ಹಜಾರೆ ಹತ್ಯೆ ಸಂಚು: 9 ವರ್ಷದ‌ ಬಳಿಕವೂ ಮುಗಿಯದ ತನಿಖೆ 


Team Udayavani, Jun 27, 2018, 12:00 PM IST

anna-hazare.jpg

ಉಸ್ಮಾನಾಬಾದ್‌: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ರಾಜ್ಯದ ಮಾಜಿ ಸಚಿವ ಪದಮ್‌ಸಿನ್ಹ ಪಾಟೀಲ್‌ ವಿರುದ್ಧ ಸಲ್ಲಿಸಿದ್ದ  ಹತ್ಯೆ ಸಂಚಿನ ದೂರಿನ ಕುರಿತು ಮಹಾರಾಷ್ಟ್ರ ಸಿಐಡಿ 9 ವರ್ಷಗಳ ಬಳಿಕ ಈಗಲೂ ತನಿಖೆ ನಡೆಸುತ್ತಿದೆಯೆಂದು ಆರ್‌ಟಿಐ ಪ್ರಶ್ನೆಗೆ ನೀಡಲಾದ 
ಉತ್ತರದಲ್ಲಿ ತಿಳಿಸಲಾಗಿದೆ.

ತನ್ನನ್ನು ಕೊಲ್ಲಲು ಪರಸ್‌ಮಾಲ್‌ ಜೈನ್‌ ಎಂಬಾತನಿಗೆ ಪಾಟೀಲ್‌ ಹಾಗೂ ಇತರ ನಾಲ್ವರು ಸುಪಾರಿ ನೀಡಿದ್ದಾರೆಂದು ಹಜಾರೆ 2009ರ ಸೆಪ್ಟಂಬರ್‌ನಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪಾಟೀಲ್‌ ಅವರನ್ನು ಬಂಧಿಸಲಾಗಿತ್ತು . ಆದರೆ ಅನಂತರ ಕೋರ್ಟೊಂದು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಅಹ್ಮದ್‌ನಗರ್‌ ಜಿಲ್ಲೆಯ ಪಾರ್ನೆರ್‌ ಪೊಲೀಸ್‌ ಠಾಣೆಯಿಂದ ಅನಂತರ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದ ಸಿಐಡಿ, ಇನ್ನೂ ಪ್ರಕರಣದಲ್ಲಿ ಆರೋಪಪಟ್ಟಿಯನ್ನು ದಾಖಲಿಸಿಲ್ಲವೆಂದು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಡಿ ಕೇಳಲಾದ ಪ್ರಶ್ನೆಗೆ ನೀಡಲಾದ ಉತ್ತರದಲ್ಲಿ ತಿಳಿಸಲಾಗಿದೆ.

ಪದಮ್‌ಸಿನ್ಹ ಪಾಟೀಲ್‌ ಅವರು ರಾಜಕೀಯ ವೈಷಮ್ಯದಿಂದ  ಕಾಂಗ್ರೆಸ್‌ ನಾಯಕ ಪವನ್‌ರಾಜೆ ನಿಂಬಾಳ್ಕರ್‌ ಅವರನ್ನು ನವೀ ಮುಂಬಯಿಯ ಕಲಂಬೋಲಿಯಲ್ಲಿ ಹತ್ಯೆಗೈಯುವುದಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಈಗಾಗಲೇ ವಿಚಾರಣೆ ಎದುರಿಸುತ್ತಿದ್ದಾರೆ. ಪವನ್‌ರಾಜೆ ನಿಂಬಾಳ್ಕರ್‌ ಮೇಲೆ ಗುಂಡು ಹಾರಿಸಿದ ಆರೋಪಕ್ಕೊಳಗಾಗಿದ್ದ ಪರಸ್‌ಮಾಲ್‌ ಜೈನ್‌ ಈ ಹಿಂದೆ ಮ್ಯಾಜಿಸ್ಟ್ರೇಟ್‌ ಓರ್ವರಿಗೆ ನೀಡಿದ ಹೇಳಿಕೆಯಲ್ಲಿ  ನಿಂಬಾಳ್ಕರ್‌ ಮತ್ತು ಹಜಾರೆ ಅವರನ್ನು ಹತ್ಯೆಗೈಯುವುದಕ್ಕೆ ಪಾಟೀಲ್‌ ಅವರು ತನಗೆ 30 ಲಕ್ಷ ರೂ.ಗಳನ್ನು ನೀಡಿದ್ದಾಗಿ ಹೇಳಿದ್ದ. ಆದರೆ ಹಜಾರೆ ಅವರನ್ನು ಕೊಲ್ಲುವುದಕ್ಕೆ ಹಣ ತೆಗೆದುಕೊಳ್ಳಲು ತಾನು ನಿರಾಕರಿಸಿದ್ದಾಗಿ ಕೂಡ ಜೈನ್‌ ತಿಳಿಸಿದ್ದ.

ಹಜಾರೆ ಅವರು ದಾಖಲಿಸಿದ ದೂರಿನ ಸ್ಥಿತಿಗತಿ ತಿಳಿಯುವುದಕ್ಕಾಗಿ ನಿಂಬಾಳ್ಕರ್‌ ಅವರ ಪುತ್ರ ಜೈರಾಜೆ ನಿಂಬಾಳ್ಕರ್‌ ಅವರು ಈಚೆಗೆ ಆರ್‌ಟಿಐ ಮೂಲಕ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಔರಂಗಾಬಾದ್‌ನ ಸಿಐಡಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿ.ಜೆ.ಕಾಂಬ್ಳೆ ಅವರು ಜೂ. 8ರಂದು ನೀಡಿದ ಉತ್ತರದಲ್ಲಿ ತನಿಖೆ ಈಗಲೂ ಸಾಗಿದೆ ಮತ್ತು ಈತನಕ ಆರೋಪಪಟ್ಟಿಯನ್ನು ದಾಖಲಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

ಈ ಮುನ್ನ ಪವನ್‌ರಾಜೆ ನಿಂಬಾಳ್ಕರ್‌ ಅವರ ಪತ್ನಿ ಆನಂದಿದೇವಿ ಅವರು ತನ್ನ ಪತಿಯ ಹತ್ಯೆಗೆ ಸಂಬಂಧಿಸಿ ಹಜಾರೆ ಅವರನ್ನು ಪ್ರಾಸಿಕ್ಯೂಶನ್‌ ಸಾಕ್ಷಿಯಾಗಿ ವಿಚಾರಣೆ ನಡೆಸುವುದಕ್ಕೆ ಸಿಬಿಐಗೆ ಅನುಮತಿ ನಿರಾಕರಿಸಿದ ಸೆಷನ್ಸ್‌ ಕೋರ್ಟು ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟು ಈ ಅರ್ಜಿಯ ವಿಚಾರಣೆಯನ್ನು ಜೂ. 27ಕ್ಕೆ ನಿಗದಿಗೊಳಿಸಿತ್ತು ಮತ್ತು ಆರೋಪಿಗಳ ಅಂತಿಮ ಹೇಳಿಕೆಗಳನ್ನು ದಾಖಲಿಸುವುದನ್ನು ಅಲ್ಲಿಯ ತನಕ ಮುಂದೂಡುವಂತೆ ವಿಚಾರಣಾ ಕೋರ್ಟಿಗೆ ಆದೇಶಿಸಿತ್ತು.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.