ಚೆನ್ನೈ-ಹೈದರಾಬಾದ್‌: ಅಗ್ರ ತಂಡಗಳ  ಪ್ರಶಸ್ತಿ ಕಾಳಗ


Team Udayavani, May 27, 2018, 6:00 AM IST

csk-sh-ipl.jpg

ವಾಂಖೇಡೆ: 2018ನೇ ಸಾಲಿನ ಐಪಿಎಲ್‌ ಪಂದ್ಯಾವಳಿ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಲೀಗ್‌ ಹಂತದ 2 ಅಗ್ರಸ್ಥಾನಿಗಳಾದ ಸನ್‌ರೈಸರ್ ಹೈದರಾಬಾದ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳೇ ಪ್ರಶಸ್ತಿ ಸುತ್ತಿನಲ್ಲಿ ಪಾರಮ್ಯ ಸಾಧಿಸಲು ಮುಂದಾಗಿರುವುದು ಈ ಬಾರಿಯ ವಿಶೇಷ.

ರವಿವಾರ ರಾತ್ರಿ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ಮಹೇಂದ್ರ ಸಿಂಗ್‌ ಧೋನಿ ಹಾಗೂ ಕೇನ್‌ ವಿಲಿಯಮ್ಸನ್‌ ನೇತೃತ್ವದ ತಂಡಗಳಿಂದ ದೊಡ್ಡ ಹೋರಾಟವನ್ನು ನಿರೀಕ್ಷಿಸಲಾಗಿದೆ. ಇದು ಇತ್ತಂಡಗಳ ನಡುವೆ ಈ ವರ್ಷ ನಡೆಯುತ್ತಿರುವ 4ನೇ ಮುಖಾಮುಖೀ. ಹಿಂದಿನ ಮೂರೂ ಪಂದ್ಯಗಳಲ್ಲಿ ಸ್ಪಷ್ಟ ಮೇಲುಗೈ ಸಾಧಿಸಿದ ಧೋನಿ ಪಡೆ ಹೈದರಾಬಾದ್‌ಗೆ ಸೋಲುಣಿಸಿ ಮೆರೆದಿತ್ತು. 

ಲೀಗ್‌ ಹಂತದ 2 ಪಂದ್ಯಗಳನ್ನು ಕ್ರಮವಾಗಿ 4 ರನ್‌ ಹಾಗೂ 8 ವಿಕೆಟ್‌ಗಳಿಂದ ಗೆದ್ದ ಚೆನ್ನೈ, ವಾಂಖೇಡೆಯಲ್ಲೇ ನಡೆದ ಮೊದಲ ಕ್ವಾಲಿಫೈಯರ್‌ ಕಾಳಗದಲ್ಲಿ 2 ವಿಕೆಟ್‌ ಅಂತರದ ನಂಬಲಾಗದ ಗೆಲುವು ಸಾಧಿಸಿತ್ತು. ಈ ಮೂರೂ ಸೋಲಿಗೆ ಕೊನೆಯ ಒಂದೇ ಏಟಿನಲ್ಲಿ ಸೇಡು ತೀರಿಸಿಕೊಳ್ಳಲು ಹೈದರಾಬಾದ್‌ಗೆ ಸಾಧ್ಯವೇ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಕುತೂಹಲ.

ಚೆನ್ನೈಗೆ 7ನೇ ಫೈನಲ್‌
ಎರಡು ವರ್ಷಗಳ ನಿಷೇಧ ಪೂರೈಸಿಕೊಂಡು ಬಂದ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಅದೇ ಹಳೆಯ ಚಾರ್ಮ್ ಉಳಿಸಿಕೊಂಡು ಬಂದದ್ದೊಂದು ಹೆಚ್ಚುಗಾರಿಕೆ. ಹೈದರಾಬಾದ್‌ನಂತೆ 9 ಜಯ ಸಾಧಿಸಿದ ಚೆನ್ನೈ ರನ್‌ರೇಟ್‌ನಲ್ಲಿ ಹಿಂದುಳಿದು ಲೀಗ್‌ ಹಂತದಲ್ಲಿ ದ್ವಿತೀಯ ಸ್ಥಾನದಲ್ಲಿ ಉಳಿಯಬೇಕಾಯಿತು. ಆದರೆ ಧೋನಿ ಪಡೆಯ ಸಾಧನೆಯೆಲ್ಲ ಟಾಪ್‌ ಕ್ಲಾಸ್‌ನಲ್ಲೇ ಇತ್ತು ಎಂಬುದು ಗಮನಾರ್ಹ. ಫೈನಲಿಸ್ಟ್‌ ಹೈದರಾಬಾದ್‌ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳನ್ನು ಗೆದ್ದದ್ದೇ ಇದಕ್ಕೆ ಸಾಕ್ಷಿ.

ಐಪಿಎಲ್‌ನಲ್ಲಿ ಅತೀ ಹೆಚ್ಚು 7 ಸಲ ಫೈನಲ್‌ ಕಂಡಿರುವ ತಂಡವೆಂಬ ಹೆಗ್ಗಳಿಕೆ ಹೊಂದಿರುವ ಚೆನ್ನೈ ಈವರೆಗೆ ಚಾಂಪಿಯನ್‌ ಆಗಿ ಮೂಡಿಬಂದದ್ದು 2 ಸಲ ಮಾತ್ರ. 2010ರಲ್ಲಿ ಮೊದಲ ಸಲ ಪ್ರಶಸ್ತಿ ಎತ್ತಿದ ಧೋನಿ ಪಡೆ ಮುಂದಿನ ವರ್ಷ ಇದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಸತತ 2 ಸಲ ಐಪಿಎಲ್‌ ಚಾಂಪಿಯನ್‌ ಎನಿಸಿಕೊಂಡ ಏಕೈಕ ತಂಡವೆಂಬುದು ಚೆನ್ನೈ ಪಾಲಿನ ಹೆಗ್ಗಳಿಕೆ. ಆದರೆ ಉಳಿದ 4 ಫೈನಲ್‌ಗ‌ಳಲ್ಲಿ ಸೋಲನುಭವಿಸಿದ್ದು ಧೋನಿ ಪಡೆಗೆ ಎದುರಾದ ದೊಡ್ಡ ಹಿನ್ನಡೆಯೇ ಆಗಿದೆ. 2011ರಲ್ಲಿ ಕೊನೆಯ ಸಲ ಚಾಂಪಿಯನ್‌ ಎನಿಸಿಕೊಂಡ ಬಳಿಕ 3 ಸಲ ಅದು ಫೈನಲ್‌ನಲ್ಲಿ ಎಡವಿದೆ.ಅಂದಹಾಗೆ ಐಪಿಎಲ್‌ ಫೈನಲ್‌ನಲ್ಲಿ ಚೆನ್ನೈ-ಹೈದರಾಬಾದ್‌ ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು!

2016ರ ಚಾಂಪಿಯನ್‌ ತಂಡ
2016ರ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ಕಾಣುತ್ತಿರುವ 2ನೇ ಐಪಿಎಲ್‌ ಫೈನಲ್‌ ಇದಾಗಿದೆ. ಅಂದು ಆರ್‌ಸಿಬಿಯನ್ನು 8 ರನ್ನುಗಳಿಂದ ಮಣಿಸಿದ ಡೇವಿಡ್‌ ವಾರ್ನರ್‌ ಬಳಗ ಮೊದಲ ಅವಕಾಶದಲ್ಲೇ ಚಾಂಪಿಯನ್‌ ಆಗಿ ಮೆರೆದಿತ್ತು. ಈ ಬಾರಿ ವಾರ್ನರ್‌ ಗೈರಲ್ಲಿ ನ್ಯೂಜಿಲ್ಯಾಂಡಿನ ಕೇನ್‌ ವಿಲಿಯಮ್ಸನ್‌ ಉತ್ತಮ ರೀತಿಯಲ್ಲೇ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಆದರೆ ಈ ವರ್ಷ ಚೆನ್ನೈ ವಿರುದ್ಧ ಆಡಿದ ಎಲ್ಲ 3 ಪಂದ್ಯಗಳಲ್ಲಿ ಎಡವಿದ್ದು ಹೈದರಾಬಾದ್‌ ಪಾಲಿಗೆ ಭಾರೀ ಹಿನ್ನಡೆಯೇ ಆಗಿದೆ.ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಗೆಲುವು ಇನ್ನೇನು ಹೈದರಾಬಾದ್‌ಗೆ ಒಲಿಯುವುದಿತ್ತು, ಆದರೆ ಆರಂಭಕಾರ ಫಾ ಡು ಪ್ಲೆಸಿಸ್‌ ಇದಕ್ಕೆ ಅಡ್ಡಿಯಾಗಿ ಪರಿಣಮಿಸಿದರು. 4 ದಿನಗಳ ಹಿಂದೆ ವಾಂಖೇಡೆಯಲ್ಲಿ ಕೈತಪ್ಪಿದ ಜಯ ರವಿವಾರ ರಾತ್ರಿ ಸನ್‌ರೈಸರ್ ಕೈ ಹಿಡಿದೀತೇ ಎಂಬುದೊಂದು ದೊಡ್ಡ ಪ್ರಶ್ನೆ.

ಚೆನ್ನೈ ಬ್ಯಾಟಿಂಗ್‌ ವರ್ಸಸ್‌ ಹೈದರಾಬಾದ್‌ ಬೌಲಿಂಗ್‌
ರವಿವಾರದ ಫೈನಲ್‌ ಚೆನ್ನೈ ಬ್ಯಾಟಿಂಗ್‌ ಹಾಗೂ ಹೈದರಾಬಾದ್‌ ತಂಡದ ಬೌಲಿಂಗ್‌ ಮೇಲಾಟವಾಗಿ ಪರಿಣಮಿಸುವ ಸಾಧ್ಯತೆ ಇದೆ. ಹೈದರಾಬಾದ್‌ಗೆ ಹೋಲಿಸಿದರೆ ಚೆನ್ನೈ ತಂಡದ ಬ್ಯಾಟಿಂಗ್‌ ಹೆಚ್ಚು ಬಲಿಷ್ಠ. ಡು ಪ್ಲೆಸಿಸ್‌, ವಾಟ್ಸನ್‌, ರೈನಾ, ಧೋನಿ, ರಾಯುಡು, ಬ್ರಾವೊ ಅವರೆಲ್ಲ ಬ್ಯಾಟಿಂಗ್‌ ವಿಭಾಗಕ್ಕೆ ಶಕ್ತಿ ತುಂಬುತ್ತಲೇ ಬಂದಿದ್ದಾರೆ. ಬೌಲಿಂಗಿನಲ್ಲಿ ಎನ್‌ಗಿಡಿಯಷ್ಟೇ ಹೆಚ್ಚು ಅಪಾಯಕಾರಿ.

ಆದರೆ ಹೈದರಾಬಾದ್‌ ಬ್ಯಾಟಿಂಗ್‌ ಧವನ್‌, ವಿಲಿಯಮ್ಸನ್‌ ಅವರಿಬ್ಬರನ್ನೇ ಹೆಚ್ಚು ಅವಲಂಬಿಸಿದೆ. ಈ 2 ವಿಕೆಟ್‌ ಬೇಗ ಬಿದ್ದರೆ ತಂಡಕ್ಕೆ ಗಂಡಾಂತರ ತಪ್ಪಿದ್ದಲ್ಲ. ಕೆಕೆಆರ್‌ ವಿರುದ್ಧ ರಶೀದ್‌ ಖಾನ್‌ ಸಿಡಿಯದೇ ಹೋಗಿದ್ದರೆ ಹೈದರಾಬಾದ್‌ ಈ ಹಂತಕ್ಕೆ ಬರುವುದು ಅನುಮಾನವಿತ್ತು. ಹೀಗಾಗಿ ಹೈದರಾಬಾದ್‌ ಮತ್ತೂಮ್ಮೆ ಬೌಲಿಂಗ್‌ ಬಲವನ್ನೇ ಹೆಚ್ಚು ನಂಬಿಕೊಳ್ಳಬೇಕಿದೆ. ಭುವಿ, ರಶೀದ್‌, ಕೌಲ್‌, ಶಕಿಬ್‌, ಬ್ರಾತ್‌ವೇಟ್‌ ಅವರೆಲ್ಲ ಹೆಚ್ಚು ಘಾತಕವಾಗಬಲ್ಲರು. ಖಲೀಲ್‌ ಅಹ್ಮದ್‌ ಬದಲು ಮತ್ತೆ ಸಂದೀಪ್‌ ಶರ್ಮ ಅವಕಾಶ ಪಡೆಯುವ ಸಾಧ್ಯತೆ ಇದೆ.

ಇಂದು ಫೈನಲ್‌
ಚೆನ್ನೈ-ಹೈದರಾಬಾದ್‌
ಸ್ಥಳ: ಮುಂಬಯಿ
ಆರಂಭ: 7.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್, ಸ್ಟಾರ್‌ ಸುವರ್ಣ ಪ್ಲಸ್‌

ಐಪಿಎಲ್‌ ಚಾಂಪಿಯನ್ಸ್‌
ವರ್ಷ    ಚಾಂಪಿಯನ್‌    ರನ್ನರ್‌ ಅಪ್‌    ಅಂತರ

2008    ರಾಜಸ್ಥಾನ್‌    ಚೆನ್ನೈ    3 ವಿಕೆಟ್‌
2009    ಡೆಕ್ಕನ್‌    ಆರ್‌ಸಿಬಿ    6 ರನ್‌
2010    ಚೆನ್ನೈ    ಮುಂಬೈ    22 ರನ್‌
2011    ಚೆನ್ನೈ    ಆರ್‌ಸಿಬಿ    58 ರನ್‌
2012    ಕೆಕೆಆರ್‌    ಚೆನ್ನೈ    5 ವಿಕೆಟ್‌
2013    ಮುಂಬೈ    ಚೆನ್ನೈ    23 ರನ್‌
2014    ಕೆಕೆಆರ್‌    ಪಂಜಾಬ್‌    3 ವಿಕೆಟ್‌
2015    ಮುಂಬೈ    ಚೆನ್ನೈ    41 ರನ್‌
2016    ಹೈದರಾಬಾದ್‌    ಆರ್‌ಸಿಬಿ    8 ರನ್‌
2017    ಮುಂಬೈ    ಪುಣೆ    1 ರನ್‌

ಚೆನ್ನೈ ಸಾಗಿ ಬಂದ ಹಾದಿ
ಎದುರಾಳಿ    ಸ್ಥಳ    ಫ‌ಲಿತಾಂಶ

1. ಮುಂಬೈ    ಮುಂಬಯಿ    1 ವಿಕೆಟ್‌ ಜಯ
2. ಕೆಕೆಆರ್‌    ಚೆನ್ನೈ    5 ವಿಕೆಟ್‌ ಜಯ
3. ಪಂಜಾಬ್‌    ಮೊಹಾಲಿ    4 ರನ್‌ ಸೋಲು
4. ರಾಜಸ್ಥಾನ್‌    ಪುಣೆ    64 ರನ್‌ ಜಯ
5. ಹೈದರಾಬಾದ್‌    ಹೈದರಾಬಾದ್‌    4 ರನ್‌ ಜಯ
6. ಆರ್‌ಸಿಬಿ    ಬೆಂಗಳೂರು    5 ವಿಕೆಟ್‌ ಜಯ
7. ಮುಂಬೈ    ಪುಣೆ    8 ವಿಕೆಟ್‌ ಸೋಲು
8. ಡೆಲ್ಲಿ    ಪುಣೆ    13 ರನ್‌ ಜಯ
9. ಕೆಕೆಆರ್‌    ಕೋಲ್ಕತಾ    6 ವಿಕೆಟ್‌ ಸೋಲು
10. ಆರ್‌ಸಿಬಿ    ಪುಣೆ    6 ವಿಕೆಟ್‌ ಜಯ
11. ರಾಜಸ್ಥಾನ್‌    ಜೈಪುರ    4 ವಿಕೆಟ್‌ ಸೋಲು
12. ಹೈದರಾಬಾದ್‌    ಪುಣೆ    8 ವಿಕೆಟ್‌ ಜಯ
13. ಡೆಲ್ಲಿ    ಹೊಸದಿಲ್ಲಿ    34 ರನ್‌ ಸೋಲು
14. ಪಂಜಾಬ್‌    ಪುಣೆ    5 ವಿಕೆಟ್‌ ಜಯ
15. ಹೈದರಾಬಾದ್‌    ಮುಂಬೈ    2 ವಿಕೆಟ್‌ ಜಯ

ಹೈದರಾಬಾದ್‌ ಸಾಗಿ ಬಂದ ಹಾದಿ
ಎದುರಾಳಿ    ಸ್ಥಳ    ಫ‌ಲಿತಾಂಶ

1. ರಾಜಸ್ಥಾನ್‌    ಹೈದರಾಬಾದ್‌    9 ವಿಕೆಟ್‌ ಜಯ
2. ಮುಂಬೈ    ಹೈದರಾಬಾದ್‌    1 ವಿಕೆಟ್‌ ಜಯ
3. ಕೆಕೆಆರ್‌    ಕೋಲ್ಕತಾ    6 ವಿಕೆಟ್‌ ಜಯ
4. ಪಂಜಾಬ್‌    ಮೊಹಾಲಿ    15 ರನ್‌ ಸೋಲು
5. ಚೆನ್ನೈ    ಹೈದರಾಬಾದ್‌    4 ರನ್‌ ಸೋಲು
6. ಮುಂಬೈ    ಮುಂಬಯಿ    31 ರನ್‌ ಜಯ
7. ಪಂಜಾಬ್‌    ಹೈದರಾಬಾದ್‌    13 ರನ್‌ ಜಯ
8. ರಾಜಸ್ಥಾನ್‌    ಜೈಪುರ    11 ರನ್‌ ಜಯ
9. ಡೆಲ್ಲಿ    ಹೈದರಾಬಾದ್‌    7 ವಿಕೆಟ್‌ ಜಯ
10. ಆರ್‌ಸಿಬಿ    ಹೈದರಾಬಾದ್‌    5 ವಿಕೆಟ್‌ ಜಯ
11. ಡೆಲ್ಲಿ    ಹೊಸದಿಲ್ಲಿ    9 ವಿಕೆಟ್‌ ಜಯ
12. ಚೆನ್ನೈ    ಪುಣೆ    8 ವಿಕೆಟ್‌ ಸೋಲು
13. ಆರ್‌ಸಿಬಿ    ಬೆಂಗಳೂರು    14 ರನ್‌ ಸೋಲು
14. ಕೆಕೆಆರ್‌    ಹೈದರಾಬಾದ್‌    5 ವಿಕೆಟ್‌ ಸೋಲು
15. ಚೆನ್ನೈ    ಮುಂಬಯಿ    2 ವಿಕೆಟ್‌ ಸೋಲು
16. ಕೆಕೆಆರ್‌    ಕೋಲ್ಕತಾ    14 ರನ್‌ ಜಯ

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.