ಮುಗ್ಗರಿಸಿದ ವಿಶ್ವ ಮಾರುಕಟ್ಟೆ; ಮುಂಬಯಿ ಷೇರುಪೇಟೆಗೂ ಶಾಕ್
Team Udayavani, Feb 7, 2018, 11:05 AM IST
ಮುಂಬಯಿ/ಲಂಡನ್: ಜಗತ್ತಿನಾದ್ಯಂತದ ಷೇರು ಮಾರುಕಟ್ಟೆಗಳಿಗೆ ಮಂಗಳವಾರ ಕರಾಳದಿನವಾಗಿ ಪರಿಣಮಿಸಿತು. ವಾಲ್ಸ್ಟ್ರೀಟ್ನಲ್ಲಿ ಉಂಟಾದ ದಾಖಲೆಯ ಕುಸಿತವು ಏಷ್ಯಾ, ಯುರೋಪ್ನ ಮಾರುಕಟ್ಟೆಗಳಲ್ಲೂ ಸಂಚಲನ ಮೂಡಿಸಿದ್ದಲ್ಲದೆ, ಹೂಡಿಕೆದಾರರನ್ನು ಭಾರೀ ನಷ್ಟಕ್ಕೆ ತಳ್ಳಿತು. ಹಣದುಬ್ಬರದ ಪ್ರಮಾಣ ಏರಿಕೆಯಾಗುತ್ತಿದ್ದು, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ಮಾಡಬಹುದು ಎಂಬ ಭೀತಿಯೇ ವಾಲ್ಸ್ಟ್ರೀಟ್ ವಾಷ್ಔಟ್ ಆಗಲು ಕಾರಣ.
ಅತ್ತ ವಾಲ್ಸ್ಟ್ರೀಟ್ನಲ್ಲಿ ಮಾರುಕಟ್ಟೆ ಕುಸಿಯುತ್ತಿದಂತೆ, ಇತ್ತ ಮುಂಬಯಿ ಷೇರುಪೇಟೆಯಲ್ಲೂ ಅದರ ಎಫೆಕ್ಟ್ ಕಾಣತೊಡಗಿತು. ಹೂಡಿಕೆದಾರರು ಷೇರುಗಳ ಭಾರೀ ಮಾರಾಟದಲ್ಲಿ ತೊಡಗಿದ ಕಾರಣ, ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್ 1,275 ಅಂಕ ಕುಸಿಯಿತು. ಆದರೆ, ಅನಂತರ ಚೇತರಿಸಿಕೊಂಡು, ದಿನಾಂತ್ಯಕ್ಕೆ 561 ಅಂಕ ಕುಸಿತ ಕಂಡು, 34,195ರಲ್ಲಿ ಕೊನೆಗೊಂಡಿತು. ಇನ್ನು ನಿಫ್ಟಿ ಕೂಡ ಸತತ 6ನೇ ದಿನವೂ ಕುಸಿತಕ್ಕೆ ಸಾಕ್ಷಿಯಾಗಿ, 168 ಅಂಕ ಕುಸಿತ ದಾಖಲಿಸಿ, ದಿನಾಂತ್ಯಕ್ಕೆ 10,498ರಲ್ಲಿ ಕೊನೆಗೊಂಡಿತು. ಒಟ್ಟಿನಲ್ಲಿ ಕಳೆದ 6 ದಿನಗಳಲ್ಲಿ ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ ಉಂಟುಮಾಡಿತು.
ವಾಲ್ಸ್ಟ್ರೀಟ್ ಕುಸಿತದ ಪರಿಣಾಮವಾಗಿ ಟೋಕಿಯೋ, ಹಾಂಕಾಂಗ್, ಸಿಡ್ನಿ, ಸಿಂಗಾಪುರ ಸಹಿತ ಎಲ್ಲ ಷೇರು ಮಾರುಕಟ್ಟೆಗಳೂ ಆಘಾತಕ್ಕೆ ಸಾಕ್ಷಿಯಾದವು. ಈ ಕುರಿತು ಪ್ರತಿಕ್ರಿಯಿಸಿರುವ ಆಕ್ಸಿ ಟ್ರೇಡರ್ ವಿಶ್ಲೇಷಕ ಜೇಮ್ಸ್ ಹ್ಯೂಸ್, “ಭರವಸೆ, ದುರಾಸೆ, ದಿಗಿಲು ಮತ್ತು ಭಯ… ಹೀಗೆ ನಾಲ್ಕು ಹಂತಗಳಲ್ಲಿ ಷೇರುಪೇಟೆ ಕುಸಿತ ಕಾಣುತ್ತದೆ. ನಾವಿಂದು ಭಯದ ಪರಿಸ್ಥಿತಿಗೆ ತಲುಪಿಲ್ಲ, ಆದರೆ, ದಿಗಿಲು ಮಾತ್ರ ಖಂಡಿತಾ ಇದೆ. 1,175ರಷ್ಟು (ಶೇ.4.6) ಅಂಕ ಕುಸಿತ ಕಂಡಾಗ ಯಾರಿಗೆ ತಾನೇ ಆತಂಕವಾಗದೇ ಇರಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
24 ಗಂಟೆಗಳಲ್ಲಿ ವಾರೆನ್ ಬಫೆಟ್ಗೆ 32,800 ಕೋಟಿ ರೂ. ನಷ್ಟ
ಅಮೆರಿಕದ ವಾಲ್ಸ್ಟ್ರೀಟ್ನಲ್ಲಾದ ಬ್ಲಿಡ್ಬಾತ್ ವಿಶ್ವದ ಮೂರನೇ ಅತಿ ಶ್ರೀಮಂತ ಎಂದೇ ಖ್ಯಾತಿಯಾಗಿರುವ ಕೋಟ್ಯಧಿಪತಿ ವಾರೆನ್ ಬಫೆಟ್ ಅವರ ಆಸ್ತಿಯನ್ನು ಕೇವಲ 24 ಗಂಟೆಗಳಲ್ಲಿ 32,800 ಕೋಟಿ ರೂ. (5.1 ಶತಕೋಟಿ ಡಾಲರ್)ನಷ್ಟು ಕಡಿಮೆಯಾಗಿಸಿತು. ಅವರು ಈ ಪ್ರಮಾಣದ ನಷ್ಟ ಅನುಭವಿಸಿ ರುವುದಾಗಿ ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ವರದಿ ಹೇಳಿದೆ. ಇನ್ನು ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ಬರ್ಗ್ 23,100 ಕೋಟಿ ರೂ. ನಷ್ಟ ಅನುಭವಿಸಿದರು. ಒಟ್ಟಿನಲ್ಲಿ ಮಂಗಳವಾರ ವಾಲ್ಸ್ಟ್ರೀಟ್ನಲ್ಲಾದ ಕುಸಿತವು ವಿಶ್ವದ 500 ಸಿರಿವಂತರ 114 ಶತಕೋಟಿ ಡಾಲರ್(7.33 ಲಕ್ಷ ಕೋಟಿ ರೂ.) ಮೌಲ್ಯದ ಸಂಪತ್ತನ್ನು ಕರಗಿಸಿತು ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ