ಉಡುಪಿ: ಬಿಜೆಪಿಯ ಕೈ ಹಿಡಿದದ್ದು ಹೊಸ ಮತದಾರರು?


Team Udayavani, May 17, 2018, 11:55 AM IST

hosa-matadara.jpg

ಉಡುಪಿ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ “ಸ್ವೀಪ್‌’ ಮಾಡಿದ ಕೀರ್ತಿ ಬಿಜೆಪಿಗೆ. ಮೋದಿ ಅಲೆ ಮತ್ತು “ಹಿಂದುತ್ವ’ ಫ್ಯಾಕ್ಟರ್‌ ಅಂಶಗಳು ಬಿಜೆಪಿಯನ್ನು ಕೈ ಹಿಡಿದಿರ ಬಹುದು. ಆದರೆ ಹೊಸ ಮತದಾರರು ಮೋದಿ ಅಲೆಗೆ ತಲೆದೂಗಿದರೇ?

ಇಂಥದೊಂದು ವ್ಯಾಖ್ಯಾನ ಕೇಳಿ ಬಂದಿರು ವುದು ಉಡುಪಿ ಜಿಲ್ಲೆಯ ಕ್ಷೇತ್ರಗಳಲ್ಲಿ. ಪ್ರಧಾನಿ ಮೋದಿ ಉಡುಪಿಗೆ ಬಂದ ಬಳಿಕ ಆಲೆಯ ತೀವ್ರತೆ ಹೆಚ್ಚಿತ್ತು. 2013ಕ್ಕಿಂತ ಈ ಬಾರಿ ಸರಾಸರಿ ಒಂದು ಕ್ಷೇತ್ರಕ್ಕೆ 20 ಸಾವಿರದಂತೆ ಐದೂ ಕ್ಷೇತ್ರಗಳಲ್ಲಿ 1 ಲಕ್ಷ ಹೊಸ ಮತದಾರರಿದ್ದರು. ಇವರಲ್ಲಿ ಬಹುತೇಕರು ಮೋದಿಯನ್ನು ಮೆಚ್ಚಿ ಕೊಂಡಂತಿದೆ. ಮೋದಿಯವರಿಗೂ ಈ ಅಂಶ  ಬಹುಶಃ ಗೊತ್ತಿತ್ತು. ಯಾಕೆಂದರೆ, ಅವರೂ ತಮ್ಮ ಭಾಷಣದಲ್ಲಿ ಕಾಮನ್‌ ವೆಲ್ತ್‌ ಬೆಳ್ಳಿ ಪದಕ ವಿಜೇತ ಗುರುರಾಜ್‌ ಅವರ ಬಗ್ಗೆ ಎರಡೆರಡು ಬಾರಿ ಪ್ರಸ್ತಾಪಿಸಿ ಅಭಿನಂದಿಸಿದ್ದರು. ಇಲ್ಲಿನ (ಕರಾವಳಿಯ) ಯುವಜನರೆಲ್ಲಾ ಬಹಳ ವಿದ್ಯಾವಂತರು, ಬುದ್ಧಿವಂತರು, ಪರಿಶ್ರಮಿಗಳು ಎಂದು ಹೊಗಳಿದ್ದರು.

ಸ್ವಾವಲಂಬನೆಯ ಆಸಕ್ತಿ ಉಳ್ಳ ನಿಮ್ಮಂಥವರಿಗೇ ಸಹಾಯ ಮಾಡಲು ಮುದ್ರಾ ಯೋಜನೆ ತಂದಿದ್ದಾಗಿಯೂ ಹೇಳಿದ್ದರು. ಸ್ಥಳೀಯ ಯುವಜನರು ಹೊರಗೆಲ್ಲೋ ಹೋಗಿ ದುಡಿಯುವುದಕ್ಕಿಂತ ಇಲ್ಲಿಯೇ ಉದ್ಯೋಗ ಸೃಷ್ಟಿ ಯಾಗಬೇಕು ಎಂದಿದ್ದರು. ಇವೆಲ್ಲವೂ ಯುವಜನರ ಮೇಲೆ ಪ್ರಭಾವ ಬೀರಲು ಮಾಡಿದ ಪ್ರಯತ್ನ. ಇವೆಲ್ಲವೂ ಫ‌ಲ ಕೊಟ್ಟಂತಿದೆ.

ಮತ್ತಷ್ಟು ಅಂಶ
ಪ್ರಮೋದ್‌ ಮಧ್ವರಾಜ್‌ ಬಿಜೆಪಿಗೆ ಸೇರ್ಪಡೆ ಗೊಳ್ಳುತ್ತಾರೆಂಬ ಗುಮಾನಿ ಕಾಂಗ್ರೆಸ್‌ ಪಕ್ಷ ದೊಳಗಿನ ತಲ್ಲಣಕ್ಕೆ ಕಾರಣವಾಯಿತು. ಇದೂ ಸಹ ಬಿಜೆಪಿಗೆ ಅನುಕೂಲ ಕಲ್ಪಿಸಿತು. ಹಾಗೆಯೇ ಕಾಪುವಿನಲ್ಲಿ ಪಕ್ಷದೊಳಗಿದ್ದ ಕೆಲವು ಅಸಮಾ ಧಾನಗಳು ವಿನಯಕುಮಾರ ಸೊರಕೆಗೆ ಮುಳುವಾಯಿತು ಎನ್ನಲಾಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಕೆಲವು ನಾಯಕರ ಬಗೆಗೆ ಪಕ್ಷ ದೊಳಗೆ ಅಸಮಾಧಾನವಿತ್ತು ಎನ್ನಲಾಗುತ್ತಿದೆ. 

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿಯವರು ಗೆದ್ದೇ ಗೆಲ್ಲು ತ್ತೇವೆಂಬ ಹುಮ್ಮಸ್ಸು ಹೊಂದಿದ್ದರೂ ಅಲ್ಲಿ ಬಿಜೆಪಿ ಗೆಲ್ಲಲು ಮೋದಿ ಅಲೆ ಹಾಗೂ ಸುಕುಮಾರ ಶೆಟ್ಟಿಯವರ ಮೇಲಿದ್ದ ಅನುಕಂಪ ಎಂಬ ಅಭಿಪ್ರಾಯವಿದೆ. ಹೊನ್ನಾವರದಲ್ಲಿ ಪರೇಶ ಮೇಸ್ತರ ಸಾವು, ಈ ಕುರಿತು ಗಂಗೊಳ್ಳಿ ಮೊದ ಲಾದೆಡೆ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ಖಾರ್ವಿ ಸಮುದಾಯದವರ ಪಾಲ್ಗೊಳ್ಳುವಿಕೆ ಇಲ್ಲಿ ಪರಿಣಾಮ ಬೀರಿರುವಂತಿದೆ. 

ಇನ್ನು ಕುಂದಾಪುರ ಮತ್ತು ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಷ್ಟೊಂದು ಗೆಲ್ಲುವ ವಿಶ್ವಾಸ ಹೊಂದಿರಲಿಲ್ಲ. ಇದಕ್ಕೆ ಪೂರಕವಾಗಿ ಕುಂದಾ ಪುರದ ಕಾಂಗ್ರೆಸ್‌ ರಾಕೇಶ್‌ ಮಲ್ಲಿಯವರು ಹೊರಗಿನವರು ಎಂಬ ಅಪವಾದಕ್ಕೆ ಗುರಿ ಯಾದರು. ಕಾರ್ಕಳದಲ್ಲಿ ಅಭ್ಯರ್ಥಿ ಆಯ್ಕೆ ಯಲ್ಲಿ ಉಂಟಾದ ಗೊಂದಲ ಬಿಜೆಪಿಗೆ ವರದಾನ ವಾಯಿತು ಎಂಬ ವ್ಯಾಖ್ಯಾನ ಪ್ರಚಲಿತದಲ್ಲಿದೆ.

ಟಾಪ್ ನ್ಯೂಸ್

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.