ಬದುಕೆಂಬ ಸ್ಕೇಟಿಂಗ್‌ನಲ್ಲಿ ಗೆದ್ದವನೇ ಸಾಹೇಬ!


Team Udayavani, Feb 24, 2018, 4:42 PM IST

Rankal-Raate.jpg

ಅವನು ಸ್ಲಂ ಹುಡುಗ. ಹೆಸರು ಸೂರಿ. ಅವನಿಗೆ ಚಿಕ್ಕಂದಿನಿಂದಲೂ ಸ್ಕೇಟಿಂಗ್‌ ಕಲಿಯೋ ಆಸೆ. ಆದರೆ, ತುತ್ತು ಅನ್ನಕ್ಕೂ ಪರಿತಪಿಸುವ ಕುಟುಂಬಕ್ಕೆ ಅವನೊಬ್ಬನೇ ಆಧಾರ. ಅನಾರೋಗ್ಯದ ತಾಯಿ ಜೊತೆ ದುಡಿದು ಬದುಕು ಕಟ್ಟಿಕೊಳ್ಳುವ ಅವನಿಗಿರೋದು ಒಂದೇ ಗುರಿ, ತಾನು ಸ್ಕೇಟಿಂಗ್‌ ಕಲಿತು, ಚಾಂಪಿಯನ್‌ ಆಗಬೇಕು. ನಂತರ ತಾಯಿಗೆ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಏನೂ ಇಲ್ಲದ ಅವನಿಗೆ ಇದು ಸಾಧ್ಯನಾ?

“ರಂಕಲ್‌ ರಾಟೆ’ಯಲ್ಲಿ ಅದು ಖಂಡಿತ ಸಾಧ್ಯ. ಈಗಾಗಲೇ ಕ್ರೀಡೆಗಳ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆ ಸಾಲಿಗೆ “ರಂಕಲ್‌ ರಾಟೆ’ ಚಿತ್ರವನ್ನು ಸೇರಿಸಬಹುದು. ಕಥೆಗೆ ಇನ್ನಷ್ಟು ಬಿಗಿಯಾದ ನಿರೂಪಣೆ ಬೇಕಿತ್ತು. ಕೆಲವೆಡೆಯಂತೂ ಜಾಳು ಜಾಳು ಎನಿಸುವ ದೃಶ್ಯಗಳು ಎದುರಾಗಿ, ನೋಡುಗನ ಚಿತ್ತ ಬದಲಿಸುವಂತೆ ಮಾಡುತ್ತೆ. ಇನ್ನೂ ಕೆಲವು ಕಡೆಯಲ್ಲಿ ಕಾಣಸಿಗುವ ದೃಶ್ಯಗಳು ಕಾಟಚಾರಕ್ಕೆಂಬಂತಿವೆ.

ಜೋಪಡಿಯಲ್ಲಿ ಕಂಡು ಬರುವ ದೃಶ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಿತ್ತು. ಭಾವನಾತ್ಮಕ ಸಂಬಂಧಗಳು ಇಲ್ಲಿ ಹೈಲೈಟ್‌ ಎನಿಸಿದರೂ, ಕ್ರೀಡೆ ಕುರಿತು ಇನ್ನಷ್ಟು ಆಳವಾಗಿ ತೋರಿಸುವ ಪ್ರಯತ್ನ ಮಾಡಬಹುದಿತ್ತು. ಮೊದಲರ್ಧ ವೇಗ ದ್ವಿತಿಯಾರ್ಧದಲ್ಲಿಲ್ಲ. ಒಮ್ಮೊಮ್ಮೆ ಸ್ಕೇಟಿಂಗ್‌ನಲ್ಲಿ ಸಾಧನೆ ಮಾಡಿರುವ ಹುಡುಗನೊಬ್ಬನ ಡಾಕ್ಯುಮೆಂಟರಿ ನೋಡಿದಂತೆ ಭಾಸವಾಗುತ್ತದೆ.

ಸುಮ್ಮನೆ ನೋಡಿಸಿಕೊಂಡು ಹೋಗುವ ಚಿತ್ರದ ಮಧ್ಯೆ, ವಿನಾಕಾರಣ ಹಾಡುಗಳು ತೂರಿಬಂದು, ನೋಡುಗನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ಒಟ್ನಲ್ಲಿ, ಸ್ಕೇಟಿಂಗ್‌ ಕ್ರೀಡೆಯಲ್ಲಿ ಸ್ಲಂ ಹುಡುಗನ ಸಾಧಕ-ಬಾಧಕ ಚಿತ್ರದ ಪ್ರಮುಖ ಅಂಶ. ಇಲ್ಲಿ ಅವನು ಹೇಗೆಲ್ಲಾ ಒದ್ದಾಡಿ, ಚಾಂಪಿಯನ್‌ ಆಗ್ತಾನೆ ಎಂಬುದನ್ನು ತುಂಬಾನೇ ಸರಳವಾಗಿ ತೋರಿಸಲಾಗಿದೆ. ಸ್ಲಂನಲ್ಲಿ ಬದುಕು ಸವೆಸುವ ಸೂರಿ, ತನ್ನ ತಾಯಿ ಜತೆ ದಿನ ದೂಡುತ್ತಿರುತ್ತಾನೆ.

ಅವನಿಗೆ ಚಿಕ್ಕಂದಿನಿಂದಲೂ ಸ್ಕೇಟಿಂಗ್‌ ಮಾಡುವ ಆಸೆ. ಆದರೆ, ಹೊಟ್ಟೆಗೆ ಹಿಟ್ಟಿಲ್ಲ. ತರಬೇತಿಗೆ ಸೇರಿ, ಸ್ಕೇಟಿಂಗ್‌ ಶೂ ಖರೀದಿಸಿ, ಆಡುವುದಂತೂ ಬಲುದೂರ. ಅತ್ತ, ಗೋವಾದಲ್ಲಿರುವ ಡೇವಿಡ್‌ ಎಂಬ ಸ್ಕೇಟಿಂಗ್‌ ತರಬೇತುದಾರ, ಒಬ್ಬಳ ಪ್ರೀತಿ ಹಿಂದೆ ಬಿದ್ದಾಗ, ಕನ್ನಡದ ಒಬ್ಬ ಹುಡುಗನನ್ನು ನೀನು ಸ್ಕೇಟಿಂಗ್‌ ಚಾಂಪಿಯನ್‌ ಮಾಡಿ ಬಾ ಎಂದು ಅವಳು ಅವನಿಗೆ ಸವಾಲು ಹಾಕುತ್ತಾಳೆ.

ಆ ಸವಾಲು ಸ್ವೀಕರಿಸುವ ತರಬೇತುದಾರ ಡೇವಿಡ್‌, ಸೀದಾ ಬೆಂಗಳೂರಿಗೆ ಬರುತ್ತಾನೆ. ಸ್ಕೇಟಿಂಗ್‌ ಅಕಾಡೆಮಿಯನ್ನು ಹಿಡಿತದಲ್ಲಿಟ್ಟುಕೊಂಡ ಶ್ರೀಮಂತೆಯೊಬ್ಬಳು ತನ್ನ ಮಗನಿಗೆ ತರಬೇತಿ ನೀಡಿ ಚಾಂಪಿಯನ್‌ ಮಾಡಿಸಬೇಕು ಎಂದು ಡೇವಿಡ್‌ನ‌ನ್ನು ನೇಮಿಸಿಕೊಳ್ಳುತ್ತಾಳೆ. ಆದರೆ, ಶ್ರೀಮಂತ ಮಗನ ಪೊಗರು ನೋಡಿ, ಆ ತರಬೇತಿ ಕೆಲಸ ಬಿಟ್ಟು ಹೊರಬರುತ್ತಾನೆ.

ಆಗ ಕಣ್ಣಿಗೆ ಕಾಣುವ ಸ್ಲಂ ಹುಡುಗ ಸೂರಿಯ ಆಸೆಗೆ ನೆರವಾಗುತ್ತಾನೆ. ಮುಂದೆ ಸೂರಿ ಚಾಂಪಿಯನ್‌ ಹೇಗಾಗುತ್ತಾನೆ ಎಂಬುದು ಕಥೆ. ಇಷ್ಟು ಹೇಳಿದ ಮೇಲೂ “ರಂಕಲ್‌ ರಾಟೆ’ಯ “ರಂಕ್ಲು’ ನೋಡುವ ಮನಸ್ಸಿದ್ದರೆ ಹೋಗಬಹುದು. ಇಲ್ಲಿರುವ ಸಣ್ಣ ಸಂದೇಶವನ್ನು ಒಪ್ಪಲೇಬೇಕು “ಜೀವನದಲ್ಲಿ ತಲೆ ತಗ್ಗಿಸಿ, ತಾಳ್ಮೆಯಿಂದ ನಡೆದರೆ ಯಶಸ್ಸು ಸಿಗುತ್ತೆ’ ಎಂಬ ತಾತ್ಪರ್ಯ ಇಲ್ಲಿದೆ.

ನಾಯಕ ಮನ ಅದ್ವಿಕ್‌ ತರಬೇತುದಾರನಾಗಿ ಗಮನಸೆಳೆಯುತ್ತಾರೆ. ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ನಾಯಕಿ ಅಶ್ರೀಯಾ ಬಗ್ಗೆ ಹೇಳುವುದೇನೂ ಇಲ್ಲ. ಉಳಿದಂತೆ ರವಿ ಕೆರೂರ್‌, ಯಶಸ್‌, ಆಶಾ ಮತ್ತಿತರರು ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಅವಿನಾಶ್‌, ಶ್ರೀರಾಮ್‌ ಸಂಗೀತದಲ್ಲಿ ಸ್ವಾದವಿಲ್ಲ. ಪ್ರವೀಣ್‌ ಎಂ. ಪ್ರಭು ಛಾಯಾಗ್ರಹಣದಲ್ಲಿ ಹೇಳಿಕೊಳ್ಳುವ ಯಾವ ಪವಾಡ ನಡೆದಿಲ್ಲ.

ಚಿತ್ರ: ರಂಕಲ್‌ ರಾಟೆ
ನಿರ್ಮಾಣ: ಬೈಸಾನಿ ಸತೀಶ್‌ಕುಮಾರ್‌
ನಿರ್ದೇಶನ: ಗೋಪಿ ಕೆರೂರ್‌
ತಾರಾಗಣ: ಮನ ಅದ್ವಿಕ್‌, ಆಶ್ರೀಯಾ, ರವಿ ಕೆರೂರ್‌, ಯಶಸ್‌, ಆಶಾ, ಕೃಷ್ಣಮೂರ್ತಿ ಮತ್ತಿತರರು

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.