ಹೈ ವೋಲ್ಟೇಜ್ ಫಲಿತಾಂಶ
Team Udayavani, May 15, 2018, 6:25 AM IST
ಉಡುಪಿ: ಮತದಾರ ಕನಸು ಕಾಣುತ್ತಿದ್ದ. ಕನಸಿನಲ್ಲಿ ಕೆಲವರು ಸಂಭ್ರಮಿಸಿದ್ದೂ ಆಗಿರಬಹುದು. ಇನ್ನು ಕೆಲವರು ಬೇಸರಪಟ್ಟು, ಎದ್ದಾಗ ಖುಷಿ ಪಟ್ಟದ್ದೂ ಇರಬಹುದು. ಮಂಗಳವಾರದ ಚುನಾವಣಾ ಫಲಿತಾಂಶ ಒಮ್ಮೆ ಸಿಕ್ಕಿ ಬಿಡಲಿ ಎಂದು ಮತದಾರ ತುದಿಗಾಲಲ್ಲಿ ನಿಂತುಕೊಂಡು ಕಾಯುತ್ತಿದ್ದಾನೆ, ಕಾರ್ಯಕರ್ತನಿಗೆ ಇನ್ನಷ್ಟು ಉತ್ಸಾಹ. ಮೇ 15ರ ಮಧ್ಯಾಹ್ನದ ಹೊತ್ತಿಗೆ ಉಡುಪಿ ಜಿಲ್ಲೆಯ ರಾಜಕೀಯ ಚಿತ್ರಣ ಹೊಸ ತಿರುವು ಪಡೆಯಲಿದೆ.
ಸೋಮವಾರದವರೆಗೆ ಕ್ಷೇತ್ರ, ಗ್ರಾಮ ಮಟ್ಟದಲ್ಲಿ ನಡೆಯುತ್ತಿದ್ದ ರಾಜಕೀಯ, ಉತ್ಸಾಹಗಳು ಮಂಗಳವಾರ ಒಮ್ಮೆಲೆ ಉಡುಪಿಗೆ ಸ್ಥಳಾಂತರಗೊಳ್ಳಲಿದೆ. ಐದೂ ಕ್ಷೇತ್ರಗಳ ಕಾರ್ಯಕರ್ತರ ಕಣ್ಣು ಮತ ಎಣಿಕೆ ಕೇಂದ್ರವಾದ ಉಡುಪಿಯ ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಶಾಲೆಯ ಆವರಣದತ್ತ ನೆಟ್ಟಿದೆ. ಅದೇ ರೀತಿ ಮಂಗಳವಾರ ಮಧ್ಯಾಹ್ನವಾದ ಕೂಡಲೇ ಇದು ಮತ್ತೆ ಕ್ಷೇತ್ರ, ಗ್ರಾಮ ಮಟ್ಟಕ್ಕೆ ಸ್ಥಳಾಂತರಗೊಳ್ಳಲಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಯು “ಹೈ ವೋಲ್ಟೆàಜ್’ ಕದನವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇದೊಂದು ಪ್ರತಿಷ್ಠೆಯ ಕಣವಾಗಿದೆ. ದಕ್ಷಿಣದ ಏಕೈಕ ರಾಜ್ಯದಲ್ಲಿರುವ ಕಾಂಗ್ರೆಸ್ ಆಡಳಿತವನ್ನು ಧೂಳಿಪಟ ಮಾಡಲು ಬಿಜೆಪಿ ರಾಜ್ಯ, ರಾಷ್ಟ್ರೀಯ ನಾಯಕರು ಧೂಳೆಬ್ಬಿಸಿ ಹರಸಾಹಸ ಪಟ್ಟಿದ್ದಾರೆ. ಹಾಗೆಯೇ ಕಾಂಗ್ರೆಸ್ಸನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಕಾಂಗ್ರೆಸ್ನ ರಾಜ್ಯ, ರಾಷ್ಟ್ರ ನಾಯಕರು ಶತಾಯಗತಾಯ ಹೋರಾಟವನ್ನು ನಡೆಸಿದ್ದಾರೆ.
ಚಿತ್ರಣ ಅದಲು-ಬದಲು?
ಉಡುಪಿ ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಹಿಂದೆ ಇದ್ದ ಚಿತ್ರಣಕ್ಕೂ, ಆಮೇಲಿನ ದಿನಗಳಲ್ಲಿ ಮೂಡಿದ್ದ ಚಿತ್ರಣಕ್ಕೂ ಬಹಳ ವ್ಯತ್ಯಾಸ ಕಂಡುಬಂದಿದೆ. ಮೊದಲಿಗೆ ಈ ಕ್ಷೇತ್ರದಲ್ಲಿ ನಾವು ಬಂದೇ ಬರುತ್ತೇವೆಂದು ಚಾಲೆಂಜ್ ಮಾಡಿದವರು ಸಹ ಪ್ರಚಾರದ ಕೊನೆಯ ದಿನಗಳಲ್ಲಿ ಸಪ್ಪೆ ಮೋರೆ ಮಾಡಿಕೊಂಡಿದ್ದನ್ನು ಕಾರ್ಯಕರ್ತರೇ ಗಮನಿಸಿದ್ದಾರೆ. ಹಲವು ಉಚ್ಚ ಮಟ್ಟದ ನಾಯಕರ ಪ್ರಭಾವ ಇಲ್ಲಿ ಕೆಲಸ ಮಾಡಿದಂತಿದೆ.
ಜಿಲ್ಲೆಯಲ್ಲಿ ಕ್ಲೀನ್ ಸ್ವೀಪ್?
ಮೂಲಗಳ ಪ್ರಕಾರ ಜಿಲ್ಲೆಯ 5 ಕ್ಷೇತ್ರಗಳನ್ನು ಒಂದು ಪಕ್ಷ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿಯ ವಾತಾವರಣವೂ ಕೊನೆ ಕ್ಷಣದಲ್ಲಿ ಕಂಡುಬಂದಿದೆಯಾದರೂ ಅದು ಅಷ್ಟು ಸುಲಭದ ಮಾತಲ್ಲ. ಒಂದೆರಡು ಕ್ಷೇತ್ರದಲ್ಲಿ ಪಕ್ಕಾ ಹೇಳಲಾಗದು. ಕೆಲವು ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರಗಳೇ ತಲೆಕೆಳಗಾಗಲಿದೆ. ನಿಂತ ಅಭ್ಯರ್ಥಿಯ ಜಾತಿಯ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿದ್ದರೂ, ಆತ ಸೋತ ಉದಾಹರಣೆ ಬಹಳಷ್ಟಿದೆ. ಜಾತಿ ಮೀರಿ ಹಿಂದುತ್ವ ,ರಾಷ್ಟ್ರೀಯತೆ ಎಂದೆಲ್ಲ ಮತ ವಿಭಜನೆಗೊಂಡರೆ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಆದಂತೆ ಮತ ಸುನಾಮಿ ಎದ್ದರೂ ಆಶ್ಚರ್ಯಪಡಬೇಕಿಲ್ಲ. ಒಟ್ಟಾರೆಯಾಗಿ ಮಂಗಳವಾರ ಎಲ್ಲರ ಎದೆಬಡಿತ ಏರುಪೇರಾಗಲಿರುವುದಂತು ಗ್ಯಾರಂಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ