ಕ್ಷುಲ್ಲಕ ಜಗಳ : 25ರ ವ್ಯಕ್ತಿಗೆ 58 ಬಾರಿ ಇರಿದ ದುಷ್ಕರ್ಮಿಗಳು
Team Udayavani, Mar 2, 2018, 11:54 AM IST
ಹೊಸದಿಲ್ಲಿ : ದಿಲ್ಲಿಯ ಖಾನಾಪುರ ಪ್ರದೇಶದಲ್ಲಿ ನಿನ್ನೆ ಗುರುವಾರ ಸಂಜೆ 25ರ ಹರೆಯದ ವ್ಯಕ್ತಿಯೊಬ್ಬನನ್ನು ಬೈಕರ್ಗಳ ಗ್ಯಾಂಗ್ ಒಂದು 50 ಬಾರಿ ಮಾರಣಾಂತಿಕವಾಗಿ ಇರಿದ ಘಟನೆ ನಡೆದಿದೆ.
ತೀವ್ರ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನಿಗೆ ಕನಿಷ್ಠ 50 ಇರಿತಗಳಾಗಿರುವುದನ್ನು ವೈದ್ಯರು ದೃಢೀಕರಿಸಿದ್ದಾರೆ. ಹಲ್ಲೆ ಘಟನೆ ನಡೆಯುತ್ತಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಯಿತಾದರೂ ಅವರು ಅರ್ಧ ತಾಸಿನ ಬಳಿಕವಷ್ಟೇ ಸ್ಥಳಕ್ಕೆ ಬಂದಿದ್ದಾರೆ. ಆಶಿಶ್ನ ಸ್ಥಿತಿ ಗಂಭೀರವಿದೆ ಎಂದು ತಿಳಿದುಬಂದಿದೆ.
ಮಾರಣಾಂತಿಕ ಇರಿತಕ್ಕೆ ಗುರಿಯಾದ ವ್ಯಕ್ತಿಯನ್ನು ಆಶಿಶ್ ಎಂದು ಗುರುತಿಸಲಾಗಿದೆ. ಆತ ಜಿಮ್ನಿಂದ ಮರಳುತ್ತಿದ್ದಾಗ ಬೈಕರ್ಗಳ ಗ್ಯಾಂಗ್ ಆತನನ್ನು ತಡೆದು 50 ಬಾರಿ ಇರಿಯಿತು. ಈ ಇಡಿಯ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ಅದನ್ನು ವೀಕ್ಷಿಸಿ ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಶಿಶ್ ಮೇಲೆ ಬೈಕರ್ ಗ್ಯಾಂಗ್ ಹಲ್ಲೆ ನಡೆಸಲು ಕಾರಣವೇನು ಎಂಬುದು ಖಚಿತವಾಗಿ ಗೊತ್ತಾಗಿಲ್ಲ.
ಆದರೆ ಸ್ಥಳೀಯರು ಹೇಳಿರುವ ಪ್ರಕಾರ ಆಶಿಶ್ ಹಿಂದಿನ ದಿನ, ಹೋಳಿ ಹಬ್ಬಕ್ಕೆ ಮುನ್ನ, ನೀರಿನ ಬಲೂನ್ ಎಸೆದಿದ್ದ ಬಾಲಕನ ಮೇಲೆ ಕೆಲವು ವ್ಯಕ್ತಿಗಳು ಯದ್ದಾತದ್ವಾ ಹಲ್ಲೆ ನಡೆಸುತ್ತಿದ್ದುದನ್ನು ಕಂಡು ತಡೆದಿದ್ದ; ಇದೇ ಕಾರಣಕ್ಕೆ ಬೈಕರ್ಗಳ ಗ್ಯಾಂಗ್ ಆಶಿಶ್ ವಿರುದ್ಧ ಸೇಡು ತೀರಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ