ಪಿಎನ್ಬಿ ಹಗರಣ : ಆರೋಪಿಗಳು ಸಿಬಿಐ ಬಲೆಗೆ
Team Udayavani, Feb 18, 2018, 7:30 AM IST
ಹೊಸದಿಲ್ಲಿ: ದೇಶೀಯ ಬ್ಯಾಂಕಿಂಗ್ ಕ್ಷೇತ್ರವನ್ನು ತಲ್ಲಣಗೊಳಿಸಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ (ಪಿಎನ್ಬಿ) ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಿಬಿಐ ಮೂವರನ್ನು ಬಂಧಿಸಿದೆ. ದಕ್ಷಿಣ ಕನ್ನಡದ ಮೂಲ್ಕಿ ಮೂಲದವರಾದ, ಪಿಎನ್ಬಿಯ ಮಾಜಿ ಉಪ ವ್ಯವಸ್ಥಾಪಕ ಗೋಕುಲನಾಥ್ ಶೆಟ್ಟಿ, ಪಿಎನ್ಬಿಯ ಸಿಂಗಲ್ ವಿಂಡೋ ಆಪರೇಟರ್ ಮನೋಜ್ ಖಾರಟ್ ಹಾಗೂ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯವರ ಕಂಪೆನಿಗಳ ಅಧಿಕೃತ ಸಹಿದಾರ ಹೇಮಂತ್ ಭಟ್ ಬಂಧಿತರು. ಬಂಧಿತರನ್ನು ಮುಂಬಯಿಯ ವಿಶೇಷ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಈ ಮೂವರನ್ನು ಮಾ. 3ರ ವರೆಗೆ ಸಿಬಿಐ ವಶಕ್ಕೊಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಇವರಲ್ಲಿ ಗೋಕುಲನಾಥ್ ಶೆಟ್ಟಿ ಮೂಲತಃ ದಕ್ಷಿಣ ಕನ್ನಡದ ಮೂಲ್ಕಿಯವರು. ಶೆಟ್ಟಿ ಹಾಗೂ ಮನೋಜ್ ಖಾರಟ್ ಅವರ ಹೆಸರುಗಳನ್ನು ಸಿಬಿಐ ತನ್ನ ಎರಡನೇ ಎಫ್ಐಆರ್ನಲ್ಲಿ ದಾಖಲಿಸಿದ್ದು, ಮತ್ತೂಬ್ಬ ಆರೋಪಿ ಹೇಮಂತ್ ಭಟ್, 2014ರ ನವೆಂಬರ್ನಿಂದ 2017ರ ಡಿಸೆಂಬರ್ವರೆಗೆ ಸಿಂಗಲ್ ವಿಂಡೋ ಆಪರೇಟರ್ ಆಗಿ ಸೇವೆ ಸಲ್ಲಿಸಿದ್ದರೆಂದು ಇದೇ ಎಫ್ಐಆರ್ನಲ್ಲಿ ಸಿಬಿಐ ಹೇಳಿದೆ.
ಮತ್ತೂಂದು ಎಫ್ಐಆರ್: ಏತನ್ಮಧ್ಯೆ, 11,400 ಕೋಟಿ ರೂ. ಮೊತ್ತದ ಪಿಎನ್ಬಿ ಹಗರಣದಲ್ಲಿ, 143 ಎಲ್ಒಯು (ಪಿಎನ್ಬಿ ಬ್ಯಾಂಕಿನ ಅಧಿಕೃತ ಖಾತ್ರಿ ಪತ್ರ) ಬಳಸಿ ಪ್ರಕ ರಣದ ಮತ್ತೂಬ್ಬ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿ ಜ್ಯುವೆಲರ್ಸ್, ನಕ್ಷತ್ರ ಡೈಮಂಡ್ಸ್ ಹಾಗೂ ಗಿಲಿ ವಜ್ರಾಭರಣ ಕಂಪೆನಿಗಳಿಗೆ 4,886 ಕೋಟಿ ರೂ.ಗಳನ್ನು ಅಕ್ರಮವಾಗಿ ನೀಡಿರುವುದನ್ನು ಸಿಬಿಐ ಪತ್ತೆಹಚ್ಚಿದೆ.
ಸಿವಿಸಿಯಿಂದಲೂ ತನಿಖೆ: ಈಗಾಗಲೇ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಸೆಬಿ ತನಿಖೆ ಆರಂಭಿಸಿದ್ದು, ಈಗ, ಕೇಂದ್ರ ಜಾಗೃತ ಆಯೋಗ (ಸಿವಿಸಿ) ಸಹ ತನಿಖೆಗೆ ಕೈ ಹಾಕಿದೆ. ಜಾರಿ ನಿರ್ದೇಶನಾಲಯದ ದಾಳಿ ಮುಂದುವರಿದಿದ್ದು, ಶನಿವಾರ 25 ಕೋಟಿ ರೂ. ಮೌಲ್ಯದ ವಜ್ರಾಭರಣಗಳನ್ನು ಜಪ್ತಿ ಮಾಡಿದೆ.
ಬಂಧಿತರಲ್ಲಿ ಕರ್ನಾಟಕ ಮೂಲದ ಮಾಜಿ ಬ್ಯಾಂಕ್ ಅಧಿಕಾರಿ
ಪಿಎನ್ಬಿ ಬ್ಯಾಂಕ್ ಉದ್ಯೋಗಿ, ನೀರವ್ನ ಅಧಿಕೃತ ಸಹಿದಾರ ಕೂಡ ವಶಕ್ಕೆ
ಮಾ.3ರ ವರೆಗೆ ಆರೋಪಿಗಳನ್ನು ಸಿಬಿಐ ವಶಕ್ಕೊಪ್ಪಿಸಿದ ನ್ಯಾಯಾಲಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ