ಸಂಗೀತ-ಹಾಸ್ಯದ ಹೊನಲು ಹರಿಸಿ ರಂಜಿಸಿದ ಪನ್ವಿ ಕ್ರಿಯೇಷನ್ಸ್‌


Team Udayavani, Apr 3, 2018, 2:54 PM IST

0204mum02b.jpg

ತಮ್ಮಲ್ಲಿರುವ ಅಡಗಿರುವ  ಸ್ವಪ್ರತಿಭೆಯನ್ನು ನಿರಂತರ ಪ್ರಯತ್ನದ ಮೂಲಕ ಹೊರ ಜಗತ್ತಿಗೆ ತಿಳಿಯಪಡಿಸಿ  ಅದರಲ್ಲಿ  ಸೈ ಎನಿಸಿಕೊಂಡ ಹಲವಾರು ಪ್ರತಿಭೆಗಳನ್ನು ನಾವಿಂದು ಸಮಾಜದಲ್ಲಿ ಕಾಣಬಹುದು. ನಮ್ಮ ಕರಾವಳಿ ಕರ್ನಾಟಕದಿಂದ ಬಂದಂತಹ  ಹಲವಾರು ಪ್ರತಿಭಾನ್ವಿತರು ಇಂದು ಮುಂಬಯಿ ಪುಣೆ ಹಾಗು ಇತರೆ ನಗರಗಳಲ್ಲಿ ವಿವಿಧ ಕಲಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಮಿಂಚುತ್ತಿರುವುದು ಅಭಿಮಾನದ ಸಂಗತಿ. ಅದರಲ್ಲಿ ಮುಂಬಯಿ ಕಲಾ ಜಗತ್ತು ಇದರ ರೂವಾರಿ, ಅಮ್ಮ ಚಾವಡಿ ಇದರ   ಸಂಸ್ಥಾಪಕ, ಪತ್ತನಾಜೆ ಚಲನ ಚಿತ್ರ ನಿರ್ಮಾಪಕ ನಿರ್ದೇಶಕ ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರ ಗರಡಿಯಲ್ಲಿ ಪಳಗಿದ ಹಲಾವಾರು ಪ್ರತಿಭೆ  ಇಂದು ಮುಂಬಯಿ  ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಗಳಿಸಿರುವುದು ತುಳುನಾಡಿನ ಮಣ್ಣಿನ ಗುಣವನ್ನು ತೋರಿಸುತ್ತದೆ.

ಹರೀಶ್‌ ಶೆಟ್ಟಿ ಎರ್ಮಾಳ್‌ ಅವರು  ಇಂದು ಗಾಯನ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ತನ್ನದೇ ಅದ ಒಂದು ಕಲಾ ಸಂಸ್ಥೆಯನ್ನು ಹುಟ್ಟುಹಾಕಿ ಮುಂಬಯಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು  ನೀಡಿ  ಯಶಸ್ಸನ್ನು ಕಂಡು ಪ್ರಸ್ತುತ ಪುಣೆಯಲ್ಲಿ  ಶಾಖೆಯನ್ನು ತೆರೆಯುವ ಮುಲಕ  ಮಹಾರಾಷ್ಟ್ರದಾಂದ್ಯಂತ  ಕಲಾ ಸೇವೆಯ ಕಾಯಕವನ್ನು ಮಾಡಲು ಮುಂದಾಗಿ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಕಲಾ ಪ್ರೌಡಿಮೆಯನ್ನು ಪಡೆಯಬಹುದು ಎಂಬುವುದನ್ನು ಸಮಾಜಕ್ಕೆ  ತೋರಿಸಿಕೊಟ್ಟಿ¨ªಾರೆ.

ಇತ್ತೀಚೆಗೆ  ಪುಣೆಯ ಗಣೇಶ್‌ ನಗರದ ಕನ್ನಡ ಸಂಘದ  ಶಕುಂತಲಾ ಜಗನ್ನಾಥ ಸಭಾಗೃಹದಲ್ಲಿ ಪನ್ವಿ ಕ್ರಿಯೇಷನ್ಸ್‌ ಮುಂಬಯಿಯ  ಪುಣೆ ಶಾಖೆಯ  ಉದ್ಘಾಟನ ಸಮಾರಂಭವು ಜರಗಿತು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪನ್ವಿ ಕ್ರಿಯೇಷನ್ಸ್‌ ಇದರ ರೂವಾರಿ ಹರೀಶ್‌ ಶೆಟ್ಟಿ ಎರ್ಮಾಳ್‌  ಇವರ ಸಾರಥ್ಯದಲ್ಲಿ   ತಂಡದ ಪ್ರಬುದ್ಧ ಕಲಾವಿದರಿಂದ  ಸಂಗೀತ  ರಸ ಮಂಜರಿ ಹಾಗು ಪ್ರತಿಭಾವಂತ ಹಾಸ್ಯ ಕಲಾವಿದ ಉಮೇಶ್‌ ಹೆಗ್ಡೆ ಕಡ್ತಲ ಇವರ ನೇತೃತ್ವದಲ್ಲಿ ಮುಂಬಯಿ ಹಾಗು ಊರಿನ ಪ್ರಸಿದ್ದ ಕಲಾವಿದರಿಂದ  ರಾಗದ ರಸೊಕು ತೆಲಿಕೆದ ನೆಸಲ್‌ ಎಂಬ ಮನೋರಂಜನಾ ಕಾರ್ಯಕ್ರಮವು ಸೇರಿದ ಕಲಾಭಿಮಾನಿಗಳನ್ನು ಸುಮಧುರ ರಾಗದೊಂದಿಗೆ ನಕ್ಕು ನಗಿಸುವ ಹಾಸ್ಯದೊಂದಿಗೆ ಮನ ತಣಿಸಿ ಪ್ರಶಂಸೆಗೆ ಪಾತ್ರವಾಯಿತು.

ಪನ್ವಿ ಕ್ರಿಯೇಷನ್ಸ್‌ನ ರೂವಾರಿ ಗಾಯಕ ಹರೀಶ್‌ ಶೆಟ್ಟಿ ಇವರ ಸುಮಧುರ ಕಂಠದ ರಾಗದಿಂದ  ತುಳು,  ಕನ್ನಡ, ಹಿಂದಿಯ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡಿತು.  ಅಲ್ಲದೆ ಅವರ ತಂಡದ  ಸದಸ್ಯರು  ಮತ್ತು ಗಾಯನ ಕ್ಷೇತ್ರದಲ್ಲಿ ಹೆಸರು ಗಳಿಸಿದ  ಪ್ರತಿಭೆಗಳಾದ  ಸುಧೀರ್‌ ಶೆಟ್ಟಿ ಮತ್ತು ಶ್ರ¨ªಾ ಬಂಗೇರ ಇವರ ಕಂಠದಿಂದ ಹೊರ ಹೊಮ್ಮಿದ ಹಾಡುಗಳು ಪುಣೆಯ ತುಳು ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇವರಿಗೆ ಸಹಪಾಠಿಯಾಗಿ  ತಂಡದ ತಂಡದ ಇನ್ನೋರ್ವ ಸದಸ್ಯ ದೇವರಾಜ್‌ ಅವರು   ಹಾಡಿದ ಹಿಂದಿ ಗೀತೆಗಳು ಅತ್ಯಂತ ಮನಮೋಹಕವಾಗಿತ್ತು.

ಅಲ್ಲದೆ ಹಿನ್ನೆಲೆ  ವಾದ್ಯ ಸಂಗೀತದವರಿಂದ ಉತ್ತಮ ರೀತಿಯ   ಸಂಗೀತದ ಜುಗಲ್ಬಂದಿ ಕೂಡಾ ಈ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಶ್ರ¨ªಾ ಬಂಗೇರ ಇವರು ಚಿಣ್ಣರ ಬಿಂಬದ ಸದಸ್ಯೆಯಾಗಿ, ವಿಜಯ ಕುಮಾರ್‌ ಶೆಟ್ಟಿ ಅವರ  ಶಿಷ್ಯೆಯಾಗಿ ಅವರ ಮಾರ್ಗದರ್ಶನದಲ್ಲಿ ಬೆಳೆದು ಇಂದು ಗಾಯನದಲ್ಲಿ   ಸುಂದರ ಸ್ವರ ಮಾದುರ್ಯದಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದವರು. ವಿಜಯ ಕುಮಾರ್‌ ಶೆಟ್ಟಿಯವರು ಇವರ ಪ್ರತಿಭೆಯನ್ನು ಮೆಚ್ಚಿ ತನ್ನ ಮುಂದಿನ ತುಳು  ಚಿತ್ರದಲ್ಲಿ ಗಾಯಕರಾಗಿ ಇವರಿಗೆ ಅವಕಾಶವನ್ನು ಕೊಡುತ್ತೇನೆ ಎಂದು ಈ ಸಮಾರಂಭದಲ್ಲಿ ಹೇಳಿರುವುದು ಪನ್ವಿ ಕ್ರಿಯೇಶನ್ಸ್‌  ಕಾರ್ಯಕ್ರಮಗಳು ಹೇಗಿದ್ದವು ಎಂಬುದಕ್ಕೆ ಸಾಕ್ಷಿಯಾಗಿದೆ.

ರಾಗದ ರಸೋಕು ತೆಲಿಕೆದ ನೆಸಲ್‌ ಎಂಬ ಹೆಸರಿಗೆ ತಕ್ಕಂತೆ ಗಾಯನ ಮತ್ತು ಹಾಸ್ಯದ ಮಿಶ್ರಣದ ಈ ಕಾರ್ಯಕ್ರಮದಲ್ಲಿ ಉಮೇಶ್‌ ಹೆಗ್ಡೆ ಕಡ್ತಲ  ಮತ್ತು ಕಿಶೋರ್‌ ಶೆಟ್ಟಿ ಪಿಲಾರ್‌, ಮದುಸೂಧನ್‌ ಶೆಟ್ಟಿ ಮಾಣಿಬೆಟ್ಟು ಮತ್ತು ಪುಣೆಯ ಯಕ್ಷಗಾನ ಮತ್ತು  ನಾಟಕ ರಂಗದಲ್ಲಿ  ಹಾಸ್ಯ ಪಾತ್ರದಾರಿಯಾಗಿ ಈಗಾಗಲೇ ಹೆಸರು ಗಳಿಸಿರುವ ಸುಧೀರ್‌  ಶೆಟ್ಟಿ ಕುಕ್ಕುಂದುರು ಇವರ ಜೋಡಿಯ ಹಾಸ್ಯದ ತುಣುಕುಗಳು ಕಲಾ ರಸಿಕರನ್ನು ರಂಜಿಸಿತು.  ಉತ್ತಮ ನಟನೆಯೊಂದಿಗೆ ನಗೆಯ ಹಬ್ಬದ ಪಂಚ್‌ಗಳನ್ನು ನೀಡಿ ಸಮಾಜಕ್ಕೆ ಬೇಕಾಗುವ ಕಥಾ ಹಂದರದೊಂದಿಗೆ ಉತ್ತಮ ಸಂದೇಶವನ್ನು ನೀಡುವಂತಹ ಇವರ ಹಾಸ್ಯದ ಮೋಡಿ, ಮನಸ್ಸಿನ ದು:ಖ-ದುಮ್ಮಾನವನ್ನು ದೂರ ಮಾಡಿ ಉಲ್ಲಾಸವನ್ನು ನೀಡುವಂತೆ ಮಾಡಿತು.

ಈ ಕಾರ್ಯಕ್ರಮದಿಂದ ಹರೀಶ್‌ ಶೆಟ್ಟಿ ಎರ್ಮಾಳ್‌ ಮತ್ತು ತಂಡದವರ ಪ್ರತಿಭೆಯು ಪುಣೆಯ ತುಳು-ಕನ್ನಡಿಗರಿಗೆ ಅರಿಯಲು ಸಹಕಾರಿಯಾಯಿತು. ಅಲ್ಲದೆ ಪುಣೆಯಲ್ಲಿ ಸಂಘ ಸಂಸ್ಥೆಗಳು, ತುಳು-ಕನ್ನಡಿಗರು  ಇವರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲೆಗೆ ಮತ್ತು ಪನ್ವಿ ಕ್ರಿಯೇಷನ್ಸ್‌ಗೆ ಸಂಸ್ಥೆಗೆ  ಪ್ರೋತ್ಸಾಹ ನೀಡಬೇಕು. ಸಂಸ್ಥೆಯು ಉತ್ತಮ ಕಾರ್ಯಕ್ರಮಗಳೊಂದಿಗೆ ನೂತನ  ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂಬುವುದೇ ನಮ್ಮ ಆಶಯ.

ಹರೀಶ್‌ ಮೂಡಬಿದ್ರೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.