ರಸ್ತೆ ಹಾಳು ಮಾಡಿದ ಜಲಮಂಡಳಿ
Team Udayavani, Jul 7, 2018, 2:15 PM IST
ಕೆ.ಆರ್.ಪುರ: ಕಾವೇರಿ ನೀರಿನ ಪೈಪ್ಲೈನ್ ಅಳವಡಿಸಲು ದೇವಸಂದ್ರ ವಾರ್ಡ್ನ ಟೆಂಟ್ ಮುಖ್ಯ ರಸ್ತೆ ಅಗೆದ ಜಲಮಂಡಳಿ, ಗುಂಡಿಗಳನ್ನು ಸರಿಯಾಗಿ ಮುಚ್ಚದ ಕಾರಣ ವಾಹನ ಸವಾರರು ರಸ್ತೆಯಲ್ಲಿ ಸರ್ಕಸ್ ಮಾಡುವಂತಾಗಿದೆ.
ದೇವಸಂದ್ರ ವಾರ್ಡ್ನ ಚಿಕ್ಕ ವಿನಾಯಕ ದೇವಸ್ಥಾನದಿಂದ ಟೆಂಟ್ ರಸ್ತೆವರೆಗೆ ಹಾಗೂ ಸುತ್ತಮುತ್ತಲ ಬಡಾವಣೆಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಸಂಬಂಧ ಪೈಪ್ಲೈನ್ ಅಳವಡಿಸಲು ರಸ್ತೆ ನಡುವೆ ಗುಂಡಿ ತೆಗೆಯಲಾಗಿತ್ತು. ಪೈಪ್ಗ್ಳನ್ನು ಅಳವಡಿಸಿ ಗುಂಡಿ ಮುಚ್ಚಿದ ಬಳಿಕ ಆ ಸ್ಥಳವನ್ನು ಸಮತಟ್ಟು ಮಾಡುವ ಗೋಜಿಗೆ ಜಲಮಂಡಳಿ ಹೋಗಿಲ್ಲ. ಇದರಿಂದ ಸ್ಥಳೀಯ ನಿವಾಸಿಗಳು ತೊದರೆ ಅನುಭವಿಸುತ್ತಿದ್ದಾರೆ.
ಮೊದಲು ಉತ್ತಮವಾಗಿದ್ದ ರಸ್ತೆಯನ್ನು ಜಲಮಂಡಳಿ ಹಾಳು ಮಾಡಿದೆ. ಈಗ ಹದಗೆಟ್ಟ ರಸ್ತೆಯಲ್ಲಿ ಧೂಳು ವ್ಯಾಪಕವಾಗಿದೆ. ಅಲ್ಲದೆ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವುದು ಸಾಮಾನ್ಯವಾಗಿದೆ. ಈ ಬಗ್ಗೆ ಪಾಲಿಕೆ ಸದಸ್ಯರು ಮತ್ತು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಪಾಲಿಕೆ ಧಿಕಾರಿಗಳು, ಸ್ಥಳೀಯ ಕಾರ್ಪೊರೇಟರ್ ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆಯನ್ನು ದುರಸ್ತಿಗೆ ಗಮನಹರಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ