ಕೋಟೆ ಪುರಾತತಕ್ವೆ , ಕಂದಕ ಕಂದಾಯ ಇಲಾಖೆಗೆ!


Team Udayavani, Mar 16, 2018, 11:58 AM IST

GUL-1.jpg

ರಾಯಚೂರು: ಅವೈಜ್ಞಾನಿಕ ನಿಯಮಗಳಿಂದ ಸಾರ್ವಜನಿಕ ಆಸ್ತಿ ಹೇಗೆ ದುರ್ಬಳಕೆ ಆಗುತ್ತದೆ ಎನ್ನಲಿಕ್ಕೆ ಇಲ್ಲಿದೆ ಉತ್ತಮ ನಿದರ್ಶನ. ಪುರಾತತ್ವ ಇಲಾಖೆ ಅಧೀನದಲ್ಲಿರಬೇಕಾದ ಕೋಟೆಯ ಕಂದಕ ಜಾಗ ಕಂದಾಯ ಇಲಾಖೆ ಸೇರಿದ್ದು, ಇದರಿಂದ ಕಂದಕ ಒತ್ತುವರಿಯಾಗುತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ.

ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಯಚೂರು ಕೋಟೆಗೆ ಈಗ ಒತ್ತುವರಿದಾರರ ಕಾಟ ಶುರುವಾಗಿದೆ. ಆದರೆ, ಇದನ್ನು ತಡೆಯಬೇಕಾದ ಇಲಾಖೆಗೆ ಅಧಿಕಾರಗಳಿಲ್ಲದೇ ಕೈಕಟ್ಟಿ ಕೂಡುವ ಪರಿಸ್ಥಿತಿ ಇದೆ. ಇಲಾಖೆಗಳಲ್ಲಿನ ಸಮನ್ವಯ
ಕೊರತೆಯಿಂದ ಕಂದಕ ಸ್ಥಳ ಪರರ ಸ್ವತ್ತಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ಪರವಾನಗಿ ಪಡೆದು ಪುರಾತತ್ವ ಇಲಾಖೆ ಗಮನಕ್ಕಿಲ್ಲದಂತೆ ಕಂದಕದ ಆಸುಪಾಸು ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಕ್ಕೆ ಆಕ್ರಮಿಸಿಕೊಳ್ಳಲಾಗುತ್ತಿದೆ.

ಏನಿದು ಸಮಸ್ಯೆ?: ರಾಯಚೂರು ಕೋಟೆ ನಿರ್ಮಾಣವಾಗಿದ್ದು 13ನೇ ಶತಮಾನದಲ್ಲಿ. ಕಾಕತೀಯ ವಂಶದ ಮಹಾರಾಣಿ ರುದ್ರಮ್ಮದೇವಿ ಅವಧಿಯಲ್ಲಿ ಈ ಕೋಟೆ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ನಂತರ ಈ ಪ್ರದೇಶ ಹೈದರಾಬಾದ್‌ ನಿಜಾಮರ ಆಳ್ವಿಕೆಗೆ ಒಳಪಟ್ಟಿತು.

19ನೇ ಶತಮಾನದ ಆರಂಭದಲ್ಲಿ ಇಲ್ಲಿನ ಕೆಲ ಸ್ಮಾರಕಗಳನ್ನು ಸಾರ್ವಜನಿಕ ಆಸ್ತಿ ಎಂದು ಘೋಷಿಸಲಾಯಿತು. ಆಗ ಅದರಲ್ಲಿ ಸ್ಮಾರಕವನ್ನು ಮಾತ್ರ ಉಲ್ಲೇಖೀಸಿ ಅಕ್ಕಪಕ್ಕದ ಸ್ಥಳಗಳನ್ನು ಸೇರಿಸಲಿಲ್ಲ. ಅಲ್ಲದೇ, ಆಗ ಚಾಲ್ತಿಯಲ್ಲಿದ್ದ ಉರ್ದು ಭಾಷೆಯಲ್ಲೇ
ಎಲ್ಲ ದಾಖಲೆಗಳನ್ನು ರಚಿಸಲಾಯಿತು. ಆಗ ಕೋಟೆ ಅಕ್ಕಪಕ್ಕದ ಸ್ಥಳವೆಲ್ಲ ಕಂದಾಯ ಇಲಾಖೆಗೆ ಒಳಪಟ್ಟರೆ ಕೆಲವರು ತಮ್ಮ ಸ್ವಂತಕ್ಕೆ ಮಾಡಿಕೊಂಡರು. ಆದರೆ, ಕಾಲಾನುಕ್ರಮೇಣ ಈ ಕೋಟೆ ಕಂದಕಗಳು ಒತ್ತುವರಿಯಾಗುತ್ತಲೇ ಇದೆ.

25ಕ್ಕೂ ಅಧಿಕ ಪ್ರಕರಣಗಳು: ಕೋಟೆ ಮತ್ತು ಕಂದಕ ಒತ್ತುವರಿಗೆ ಸಂಬಂಧಿಸಿ ಸಾಕಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 25ಕ್ಕೂ ಅಧಿಕ ಪ್ರಕರಣಗಳು ನ್ಯಾಯಾಲಯ ಹಂತದಲ್ಲಿವೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಲಯ
ತಡೆಯಾಜ್ಞೆ ನೀಡಿದೆ. ಹೀಗಾಗಿ ವಿಚಾರಣೆಗೆ ಬಾರದೆ ದಿನಾಂಕ ಮೂಂದೂಡುತ್ತಲೇ ಬರಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಸ್ಥಳ ನಮ್ಮ ಹೆಸರಲ್ಲಿಯೇ ಇದೆ ಎಂದು ಸಾಕಷ್ಟು ಜನ ನ್ಯಾಯಾಲಯ ಮೊರೆ ಹೋಗಿದ್ದಾರೆ.

ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಜಾಗೆ, ಕೋಟೆ ಒತ್ತುವರಿ ತಡೆಗೆ ಯಾವುದೇ ಸ್ಮಾರಕದಿಂದ 100 ಮೀ. ಅಂತರದಲ್ಲಿ ಕಟ್ಟಡ ಕಟ್ಟಬಾರದು ಎಂದಿದ್ದರೂ ಕಂದಾಯ ಇಲಾಖೆಯಲ್ಲಿ ಆಸ್ತಿ ಖಾಸಗಿಯವರ ಹೆಸರಲ್ಲಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ.
ಹೀಗಾಗಿ ನಗರಸಭೆಯಿಂದ ಸುಲಭಕ್ಕೆ ಪರವಾನಗಿಸಿಗುತ್ತಿದೆ. ಕೋಟೆ ಸುತ್ತಲಿನ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡದಂತೆ ಪ್ರಾಚ್ಯವಸ್ತು ಇಲಾಖೆ ಸಾಕಷ್ಟು ಬಾರಿ ಮನವಿ ಮಾಡಿದೆ.

ಪ್ರಾಚ್ಯವಸ್ತು ಇಲಾಖೆಯಿಂದ ನಿರಪೇಕ್ಷಣಾ ಪತ್ರ (ಎನ್‌ಒಸಿ) ಪಡೆದವರು ಮಾತ್ರ ಕಟ್ಟಡ ನಿರ್ಮಿಸಬೇಕು. ನೀವು ಪರವಾನಗಿ ನೀಡುವ ಮುನ್ನ ಪುರಾತತ್ವ ಇಲಾಖೆಯಿಂದ ಎನ್‌ಒಸಿ ಪಡೆಯಲು ಸೂಚಿಸುವಂತೆ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಂದಕ ಪರರ ಆಸ್ತಿ ಎನ್ನುವಂತಾಗಿದೆ ಪುರಾತತ್ವ ಇಲಾಖೆ ಸ್ಥಿತಿ. ಇನ್ನಾದರೂ ಜಿಲ್ಲಾ ಧಿಕಾರಿಗಳು ಈ ವಿಚಾರದಲ್ಲಿ ಕಠಿಣ ನಿಲವು ತಾಳಬೇಕು. ಇಲ್ಲವಾದಲ್ಲಿ ಕಂದಕ ಎಂಬುದು ಕೆಲವೇ ವರ್ಷಗಳಲ್ಲಿ ಕಾಣೆಯಾಗುವುದರಲ್ಲಿ
ಸಂದೇಹಗಳಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಕೋಟೆ ಕಂದಕದ ಸ್ಥಳ ಒತ್ತುವರಿ ಮಾಡಲು ಬಿಡುವುದಿಲ್ಲ. ಈ ಹಿಂದೆ ನಗರಸಭೆ ಪರವಾನಗಿ ನೀಡಿರುವ ಬಗ್ಗೆ ಗಮನಕ್ಕಿಲ್ಲ. ಆದರೆ, ಹೊಸದಾಗಿ ಮಾತ್ರ ಯಾವುದೇ ಪರವಾನಗಿ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಕಂದಕ ಒತ್ತುವರಿಗೆ ಆಸ್ಪದ ನೀಡುವುದಿಲ್ಲ. ಹಿಂದೆ ನೀಡಿರುವ ಪರವಾನಗಿಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕ್ಕೆ ಸೂಚನೆ ನೀಡಲಾಗುವುದು.
 ಡಾ.ಬಗಾದಿ ಗೌತಮ್‌, ಜಿಲ್ಲಾಧಿಕಾರಿ ರಾಯಚೂರು

ಪುರಾತತ್ವ ಇಲಾಖೆ ಬರೆದ ಪತ್ರದ ಬಗ್ಗೆ ಗಮನಕ್ಕಿಲ್ಲ. ನಾನು ಈಚೆಗೆ ಅಧಿಕಾರ ಸ್ವೀಕರಿಸಿದ್ದು, ಹೊಸದಾಗಿ ಯಾರಿಗೂ ಪರವಾನಗಿ ನೀಡಿಲ್ಲ. ಈಚೆಗೆ ಒಬ್ಬರು ಕಟ್ಟಡ ನಿರ್ಮಿಸುತ್ತಿರುವುದು ಗಮನಕ್ಕೆ ಬಂದಾಗ ತೆರವುಗೊಳಿಸಲಾಯಿತು. ಈ ಕೂಡಲೇ
ಪುರಾತತ್ವ ಇಲಾಖೆಗೆ ಪ್ರತಿಕ್ರಿಯಿಸುತ್ತೇನೆ. 
 ರಮೇಶ ನಾಯಕ, ನಗರಸಭೆ ಪೌರಾಯುಕ

ಸಿದ್ದಯ್ಯಸ್ವಾಮಿ ಕುಕನೂರು

ಟಾಪ್ ನ್ಯೂಸ್

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ಶ್ರೀ ಬಸವೇಶ್ವರ ಜಯಂತಿ ಆಚರಣೆ

Raichur; ಶ್ರೀ ಬಸವೇಶ್ವರ ಜಯಂತಿ ಆಚರಣೆ

Raichur; ಚುನಾವಣೆ ನಿರತ ಬಿಎಲ್‌ಒ ಸಾವು

Raichur; ಚುನಾವಣೆ ಕರ್ತವ್ಯನಿರತ ಬಿಎಲ್‌ಒ ಸಾವು

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

7-kmc-ramdas-pai-block

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿದೆ ನೂತನ ಡಾ|ರಾಮದಾಸ್‌ ಎಂ.ಪೈ ಬ್ಲಾಕ್‌

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

swati maliwal

AAP; ಸಂತ್ರಸ್ತೆಯಾದ ಸ್ವಾತಿ ಮಲಿವಾಲ್

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.