ಮಾನವ ಕಳ್ಳಸಾಗಣೆ ತಡೆಯಿರಿ
Team Udayavani, Jun 13, 2018, 11:29 AM IST
ಹರಿಹರ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ, ಪೊಲೀಸ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಾನವ ಕಳ್ಳಸಾಗಣೆ ತಡೆಯುವ ಹಾಗೂ ರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ನಗರದಲ್ಲಿ ಮಂಗಳವಾರ ಜಾಗೃತಿ ಜಾಥಾ ನಡೆಸಲಾಯಿತು.
ಎಂಆರ್ಬಿ ಶಾಲೆ ಆವರಣದಿಂದ ಆರಂಭವಾದ ಜಾಥಾಕ್ಕೆ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ವೈ.ಕೆ. ಬೇನಾಳ ಚಾಲನೆ ನೀಡಿದರು. ಜಾಥಾ ಹಳೆ ಪಿ.ಬಿ ರಸ್ತೆ, ಗಾಂಧಿ ವೃತ್ತ, ಮುಖ್ಯ ರಸ್ತೆ, ಶಿವಮೊಗ್ಗ ವೃತ್ತ, ಶಿವಮೊಗ್ಗ ರಸ್ತೆ, ಶೋಭಾ ಟಾಕೀಸ್ ವೃತ್ತ ಮಾರ್ಗವಾಗಿ ಸಾಗಿತು.
ಜಾಥಾದಲ್ಲಿ ಪಾಲ್ಗೊಂಡಿದ್ದ ಮಕ್ಕಳು, ಮಾನವ ಕಳ್ಳಸಾಗಣೆ ಬೇಡ, ಮಕ್ಕಳು ಬಾಲಕಾರ್ಮಿಕರಾಗಬಾರದು, ಬಾಲ್ಯ ಮತ್ತು ಶಿಕ್ಷಣ ಮಕ್ಕಳ ಹಕ್ಕು ಎಂದು ಘೋಷಣೆ ಕೂಗುತ್ತ ಘೋಷ ವಾಕ್ಯಗಳ ಫಲಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.
ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯಗಳ ನ್ಯಾಯಾಧಿಧೀಶರಾದ ಬೆಣ್ಣಿಕಲ್ ಸುಮಲತಾ, ಅವಿನಾಶ್ ಚಿಂದು ಎಚ್., ವಕೀಲರ ಸಂಘದ ಅಧ್ಯಕ್ಷ ಬಸವರಾಜ್ ಓಂಕಾರಿ, ತಹಶೀಲ್ದಾರ್ ರಕ್ಷಿತ್ ಕೆ.ಆರ್., ಎಪಿಪಿಗಳಾದ ಶಂಷೀರ್ ಅಲಿ ಖಾನ್, ಎಂ.ಎಂ ಬಸವರಾಜ್, ಎಜಿಬಿ ಸಿ.ಚನ್ನಪ್ಪ, ಬಿಇಒ ನರಸಿಂಹಪ್ಪ ಡಿ., ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಸಿಡಿಪಿಒ ರಾಮಲಿಂಗಪ್ಪ ಎನ್. ಅರಳಗುಪ್ಪಿ, ಕಾರ್ಮಿಕ ನಿರೀಕ್ಷಕ ಟಿ.ರಾಜಪ್ಪ, ಎಂಆರ್ಬಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್. ಕೃಷ್ಣಮೂರ್ತಿ ಶ್ರೇಷ್ಠಿ, ಶಿಕ್ಷಕ ಅರುಣ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ