ಶಾಂತಿವನದಲ್ಲಿ ಸಂಗೀತ ಆಲಿಸಿದ ಮಾಜಿ ಸಿಎಂ
Team Udayavani, Jun 26, 2018, 3:05 PM IST
ಬೆಳ್ತಂಗಡಿ: ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಸಂಗೀತ ಆಲಿಸಿ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಂತೆ ಕಂಡುಬಂದರು.
ಅಂತಾರಾಷ್ಟ್ರೀಯ ಕಲಾವಿದೆ ಸಹನಾ ಸಾಮ್ರಾಜ್ ಅವರ ಗಾಯನ ಆಯೋಜಿಸಲಾಗಿತ್ತು. ಸಂಜೆ ವಾಕಿಂಗ್ ಮುಗಿಸಿ ಸಿದ್ದರಾಮಯ್ಯ ಕಛೇರಿ ನಡೆಯುತ್ತಿದ್ದ ಸಭಾಂಗಣಕ್ಕೆ ಬಂದು ಸಂಜೆ 6ರಿಂದ 7 ಗಂಟೆಯ ತನಕ ಸಂಗೀತ ಆಲಿಸಿದರು.
ಕಲಾವಿದೆ ಸಹನಾ ಸಾಮ್ರಾಜ್ ಅವರೂ ಶಾಂತಿವನಕ್ಕೆ ಚಿಕಿತ್ಸೆಗಾಗಿ ಆಗಮಿಸಿದ್ದು, ಅಲ್ಲೇ ಸಂಗೀತ ಕಛೇರಿ ನಡೆಸಿಕೊಟ್ಟರು. ತಮಿಳು ಮೂಲ ದವರಾದರೂ ಕನ್ನಡ ಕೃತಿಗಳನ್ನು ಹಾಡಿ ಮೆಚ್ಚುಗೆಗೆ ಪಾತ್ರರಾದರು. ಬಳಿಕ ಶಾಂತಿವನ ಟ್ರಸ್ಟ್ ವತಿಯಿಂದ ಸಿದ್ದರಾಮಯ್ಯ ಸಹನಾ ಮತ್ತು ಸಾಥ್ ನೀಡಿದ ನಿಕ್ಷಿತ್ ಪುತ್ತೂರು ಹಾಗೂ ವಿಶ್ವಜಿತ್ ಅವರನ್ನು ಗೌರವಿಸಿದರು.