ನಾಯಕತ್ವ ನೀಡಿಕೆಗೆ ವಿಶ್ವ ಭಾರತ ದಕ್ಷಿಣ ಆಫ್ರಿಕಾದತ್ತ ನೋಡುತ್ತಿದೆ
Team Udayavani, Jun 8, 2018, 7:00 AM IST
ಪೀಟರ್ಮಾರಿಟ್ಜ್ ಬರ್ಗ್: ನಾಯಕತ್ವ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವವೇ ದಕ್ಷಿಣ ಆಫ್ರಿಕ ಮತ್ತು ಭಾರತದತ್ತ ನೋಡುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಅನ್ಯಾಯ ಮತ್ತು ತಾರತಮ್ಯದ ವಿರುದ್ಧ ಹೋರಾಟ ನಡೆಸುವಲ್ಲಿ ದಕ್ಷಿಣ ಆಫ್ರಿಕಾ ನಾಯಕ ನೆಲ್ಸನ್ ಮಂಡೇಲಾ ಮತ್ತು ಮಹಾತ್ಮಾ ಗಾಂಧಿ ನಡೆಸಿದ ಹೋರಾಟ ಪ್ರಮುಖವಾದದ್ದು ಎಂದು ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಜೂ.7 1893ರಂದು ಬಿಳಿಯರಿಗೆ ಮೀಸಲಾಗಿ ಇರಿಸಿದ್ದ ರೈಲ್ವೆ ಬೋಗಿಯಿಂದ ಹೊರಗೆ ಎಸೆಯಲ್ಪಟ್ಟ ದಿನದ 125ನೇ ವರ್ಷಾಚರಣೆ ಪ್ರಯುಕ್ತ ದಕ್ಷಿಣ ಆಫ್ರಿಕದ ಪೀಟರ್ಮಾರಿಟ್ಜ್ಬರ್ಗ್ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸುಷ್ಮಾ ಸ್ವರಾಜ್ ದಿಕ್ಸೂಚಿ ಭಾಷಣ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಪೆಂಟ್ರಿಕ್ ನಿಂದ ಪೀಟರ್ಮಾರಿಟ್lಬರ್ಗ್ಗೆ ರೈಲಿನಲ್ಲೇ ಪ್ರಯಾಣ ಬೆಳೆಸಿದ್ದಾರೆ. 125 ವರ್ಷಗಳ ಹಿಂದೆ ಬಿಳಿಯರಿಗೆಂದೇ ಮೀಸಲಾಗಿ ಇರಿಸಿದ್ದ ಬೋಗಿ ಇದಾಗಿತ್ತು.
ಮಂಡೇಲಾ ಮತ್ತು ಮಹಾತ್ಮಾ ಗಾಂಧಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಆಶಾಭಾವನೆ ನೀಡಿದ ನಾಯಕರಾಗಿದ್ದಾರೆ. ಪೀಟರ್ಮಾರಿಟ್ಜ್ ಬರ್ಗ್ನಿಂದ ಇಬ್ಬರು ಸಮರ್ಥ ನಾಯಕರು ಹೊರ ಹೊಮ್ಮುವಂತಾಯಿತು. 1839ರ ಘಟನೆ ಮಹಾತ್ಮಾ ಗಾಂಧಿಯವರಿಗೆ ತಾರತಮ್ಯದ ವಿರುದ್ಧದ ಹೋರಾಟಕ್ಕೆ ದಾರಿ ಮಾಡಿಕೊಟ್ಟಿತು ಎಂದು ಸುಷ್ಮಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ