ತೊಗರಿ ಖರೀದಿ ಸ್ಥಗಿತ: ಆತಂಕದಲ್ಲಿ ರೈತ
Team Udayavani, Feb 10, 2018, 11:21 AM IST
ಅಫಜಲಪುರ: ರೈತರು ಬೆಳೆದ ತೊಗರಿ ಖರೀದಿ ಪ್ರಕ್ರಿಯೆ ಹಠಾತ್ ಸ್ಥಗಿತಗೊಳಿಸಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತಾಲೂಕು ಬಹುತೇಕ ಹಳ್ಳಿಗಳಲ್ಲಿ ಶೇ 80ರಷ್ಟು ರೈತರು ತೊಗರಿ ಬೆಳೆಯುತ್ತಾರೆ. ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರವೇ ಖರೀದಿಸಲು ಮುಂದಾಯಿತು. ಆದರೆ ಸದ್ಯ ಖರೀದಿ ಕೇಂದ್ರಗಳನ್ನು ಮುಚ್ಚಿಸಿದೆ. ಶೇ. 10ರಷ್ಟು ರೈತರ ತೊಗರಿ ಖರೀದಿಯಾಗಿಲ್ಲ ಎಂದು ಅಂದಾಜಿಸಲಾಗಿದೆ.
ತಾಲೂಕಿನಲ್ಲಿ ಒಟ್ಟು 18 ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರಿಂದ ಎಕರೆಗೆ ತಲಾ 5 ಕ್ವಿಂಟಲ್ ತೊಗರಿ ಖರೀದಿಸುವಂತೆ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ. ಆದೇಶದಂತೆ ಖರೀದಿ ಮಾಡಿದ್ದೇವೆ ಎಂದು ಖರೀದಿ ಕೇಂದ್ರದವರು ಹೇಳುತ್ತಾರೆ. ಆದರೆ ತಾಲೂಕಿನಾದ್ಯಂತ ಶೇ. 10ರಷ್ಟು ತೊಗರಿಯೂ ಖರೀದಿಯಾಗಿಲ್ಲ. ಉಳಿದ 70ರಿಂದ 80ರಷ್ಟು ರೈತರು ತೊಗರಿ ಮಾರಾಟ ಮಾಡಿಲ್ಲ. ಈ ನಡುವೆ ಖರೀದಿ ಕೇಂದ್ರ ಸ್ಥಗಿತಗೊಳಿಸಿದ್ದರಿಂದ ರೈತರು ಖರೀದಿ ಕೇಂದ್ರಗಳ ಎದುರು ಚೀಲ ಇಟ್ಟುಕೊಂಡು ಕಾಯುತ್ತಾ ಕುಳಿತುಕೊಳ್ಳುವಂತಾಗಿದೆ.
ಅತನೂರ ಖರೀದಿ ಕೇಂದ್ರ: ಅತನೂರ ಖರೀದಿ ಕೇಂದ್ರದಲ್ಲಿ ಒಟ್ಟು 1320 ರೈತರು ಆನ್ ಲೈನ್ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 250 ರೈತರ ಒಟ್ಟು 4500 ಕ್ವಿಂಟಲ್ ತೊಗರಿ ಖರೀದಿಯಾಗಿದೆ. ಆನ್ಲೈನ್ ನೋಂದಣಿ ಮಾಡಿಸದ ಇನ್ನೂ 1070 ರೈತರ ತೊಗರಿ ಖರೀದಿಯಾಗಿಲ್ಲ.
ಹಸರಗುಂಡಗಿ ಖರೀದಿ ಕೇಂದ್ರ: 550 ರೈತರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 260 ರೈತರಿಂದ 2250 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಭೈರಾಮಡಗಿ ಖರೀದಿ ಕೇಂದ್ರ: 1745 ರೈತರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 423 ರೈತರಿಂದ 3750 ಕ್ವಿಂಟಲ್ ತೊಗರಿ ಖರೀದಿ ಮಾಡಲಾಗಿದೆ.
ಗೊಬ್ಬೂರ(ಬಿ) ಖರೀದಿ ಕೇಂದ್ರ: 878 ರೈತರು ನೋಂದಣಿ ಮಾಡಿಸಿದ್ದಾರೆ. 193 ರೈತರಿಂದ ಒಟ್ಟು 3500 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ದೇಸಾಯಿ ಕಲ್ಲೂರ ಖರೀದಿ ಕೇಂದ್ರ: 750 ರೈತರು ನೋಂದಣಿ ಮಾಡಿಸಿದ್ದಾರೆ. 230 ರೈತರಿಂದ ಒಟ್ಟು 3500 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಮಾಶಾಳ ಖರೀದಿ ಕೇಂದ್ರ: 1067 ರೈತರು ನೋಂದಣಿ ಮಾಡಿಸಿದ್ದಾರೆ. ಇಲ್ಲಿಯವರೆಗೆ 163 ರೈತರಿಂದ 2870 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಚಿಣಮಗೇರಾ ಖರೀದಿ ಕೇಂದ್ರ: 718 ರೈತರು ನೋಂದಣಿ ಮಾಡಿಸಿದ್ದಾರೆ. 269 ರೈತರಿಂದ 4700 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ರೇವೂರ(ಬಿ) ಖರೀದಿ ಕೇಂದ್ರ: 1825 ರೈತರು ನೋಂದಿಣಿ ಮಾಡಿಸಿದ್ದಾರೆ. 316 ರೈತರಿಂದ ಒಟ್ಟು 5500 ಕ್ವಿಂಟಲ್ ಗರಿ
ಖರೀದಿಸಲಾಗಿದೆ.
ಮಣೂರ ಖರೀದಿ ಕೇಂದ್ರ: 727 ರೈತರು ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 165 ರೈತರಿಂದ 2750 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಖರೀದಿ ಕೇಂದ್ರಗಳ ಲಭ್ಯ ಮಾಹಿತಿ ಪ್ರಕಾರ 12560 ರೈತರ ಆನ್ಲೈನ್ ನೋಂದಣಿಯಾಗಿದೆ. ಈ ಪೈಕಿ 2897 ರೈತರ ತೊಗರಿ ಖರೀದಿಸಲಾಗಿದೆ. ಆನ್ಲೈನ್ನಲ್ಲಿ ನೋಂದಣಿಯಾದ ಇನ್ನೂ 9663 ರೈತರ ತೊಗರಿ ಖರೀದಿಯಾಗಿಲ್ಲ. ಸದ್ಯ ತೊಗರಿ ಖರೀದಿ ಸ್ಥಗಿತಗೊಳಿಸಿದ್ದರಿಂದ ತಾಲೂಕಿನ ರೈತರಿಗೆ ಭಾರಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ತೊಗರಿ ಖರೀದಿ ಕೇಂದ್ರ ಪುನಾರಂಭಿಸಿ ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ತೊಗರಿ ಬೆಳೆದ ರೈತರು ಅಳಲು ತೋಡಿಕೊಂಡಿದ್ದಾರೆ
ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ