ಯಾಂತ್ರಿಕ ಕಟಾವಿನ “ಸೋಯಾ’ ತಳಿ ಅಭಿವೃದ್ಧಿ!


Team Udayavani, May 26, 2018, 2:25 PM IST

gul-3.jpg

ಬೀದರ: ಕಾಲ ಬದಲಾದಂತೆ ಕೃಷಿಯಲ್ಲೂ ಬದಲಾವಣೆ ಕಂಡುಬರುತ್ತಿದೆ. ಪ್ರತಿ ಬೆಳೆಗಳ ರಾಶಿಗೆ ಎದುರಾಗುತ್ತಿದ್ದ
ಕಾರ್ಮಿಕರ ಕೊರತೆಯನ್ನು ಯಾಂತ್ರಿಕ ಕಟಾವು ನೀಗಿಸಿದ್ದರೂ ಸೋಯಾಬಿನ್‌ ಬೆಳೆಗಾರರಿಗೆ ಮಾತ್ರ ಈ ಸಮಸ್ಯೆ ತಪ್ಪಿರಲಿಲ್ಲ. ಆದರೆ, ಈಗ ಯಂತ್ರದಿಂದ ಕಟಾವು ಮಾಡಬಹುದಾದ ಸೋಯಾಬಿನ್‌ ನೂತನ ತಳಿಯನ್ನು ಜಿಲ್ಲೆಯಲ್ಲಿ ಪರಿಚಯಿಸಲಾಗಿದೆ.

ಸೋಯಾಬಿನ್‌ ಬಿತ್ತನೆ ಮಾಡಿ ಕಟಾವು ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಖುಷಿ ತಂದಿದ್ದು, ಹಲವು ವರ್ಷಗಳ ಆಶಯ ಈಡೇರಿದಂತಾಗಿದೆ. ಮಹಾರಾಷ್ಟ್ರದ ಅಕೋಲಾ ಡಾ.ಪಂಜಾಬ್‌ರಾವ್‌ ದೇಶಮುಖ ಕೃಷಿ ವಿಶ್ವವಿದ್ಯಾಲಯ ಎಂಎಸಿಎಸ್‌-162 ಈ ಹೊಸ ತಳಿಯನ್ನು ಕಂಡು ಹಿಡಿದಿದ್ದು, ಮಹಾರಾಷ್ಟ್ರದ ರೈತರು ನೂತನ ತಳಿ ಬೆಳೆದು ಯಂತ್ರದ ಮೂಲಕ ಕಟಾವು ಮಾಡುತ್ತಿದ್ದಾರೆ. ಈಗ ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಜನವಾಡಾ ಕೃಷಿ ವಿಜ್ಞಾನ ಕೇಂದ್ರವು ಹೊಸ ತಳಿಯನ್ನು ಕೆವಿಕೆ ಫಾರ್ಮ್‌ನಲ್ಲಿ ಪ್ರಯೋಗ ಮಾಡಿದ್ದು, ಯಶಸ್ಸು ಕಂಡಿದೆ.

ಗಡಿ ಜಿಲ್ಲೆ ಬೀದರನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಸೋಯಾಬಿನ್‌ ಬೆಳೆ ಬಿತ್ತಲಾಗುತ್ತದೆ. ಜೋಳ, ತೊಗರಿ ಕಣಜ ಎನಿಸಿಕೊಳ್ಳುತ್ತಿದ್ದ ಬೀದರನಲ್ಲಿ ಈಗ ಪಾರಂಪರಿಕ ಬೆಳೆಯನ್ನು ರೈತರು ಕೈ ಬಿಟ್ಟು ಮಳೆ ಅಭಾವದಲ್ಲೂ ಉತ್ತಮ ಫಸಲು ಕೊಡುವ ಸೋಯಾದತ್ತ ಮುಖ ಮಾಡಿದ್ದಾರೆ. ಜಿಲ್ಲೆಯ ಒಟ್ಟು 3.39 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಪೈಕಿ ಶೇ. 40ರಷ್ಟು ಅಂದರೆ 1.35 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಬೆಳೆ ಬಿತ್ತನೆ ಮಾಡಲಾಗುತ್ತದೆ.

ಆದರೆ, ಸೋಯಾಬಿನ್‌ ಬೆಳೆ ಕಟಾವಿಗೆ ಬರುತ್ತಿದ್ದಂತೆ ರೈತರಿಗೆ ಸಮಸ್ಯೆಗಳು ಎದುರಾಗುತ್ತಿದ್ದವು. ಮುಖ್ಯವಾಗಿ
ಕಾರ್ಮಿಕರ ಕೊರತೆ ಅನ್ನದಾತರನ್ನು ಕಾಡುತ್ತಿತ್ತು. ಸುಗ್ಗಿಯ ಕಾಲದಲ್ಲಿ ಕೃಷಿ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ. ಸಿಕ್ಕರೂ ಅಧಿ ಕ ಕೂಲಿ ಕೊಡಬೇಕು. ಕೈಯಿಂದ ಕಟಾವು ಮಾಡಿದ ಬಳಿಕ ಸೋಯಾಬಿನ್‌ ಬೆಳೆಯನ್ನು ರಾಶಿಗಾಗಿ ಯಂತ್ರಕ್ಕೆ ಹಾಕಬೇಕಾಗುತ್ತಿತ್ತು. ಕೂಲಿ ಮತ್ತು ಯಂತ್ರದ ವೆಚ್ಚ ರೈತರಿಗೆ ಆರ್ಥಿಕ ಲಾಭದಲ್ಲಿ ಕುಸಿಯುವಂತೆ ಮಾಡುತ್ತಿತ್ತು. ಆದರೆ, ಈಗ ಬೆಳೆಯ ಹೊಸ ತಳಿಯಿಂದ ಇವೆಲ್ಲವುಗಳನ್ನು ನೀಗಿಸಲು ಮತ್ತು ಸಮಯ, ಹಣ ಉಳಿತಾಯ ಮಾಡಲು ಸಹ ಸಾಧ್ಯವಾಗಲಿದೆ.

ಸೋಯಾಬಿನ್‌ ನೂತನ ಎಂಎಸಿಎಸ್‌-162 ತಳಿಯನ್ನು ಬಿತ್ತಿದರೆ ಎಕೆರೆಗೆ 10 ರಿಂದ 12 ಕ್ವಿಂಟಲ್‌ ಉತ್ಪಾದನೆ ಪಡೆಯಬಹುದು. ಇತರ ತಳಿಗಳು 1.5 ಅಡಿ ಎತ್ತರ ಇದ್ದರೆ, ಹೊಸ ತಳಿ 2 ಅಡಿ ಎತ್ತರ ಬೆಳೆಯುತ್ತದೆ. ಈ ತಳಿಗೆ ಕಾಯಿಗಳು ಗಿಡದ ಮೇಲೆ ಕಟ್ಟಿಕೊಳ್ಳುತ್ತವೆ. ಹಾಗಾಗಿ ಇತರ ಬೆಳೆಗಳಂತೆ ಸೋಯಾಬಿನ್‌ ಬೆಳೆಯನ್ನು ಸಹ ಯಂತ್ರದ ಮೂಲಕ ಕಟಾವು ಮಾಡಬಹುದು.

ಕಾರ್ಮಿಕರಿಂದ ಪ್ರತಿ ದಿನ 2 ಎಕರೆ ಕಟಾವು ಮಾಡಬಹುದು. ಆದರೆ, ಯಾಂತ್ರಿಕ ಕಟಾವುದಿಂದ 20ರಿಂದ 25 ಎಕರೆ ಬೆಳೆಯನ್ನು ಕಟಾವು ಮಾಡಿ ರಾಶಿ ಮಾಡಬಹುದಾಗಿದೆ. ಬೀದರ ಸಮೀಪದ ಜನವಾಡಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೂತನ ತಳಿ ಎಂಎಸಿಎಸ್‌ -162 ಬೀಜ ಲಭ್ಯವಿದ್ದು, ಹಲವು ರೈತರು ಖರೀದಿಗೆ ಮುಂದಾಗಿದ್ದಾರೆ. ಆಸಕ್ತ ರೈತರು ಹೊಸ ತಳಿಯ ಪ್ರಯೋಗ ಮಾಡಿ ಸಮಯ-ಹಣ ಉಳಿಸಬಹುದು

ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.