ಕೃಷಿ ಸಂಸ್ಕೃತಿ


Team Udayavani, Apr 22, 2018, 6:00 AM IST

Krishi-Thapanda.jpg

ಬಿಗ್‌ ಬಾಸ್‌’ಗೆ ಹೋಗಿ ಬಂದವರಿಗೆ ಸಿನೆಮಾ ರಂಗದಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತವೆ, ಮುಂದೆ ಬಿಝಿಯಾಗುತ್ತಾರೆಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಕೃಷಿ ತಾಪಂಡ ಎಂಬ ನಟಿ “ಬಿಗ್‌ಬಾಸ್‌ ಸೀಸನ್‌-5′ ನಿಂದ ಬಂದು ಮೂರ್‍ನಾಲ್ಕು ತಿಂಗಳು ಕಳೆದರೂ ಆಕೆಯ ಕಡೆಯಿಂದ ಯಾವುದೇ ಹೊಸ ಸಿನೆಮಾದ ಸುದ್ದಿ ಇರಲಿಲ್ಲ. ಈಗ ಕೃಷಿ ಹೊಸ ಸಿನೆಮಾವೊಂದನ್ನು ಒಪ್ಪಿಕೊಂಡಿದ್ದಾರೆ. 

ಅದು ರೂಪಾಯಿ. ಇದು ಸಂಪೂರ್ಣ ಹೊಸಬರ ಸಿನೆಮಾ. ಎಲ್ಲಾ ಓಕೆ, ಇಷ್ಟು ದಿನ ಕೃಷಿಗೆ ಅವಕಾಶ ಬರಲಿಲ್ಲವೇ ಎಂದು ನೀವು ಕೇಳಬಹುದು. ಕೃಷಿ ಹೇಳುವಂತೆ ಅವರಿಗೆ ಸಾಕಷ್ಟು ಅವಕಾಶ ಬಂದಿತ್ತು. ಆದರೆ, ಕಾರಣಾಂತರಗಳಿಂದ ಒಪ್ಪಲಿಲ್ಲವಂತೆ.

“”ಬಿಗ್‌ ಬಾಸ್‌ನಿಂದ ಬಂದ ನಂತರ ನನಗೆ 20ಕ್ಕೂ ಹೆಚ್ಚು ಅವಕಾಶಗಳು ಬಂದುವು. ಆದರೆ, ಕಾರಣಾಂತರಗಳಿಂದ ನಾನೇ ಯಾವುದೇ ಸಿನೆಮಾಗಳನ್ನು ಒಪ್ಪಲಿಲ್ಲ. ಹೊಸಬರ ರೂಪಾಯಿ ಕಥೆ ಕೇಳಿದೆ. ಹೊಸದಾಗಿತ್ತು, ನನ್ನ ಪಾತ್ರ ಕೂಡಾ ವಿಭಿನ್ನವಾಗಿರುವುದರಿಂದ ಒಪ್ಪಿಕೊಂಡೆ” ಎನ್ನುತ್ತಾರೆ. ಇದೇ ವೇಳೆ ಕೃಷಿ ಒಂದು ಮಾತು ಹೇಳಲು ಮರೆಯೋದಿಲ್ಲ. “”ಬಿಗ್‌ಬಾಸ್‌ಗೆ ಹೋಗಿ ಬಂದ ಕೂಡಲೇ ಸಿಕ್ಕಾಪಟ್ಟೆ ಅವಕಾಶ ಸಿಗುತ್ತದೆ, ಸ್ಟಾರ್‌ ಆಗುತ್ತಾರೆಂಬುದನ್ನು ನಾನು ನಂಬೋದಿಲ್ಲ. ಆದರೆ, ಹೊರಜಗತ್ತಿಗೆ ನಿಮ್ಮ ಬಗ್ಗೆ ಗೊತ್ತಾಗಲು, ನಿಮ್ಮ ಟ್ಯಾಲೆಂಟ್‌ ಪ್ರದರ್ಶಿಸಲು ಅದೊಂದು ಒಳ್ಳೆಯ ವೇದಿಕೆಯಂತೂ ಹೌದು. ಈ ಹಿಂದೆ ನಾನು ಹೊರಗಡೆ ಹೋದಾಗ ಕೆಲವೇ ಕೆಲವರು ಗುರುತಿಸುತ್ತಿದ್ದರು. ಆದರೆ, ಈಗ ಸಾವಿರಾರು ಜನ ಗುರುತಿಸುತ್ತಿದ್ದಾರೆ. ಚಿತ್ರರಂಗದ ಮಂದಿಗೂ ಕೃಷಿ ಅಂದರೆ ಯಾರು ಎಂಬುದು ಗೊತ್ತಾಗಿದೆ. ಅದೊಂದು ಒಳ್ಳೆಯ ವೇದಿಕೆ. ಅದನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ” ಎನ್ನುತ್ತಾರೆ. 

ಸದ್ಯ ರೂಪಾಯಿ ಚಿತ್ರದಲ್ಲಿರುವ ಕೃಷಿ, ಈ ಚಿತ್ರದಲ್ಲಿ ಸ್ಟಂಟ್ಸ್‌ ಕೂಡ ಮಾಡುತ್ತಾರಂತೆ. ಅದಕ್ಕಾಗಿ ತರಬೇತಿ ಪಡೆಯುತ್ತಿದ್ದಾರಂತೆ. ಇದಲ್ಲದೇ, ಕೃಷಿ ನಟಿಸಿರುವ, ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ. ಅಲ್ಪ ವಿರಾಮ ಎಂಬ ಸಿನೆಮಾವೊಂದರಲ್ಲೂ ಕೃಷಿ ನಟಿಸಿದ್ದು, ಐದು ಶೇಡ್‌ನ‌ ಪಾತ್ರ ಸಿಕ್ಕಿದೆಯಂತೆ. ಈ ನಡುವೆಯೇ ಕೃಷಿ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ವೆಬ್‌ ಸಿರೀಸ್‌. ಕೆನಡಾದ ವೆಬ್‌ ಸಿರೀಸ್‌ವೊಂದರಲ್ಲಿ ಕೃಷಿ ನಟಿಸಲಿದ್ದು, ಇಲ್ಲಿ ಅವರು ಸೇನಾನಿ ಯಂತೆ. ಡಿಸೆಂಬರ್‌ನಿಂದ ಚಿತ್ರೀಕರಣ ಆರಂಭ ವಾಗಲಿದ್ದು, ಮೂರು ತಿಂಗಳುಗಳ ಕಾಲ ಕೃಷಿ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ. 

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.