೆ. ಪ್ರಪಂಚದ ಒಟ್ಟು ಶಿಲೆ ವ್ಯಾಪಾರದ ಪ್ರತಿಶತ 11 ರಷ್ಟು ಪ್ರಮಾಣ ನಮ್ಮ ದೇಶದಿಂದ ವಿದೇಶಗಳಿಗೆ ರಫ್ತಾಗುತ್ತಿದೆ. ವಿಶ್ವದ ಉತ್ಪಾದನೆಯಲ್ಲಿ ಶೇ.27 ರಷ್ಟು ಪಾಲು ಇಲ್ಲಿಂದಲೇ ಆಗುತ್ತಿದೆ. ಸ್ಥಳೀಯ ಮತ್ತು ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೈಸರ್ಗಿಕ ಶಿಲೆ ವ್ಯಾಪಾರದಲ್ಲಿ ಇಂದು 14 ಸಾವಿರ ಕೋಟಿ ರೂ. ಮೀರಿ ಮುನ್ನಡೆದಿದ್ದೇವೆ ಎಂದು ತಿಳಿಸಿದರು.
ಸ್ಟೋನಾ 2018ರ ಅಧ್ಯಕ್ಷ ಈಶ್ವಿಂದರ್ ಸಿಂಗ್ ಮಾತನಾಡಿ, ಒಕ್ಕೂಟ ಕಳೆದ 30 ವರ್ಷದಿಂದ ಮೇಳ ಆಯೋಜಿಸುತ್ತಿದ್ದು,
ಇದು 13ನೇ ಮೇಳವಾಗಲಿದೆ. ಗುಜರಾತ್, ಒಡಿಶಾ, ರಾಜಸ್ತಾನ, ಕರ್ನಾಟಕದ ಶಿಲೆಗಳ ಜೊತೆ ಇರಾನ್, ಟರ್ಕಿ, ಚೀನಾ, ಇಟಲಿ ಮುಂತಾದ ದೇಶಗಳ ಮಾರ್ಬಲ್ ಬ್ಲಾಕ್ಸ್ ಹಾಗೂ ಗ್ರಾನೈಟ್ ಶಿಲೆಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು.
ಎಫ್ಐಜಿಎಸ್ಐ ಉಪಾಧ್ಯಕ್ಷ ಎಸ್. ಕೃಷ್ಣಪ್ರಸಾದ್ ಗ್ರಾನೈಟ್ ಬ್ಲಾಕ್ಗಳ ಉತ್ಪಾದನೆಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದು
,ಕರ್ನಾಟಕ 5ನೇ ಸ್ಥಾನದಲ್ಲಿದೆ. ನೈಸರ್ಗಿಕ ಶಿಲೆ ವ್ಯಾಪಾರದಲ್ಲಿ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ಆದರೆ, ನಾಲ್ಕೈದು ವರ್ಷಗಳಿಂದ ರಾಜ್ಯದಲ್ಲಿ ಹೊಸ ಗಣಿಗಾರಿಕೆಗೆ ಅನುಮತಿ ನೀಡಿಲ್ಲದಿರುವು ದರಿಂದ ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ