ಸಿದ್ಧಾಂತ ತಪ್ಪೆಂದು ಹೇಳಿ
Team Udayavani, May 31, 2018, 6:00 AM IST
ನವದೆಹಲಿ: ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ಜೂ.7 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬೇಡವೆಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಕಾಂಗ್ರೆಸ್ನ ಹಿರಿಯ ಧುರೀಣರು ಬುಧವಾರವೂ ಮನವಿ ಮಾಡಿದ್ದಾರೆ.
ಆದರೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿ, ಆಹ್ವಾನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಾವ ಕಾರಣಕ್ಕಾಗಿ ಆರ್ಎಸ್ಎಸ್ ಸಿದ್ಧಾಂತ ಒಪ್ಪಲಾಗುವುದಿಲ್ಲ ಎನ್ನುವುದನ್ನು ತಿಳಿ ಹೇಳಿ ಬನ್ನಿ ಎಂದಿದ್ದಾರೆ. ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕ ಅಧಿರ್ ಚೌಧರಿ, ಆಂಧ್ರಪ್ರದೇಶದ ವಿ.ಹನುಮಂತ ರಾವ್, ಕಾರ್ಯಕ್ರಮದಿಂದ ದೂರ ಉಳಿಯುವಂತೆ ಕೋರಿದ್ದಾರೆ.