ಹಾಕಿ ಶಿಬಿರಕ್ಕೆ 55 ಸಂಭಾವ್ಯ ಆಟಗಾರರು
Team Udayavani, Apr 27, 2018, 7:05 AM IST
ಬೆಂಗಳೂರು: ಮಾಜಿ ನಾಯಕ ಸರ್ದಾರ್ ಸಿಂಗ್ ಸಹಿತ 55 ಸಂಭಾವ್ಯ ಆಟಗಾರರನ್ನು ಹಾಕಿ ಇಂಡಿಯಾ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ ಮಾಡಿದೆ. ಶಿಬಿರವು ಶುಕ್ರವಾರದಿಂದ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ನಡೆಯಲಿದೆ.
ಕಾಮನ್ವೆಲ್ತ್ ಗೇಮ್ಸ್ಗಾಗಿ ಆಯ್ಕೆ ಮಾಡಲಾಗಿದ್ದ ಮನ್ಪ್ರೀತ್ ಸಿಂಗ್ ನೇತೃತ್ವದ 18 ಸದಸ್ಯರ ತಂಡದಿಂದ ಕೈಬಿಡಲಾಗಿದ್ದ ಸರ್ದಾರ್ ಅವರನ್ನು ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಮೇ 18ರಂದು ಶಿಬಿರ ಅಂತ್ಯಗೊಂಡ ಬಳಿಕ ಈ ಸಂಖ್ಯೆಯನ್ನು 48ಕ್ಕೆ ಇಳಿಸಲಾಗುವುದು.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗವಹಿಸಿದ ಎಲ್ಲ 18 ಮಂದಿಯೂ ಈ ಸಂಭಾವ್ಯರ ಪಟ್ಟಿಯಲ್ಲಿ ಸೇರಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನ ಕಂಚಿಗಾಗಿ ನಡೆದ ಪಂದ್ಯದಲ್ಲಿ ಭಾರತವು ಇಂಗ್ಲೆಂಡಿಗೆ 1-2ರಿಂದ ಶರಣಾಗಿ ನಾಲ್ಕನೇ ಸ್ಥಾನ ಪಡೆದಿತ್ತು.
ಫಾರ್ವರ್ಡ್ ಆಟಗಾರ ರಮಣ್ದೀಪ್ ಸಿಂಗ್, ಡಿಫೆಂಡರ್ಗಳಾದ ಸುರೇಂದರ್ ಕುಮಾರ್, ಬಿರೇಂದರ್ ಲಾಕ್ರ, ದಿಪ್ಸನ್ ತಿರ್ಕೆ ಮತ್ತು ಸಂಜೀಬ್ ಕ್ಸೆಸ್ ಅವರು 55 ಸದಸ್ಯರ ತಂಡದಲ್ಲಿ ಸೇರಿದ್ದಾರೆ. ದೇಶೀಯ ಸರ್ಕ್ನೂಟ್ನಲ್ಲಿ ಆಡುತ್ತಿರುವ ಆಟಗಾರರೂ ಈ ಪಟ್ಟಿಯಲ್ಲಿದ್ದಾರೆ.
ಸುಧಾರಣೆ ತರಬೇಕಾಗಿದೆ
ಕಾಮನ್ವೆಲ್ತ್ ಗೇಮ್ಸ್ನಲ್ಲಿ ನಾವು ನಿರೀಕ್ಷಿಸಿದ ಫಲಿತಾಂಶ ಬಂದಿಲ್ಲ ಆದರೆ ಅಲ್ಲಿ ಕಲಿತ ಪಾಠಗಳನ್ನು ಭವಿಷ್ಯದ ಸಿದ್ಧತೆಗಳ ವೇಳೆ ಬಳಸಿಕೊಳ್ಳಲಾಗುವುದು. ಆಟವಾಡುವ ರಚನೆ ಬಗ್ಗೆ ತಂಡ ಮತ್ತು ತರಬೇತಿ ಸಿಬಂದಿಗಳಲ್ಲಿ ಆತ್ಮವಿಶ್ವಾಸವಿದೆ ಮತ್ತು ಕೆಲವೊಂದು ವಿಷಯಗಳಲ್ಲಿ ನಾವು ನಮ್ಮ ಆಟದಲ್ಲಿ ಸುಧಾರಣೆ ತರಬೇಕಾಗಿದೆ ಎಂದು ಮುಖ್ಯ ಕೋಚ್ ಜೋರ್ಡ್ ಮರಿಜ್ನೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ
Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ
CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ
RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು
Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?
MUST WATCH
ಹೊಸ ಸೇರ್ಪಡೆ
Ajekar;ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು
IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ
Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ
Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು
Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ