ಮಲಯಾಳಂ ಕಡೆ ವಿಜಯ್‌ ಸಂಚಾರ


Team Udayavani, Apr 19, 2018, 6:10 PM IST

sanchari-vijay.jpg

ಸಂಚಾರಿ ವಿಜಯ್‌ ಈಗ ಮಲಯಾಳಂ ಕಡೆ ಮುಖ ಮಾಡಿದ್ದಾರೆ. ಕನ್ನಡದಲ್ಲೇ ಭರಪೂರ ಅವಕಾಶಗಳಿದ್ದಾಗ, ಅತ್ತ ಹೋಗಿದ್ದೇಕೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಸಂಚಾರಿ ವಿಜಯ್‌ಗೂ ಪ್ರಯೋಗಾತ್ಮಕ ಸಿನಿಮಾಗಳಿಗೂ ಅವಿನಾಭಾವ ಸಂಬಂಧ. ಈ ವರ್ಷ ಅವರದೇ ಒಂದು ಚಿತ್ರೋತ್ಸವ ನಡೆಸುವಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಹೀಗಿರುವಾಗ, ಅವರೀಗ ಸದ್ದಿಲ್ಲದೆಯೇ ಮಲಯಾಳಂನ “ಥಿಯೇಟರ್‌’ ಹೆಸರಿನ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಮೊದಲ ಹಂತ ಮುಗಿಸಿಕೊಂಡು ಬಂದಿರುವ ಸಂಚಾರಿ ವಿಜಯ್‌, ಇನ್ನೊಂದು ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ.

ಸರುಣ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮತ್ತೂಂದು ಪ್ರಯೋಗಾತ್ಮಕ ಚಿತ್ರವಿದು. ಮಧು ಹಂಬಟ್‌ ಚಿತ್ರಕ್ಕೆ ಛಾಯಗ್ರಹಣವಿದೆ. ತಾಂತ್ರಿಕ ವಿಚಾರದಲ್ಲಿ ಸಿನಿಮಾ ಅದ್ಧೂರಿಯಾಗಿದೆ ಎನ್ನುವ ವಿಜಯ್‌, “ಥಿಯೇಟರ್‌’ ಹೇಗೆ ವಿಭಿನ್ನ ಎಂಬುದನ್ನು ವಿವರಿಸುವುದು ಹೀಗೆ. “ಸ್ಟೇಜ್‌ ಮೇಲೆ ಮಾಡುವ ಯಥಾವತ್‌ ಪ್ರಯೋಗವನ್ನೇ, ಕ್ಯಾಮೆರಾ ಮುಂದೆ ನಿಂತು ಒಂದೇ ಜಾಗದಲ್ಲಿ ದೊಡ್ಡ ದೃಶ್ಯಗಳನ್ನು ಚಿತ್ರೀಕರಿಸಿರುವುದು ವಿಶೇಷ. ಅದೊಂದು ಮರೆಯದ ಅನುಭವ. ಆ ಚಿತ್ರದಲ್ಲಿ ನಾನು ಪೊಲೀಸ್‌ ತನಿಖಾಧಿಕಾರಿ ಪಾತ್ರ ಮಾಡುತ್ತಿದ್ದೇನೆ. ಗ್ಯಾಂಗ್‌ ರೇಪ್‌, ಚೀಟಿಂಗ್‌ ಮಾಡುವರನ್ನು ಹಿಡಿದು ಸದೆ ಬಡಿಯುವುದು, ಇದರೊಂದಿಗೆ ಸೂಕ್ಷ್ಮ ಅಂಶಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. 

ಆ ಪೊಲೀಸ್‌ ಅಧಿಕಾರಿ, ಒಮ್ಮೆ ವೇಶ್ಯೆಯೊಬ್ಬಳನ್ನು ಭೇಟಿ ಮಾಡಿ, ನೀನೇಕೆ ಈ ವೃತ್ತಿಯಲ್ಲಿದ್ದೀಯ ಅಂದಾಗ, ಆಕೆ, ತಂದೆಯಿಂದ ಅತ್ಯಾಚಾರಕ್ಕೊಳಗಾಗಿದ್ದು, ನಂತರ ಗಂಡನಿಂದಲೂ ಅತ್ಯಾಚಾರವಾಗಿದ್ದು, ಸ್ನೇಹಿತರಿಂದ ಸಹ ಅದೇ ತಪ್ಪು ನಡೆದಿದ್ದರಿಂದ, ಅದಕ್ಕೆ ಹೊಂದಿಕೊಂಡು, ವೇಶ್ಯೆಯಾದ ಬಗ್ಗೆ ವಿವರಿಸುತ್ತಾಳೆ. ಅದರ ಹಿಂದಿನ ಘಟನೆ ಬೆನ್ನತ್ತುವ ಪಾತ್ರವದು. ಇಡೀ ಸಿನಿಮಾ ಒಂದೇ ಬೀಚ್‌ನ ಜಾಗದಲ್ಲಿ ನಡೆದುಹೋಗುತ್ತದೆ’ ಎಂದು ಹೇಳುತ್ತಾರೆ ವಿಜಯ್‌.

“ಮಲಯಾಳಂ ನಟ ಮನೋಜ್‌ ಅವರು ಯಕ್ಷಗಾನ ಕಲೆಯಲ್ಲಿ ನಿಪುಣ. ಅಂತಹ ಕಲೆಯಲ್ಲಿರುವ ದೈವಕಲೆ ಬಗ್ಗೆ ಸಂಶೋಧನೆ ಮಾಡಲು ವಿದೇಶದಿಂದ ಒಬ್ಟಾಕೆ ಬರುತ್ತಾಳೆ. ಅವಳ ಮೇಲೆ ಆತ ಅತ್ಯಾಚಾರ ಎಸಗುತ್ತಾನೆ. ಅಲ್ಲಿಂದ ಶುರುವಾಗುವ ತನಿಖೆ ಚಿತ್ರದ ಕುತೂಹಲ ಕೆರಳಿಸುತ್ತೆ. ಇದುವರೆಗೆ ಹದಿನೆಂಟು ದಿನಗಳ ಕಾಲ ಚಿತ್ರೀಕರಣವಾಗಿದ್ದು, ಇನ್ನು ಏಳು ದಿನಗಳ ಚಿತ್ರೀಕರಣವಾದರೆ ಚಿತ್ರ ಮುಗಿಯಲಿದೆ. ಮಲಯಾಳಂನಲ್ಲೇ ಸಂಭಾಷಣೆ ಹೇಳಿದ್ದೇನೆ.

 ಅಲ್ಲಿನ ಸಹಾಯಕ ನಿರ್ದೇಶಕರು ಹೇಳಿಕೊಟ್ಟಿದ್ದರಿಂದ ಸುಲಭವಾಯಿತು. ನಾನೊಬ್ಬ ನಟ. ಕಲೆಗೆ ಭಾಷೆಯ ಗಡಿ ಇಲ್ಲ. ಹಾಗಾಗಿ ಮಲಯಾಳಂ ಚಿತ್ರದಲ್ಲಿ ನಟಿಸಿದ್ದೇನೆ. ಇಲ್ಲೇ ಬಿಜಿ ಇದ್ದೇನೆ. ಹಾಗೆ ನೋಡಿದರೆ, ಈ ವರ್ಷ ಆರು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಈಗಾಗಲೇ “ವರ್ತಮಾನ’ ರಿಲೀಸ್‌ ಆಗಿದೆ. ಕೈಯಲ್ಲಿ “ಕೃಷ್ಣ ತುಳಸಿ’, “ಆರನೇ ಮೈಲಿ’, “ಪಾದರಸ’, “ಆಡುವ ಗೊಂಬೆ’, “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಮತ್ತು “ಮೇಲೊಬ್ಬ ಮಾಯಾವಿ’ ಚಿತ್ರಗಳಿವೆ. ಎಲ್ಲವೂ ಈ ವರ್ಷ ತೆರೆಗೆ ಬಂದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಅವರು.

ಟಾಪ್ ನ್ಯೂಸ್

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

18-

UV Fusion: ತೇರು ಬೀದಿಗೆ ಬಂದಿದೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.